ಬೆಳ್ತಂಗಡಿ:ಗಡಾಯಿಕಲ್ಲಿನಲ್ಲಿ ಮತ್ತೆ ಬಂಡೆ ಸೆಳೆ ಕುಸಿತ
Team Udayavani, May 8, 2021, 1:15 PM IST
ಬೆಳ್ತಂಗಡಿ: ಕುದುರೇಮುಖ ರಾಷ್ಟ್ರೀಯ ಉದ್ಯಾನದಂಚಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಗಡಾಯಿಕಲ್ಲು, ನರಸಿಂಹಘಡದಲ್ಲಿ ಶನಿವಾರ ಕಲ್ಲಿನ ಸೆಳೆಯೊಂದು ಬಿದ್ದು ಸ್ಫೋಟದಂತೆ ಸದ್ದು ಕೇಳಿಸಿದೆ.
ನಡ ಗ್ರಾಮಕ್ಕೆ ಒಳಪಟ್ಟ ಗಡಾಯಿಕಲ್ಲು ಒಂದು ಪಾರ್ಶ್ವದ ಕಲ್ಲಿನ ಭಾಗವೊಂದು ಇದೇ ಮೇ 2 ರಂದು ಕುಸಿದು ಬಿದ್ದಿತ್ತು.ಇದೀಗ ಮೇ 8 ರಂದು ಮತ್ತೆ ಸಮೀಪದಲ್ಲೆ ಕಲ್ಲಿನ ಸೆಳೆಯೊಂದು ಜಾರಿ ಬಿದ್ದಿದೆ.ಬಿದ್ದ ರಭಸಕ್ಕೆ ಸುತ್ತಮುತ್ತಸದ್ದು ಕೇಳಿಸಿದ್ದು, ಧೂಳು ಆವರಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಲ್ಲಿನ ಸೆಳೆ ಬಿದ್ದಿದ್ದರಿಂದ ಕೆಲಹೊತ್ತು ಧೂಳಿನಂತೆ ಹೊಗೆ ಆವರಿಸಿದೆ. 20019 ರ ಪ್ರವಾಹದ ಎರಡು ತಿಂಗಳು ಮುನ್ನ ಗಡಾಯಿಕ್ಲಲು ಮತ್ತೊಂದು ಪಾರ್ಶ್ವದ ಕಲ್ಲು ಬಿರುಕು ಬಿಟ್ಟು ಉರುಳಿತ್ತು. ಇದೀಗ ಒಟ್ಟು ಮೂರು ಭಾರಿ ಕಲ್ಲಿನ ಸೆಳೆ ಬಿದ್ದಂತಾಗಿದೆ.
ಕಳೆದ ವಾರಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕಲ್ಲಿನ ಸೆಳೆಯೊಳಗೆ ನೀರು ನಿಂತು ಸೆಳೆ ಬಿದ್ದಿರುವ ಸಾಧ್ಯತೆ ಇದೆ. ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳೀಯರು ಆತಂಕ ಪಡಬೇಕಿಲ್ಲ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗ ವಲಯ ಅರಣ್ಯಧಿಕಾರಿ ಸ್ಮಿತಾ ಪತ್ರಿಕೆಗೆ ತಿಳಿಸಿದ್ದಾರೆ.