ಬೆಳ್ತಂಗಡಿ: 6 ಗ್ರಾ.ಪಂ.ಗಳಲ್ಲಿ ಪಿಡಿಒಗಳೇ ಇಲ್ಲ

ತಾ.ಪಂ. ಕಚೇರಿಯೊಂದರಲ್ಲೇ 18 ಖಾಯಂ ಹುದ್ದೆ ಖಾಲಿ: ಅಭಿವೃದ್ಧಿಗೆ ಅಡ್ಡಿ

Team Udayavani, Jan 21, 2020, 5:54 AM IST

sad-29

ಬೆಳ್ತಂಗಡಿ: ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳು ಭರ್ತಿಯಾಗದೆ ಖಾಲಿಯಾಗಿರುವ ಪರಿಣಾಮ ಸರಕಾರದ ಯೋಜನೆಗಳು ಗ್ರಾಮೀಣ ಭಾಗಕ್ಕೆ ಸಮರ್ಪಕ ವಾಗಿ ತಲುಪುವಲ್ಲಿ ಬಹುತೇಕ ವಿಳಂಬವಾಗುತ್ತಿವೆ. ಇದರ ಜತೆಗೆ ಪ್ರಭಾರಿ ನೆಲೆಯಲ್ಲಿರುವ ಪಿಡಿಒಗಳು ಒತ್ತಡದ ನಡುವೆ ಕೆಲಸ ಮಾಡುತ್ತಿದ್ದು, ಅವಧಿಯೊಳಗೆ ಸೇವಾಕಾರ್ಯ ಲಭ್ಯವಾಗದೆ ಗ್ರಾಮೀಣ ಭಾಗದ ಜನರು ಗ್ರಾ.ಪಂ.ಗೆ ಅಲೆದಾಡುವಂತಾಗಿದೆ.

ಗ್ರಾ.ಪಂ.ಗಳ ಅಭಿವೃದ್ಧಿ ನೆಲೆಯಲ್ಲಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಬಹು ಮುಖ್ಯ ಪಾತ್ರ ವಹಿಸಿದ್ದು, ಬೆಳ್ತಂಗಡಿ ತಾಲೂಕಿನ 48 ಗ್ರಾ.ಪಂ.ಗಳ ಪೈಕಿ 42 ಕಡೆಗಳಲ್ಲಷ್ಟೇ ಖಾಯಂ ಪಿಡಿಒಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 6 ಗ್ರಾ.ಪಂ.ಗಳಿಗೆ ಪ್ರಭಾರ ನೆಲೆಯಲ್ಲಿ ಸಮೀಪದ ಗ್ರಾ.ಪಂ.ಗಳ ಪಿಡಿಒಗಳನ್ನು ನೇಮಿಸಲಾಗಿದೆ.

ಇತ್ತ ಆರೋಗ್ಯ ಸಮಸ್ಯೆಯಾದಲ್ಲಿ, ಸಭೆಗಳಿಗೆ ಹಾಜರಾಗಬೇಕಿದ್ದಾಗ ಅಥವಾ ಸರಕಾರಿ ರಜೆ ಬಂದಾಗ ವಾರದಲ್ಲಿ ಮೂರು ದಿನ ಪಿಡಿಒಗಳು ಲಭ್ಯವಾಗುವುದು ಕಷ್ಟ. ಪ್ರಭಾರ ಪಿಡಿಒಗಳಿಗೆ ತಮ್ಮ ಖಾಯಂ ಪಂಚಾಯತ್‌ ಕೆಲಸವೇ ಬೆಟ್ಟದಷ್ಟಿರುತ್ತದೆ. ಬೆಳ್ತಂಗಡಿ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಗಳು ವಿಸ್ತಾರವಾಗಿರುವುದರಿಂದ ಸರಕಾರದ ಉದ್ಯೋಗ ಖಾತರಿ, ಹಣಕಾಸು ಯೋಜನೆ ಅನುಷ್ಠಾನ ಸಹಿತ ಇತರ ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗಿರುವುದರಿಂದ ಸರಕಾರ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ.

48 ಮಂದಿ ನಿಯೋಜನೆ
ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಒಟ್ಟು 48 ಗ್ರಾ.ಪಂ.ಗಳ ಪೈಕಿ 42 ಅಭಿವೃದ್ಧಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವುಗಳಲ್ಲಿ ಅರಸಿನಮಕ್ಕಿ, ಮಚ್ಚಿನ, ಬಂದಾರು, ಮಿತ್ತಬಾಗಿಲು, ಉಜಿರೆ ಹಾಗೂ ಲಾೖಲ – ಈ 6 ಗ್ರಾ.ಪಂ.ಗಳಲ್ಲಿ ಪಿಡಿಒ ಪ್ರಭಾರ ಹುದ್ದೆಯಲ್ಲಿ ನಿಯೋಜಿಸಲಾಗಿದೆ.

12 ಗ್ರಾ.ಪಂ. ಕಾಯದರ್ಶಿಗಳು
ಗ್ರಾ.ಪಂ.ಗಳ ಜನಸಂಖ್ಯೆ ಹಾಗೂ ವಿಸ್ತೀರ್ಣದ ಆಧಾರದಲ್ಲಿ ಗ್ರೇಡ್‌ 1, ಗ್ರೇಡ್‌ 2 ಗ್ರಾ.ಪಂ.ಗಳೆಂದು ಗುರುತಿಸಲಾಗಿದೆ. ಈ ಪೈಕಿ ಗ್ರೇಡ್‌ 1 ಗ್ರಾ.ಪಂ.ಗಳಲ್ಲಿ ಪಿಡಿಒಗಳ ಜತೆ ಕಾರ್ಯದರ್ಶಿಗಳು ಕರ್ತವ್ಯ ನಿರ್ವಹಿಸಬಹುದಾಗಿದ್ದು, ಆದರೆ ಪ್ರಸಕ್ತ ಬೆಳ್ತಂಗಡಿಯಲ್ಲಿ 9 ಗ್ರೇಡ್‌-1 ಆಗಿದ್ದು, 39 ಗ್ರೇಡ್‌-2ಗೆ ಸೇರಿವೆ. ಗ್ರೇಡ್‌-1ರಲ್ಲಿ 8 ಕಾರ್ಯದರ್ಶಿಗಳಿದ್ದು, 1 ಹುದ್ದೆ ಖಾಲಿ ಇದೆ. ಗ್ರೇಡ್‌-2ರಲ್ಲಿ 28 ಕಾರ್ಯದರ್ಶಿಗಳಿದ್ದು 11 ಹುದ್ದೆಗಳು ಖಾಲಿ ಇವೆ. ಈ ನಡುವೆ 7 ಮಂದಿ ಗ್ರಾ.ಪಂ. ದ್ವಿ.ದ. ಲೆಕ್ಕ ಸಹಾಯಕರ ಕೊರತೆ ಇದೆ. ಒಟ್ಟಾರೆಯಾಗಿ ತಾ.ಪಂ., ಗ್ರಾ.ಪಂ. ಸೇರಿ ಒಟ್ಟು 43 ಹುದ್ದೆಗಳು ಖಾಲಿ ಬಿದ್ದಿವೆ.

ತಾ.ಪಂ. ಕಚೇರಿ: 18 ಹುದ್ದೆ ಖಾಲಿ
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೊರತೆ ನಡುವೆಯೇ ತಾ.ಪಂ. ಕಚೇರಿಯೊಂದರಲ್ಲೆ 18 ಹುದ್ದೆಗಳು ಖಾಲಿ ಇವೆ. ವಿಸ್ತರಣಾಧಿಕಾರಿ 1, ಸಹಾಯಕ ಅಭಿಯಂತರರು – 1, ಸಹಾಯಕ ನಿರ್ದೇಶಕರು – 1, ಪಿಎ – 1, ಪ್ರಧಾನ ಸಹಾಯಕರು -2, ಶೀಘ್ರ ಲಿಪಿಗಾರರು – 1, ದ್ವಿ. ದರ್ಜೆ ಸಹಾಯಕರು 3, ಬೆರಳಚ್ಚುಗಾರರು – 2, ವಾಹನ ಚಾಲಕರು – 2, ಗ್ರೂಪ್‌ ಡಿ 4 ಖಾಯಂ ಹುದ್ದೆಗಳು ಖಾಲಿ ಇದ್ದು, ಕೆಲವಷ್ಟು ಹುದ್ದೆಗಳು ಪ್ರಭಾರಿಯಾಗಿ ನಿಯೋಜಿಸಲಾಗಿದೆ.

ನೇಮಕಾತಿ ಆದರೆ ಅನುಕೂಲ
ಬೆಳ್ತಂಗಡಿ ಗ್ರಾ.ಪಂ.ಗಳಲ್ಲಿ 42 ಮಂದಿ ಪಿಡಿಒಗಳು ಕಾರ್ಯ ನಿರ್ವಹಿಸುತ್ತಿದ್ದು ಉಳಿದ 6 ಗ್ರಾ.ಪಂ.ಗಳಿಗೆ ಪ್ರಭಾರ ಪಿಡಿಒಗಳು ಕರ್ತರ್ವನಿರ್ವಹಿಸುತ್ತಿದ್ದಾರೆ. ಸರಕಾರ ಹೊಸ ನೇಮಕಾತಿ ಮಾಡಿದಲ್ಲಿ ಅಭಿವೃದ್ಧಿಗೆ ವೇಗ ಸಿಗಲಿದೆ.
 - ಕೆ.ಇ.ಜಯರಾಂ, ತಾ.ಪಂ. ಇಒ

 ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.