ಬೆಳ್ತಂಗಡಿ: ಉಜಿರೆ-ಚಾರ್ಮಾಡಿ ರಸ್ತೆ ಬದಿ ತ್ಯಾಜ್ಯ ರಾಶಿ
Team Udayavani, May 16, 2019, 6:00 AM IST
ಬೆಳ್ತಂಗಡಿ: ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಚಾಮಾರ್ಡಿ ಘಾಟಿ ರಸ್ತೆ ಆರಂಭದಲ್ಲಿ ಎಲ್ಲೆಂದರಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯಲಾಗಿದೆ. ಈ ಕುರಿತು ಗ್ರಾ.ಪಂ. ಸೂಚನ ಫಲಕವಿದ್ದರೂ ತ್ಯಾಜ್ಯ ಎಸೆಯಲಾಗುತ್ತಿದೆ.
ಕೊಳೆತ ತರಕಾರಿ ಸಹಿತ ಪ್ಲಾಸ್ಟಿಕ್ ತಟ್ಟೆ, ಲೋಟಗಳು ಮೋರಿ ಸಮೀಪ ಎಸೆದಿದ್ದು, ಗಬ್ಬು ನಾರುತ್ತಿದೆ. ಪಂಚಾಯತ್ ಈ ಕುರಿತು ನಿಗಾ ವಹಿಸಿದರೂ ರಾತ್ರಿ 3 ಗಂಟೆ ಸುಮಾರಿಗೆ ವಾಹನದಲ್ಲಿ ಬಂದು ಕಸ ಎಸೆದು ಹೋಗುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೂಂದೆಡೆ ಇದೇ ಮಾರ್ಗವಾಗಿ ಮುಂಡಾಜೆ ರಸ್ತೆ ಬದಿ, ಉಜಿರೆ ಪೇಟೆಯಿಂದ 100 ಮೀ. ಮುಂಭಾಗ ಪೆಟ್ರೋಲ್ ಬಂಕ್ ಹಾಗೂ ಸ್ಥಳೀಯ ಬಾರ್ ಒಂದರ ಸಮೀಪ ಪ್ಲಾಸ್ಟಿಕ್ ಪ್ಯಾಕೆಟ್ಗಳು ರಾಶಿ ಬಿದ್ದಿವೆ. ಇದನ್ನು ಸುಡುತ್ತಿದ್ದು, ಪರಿಸರ ದೃಷ್ಟಿಯಿಂದಲೂ ಸಮಸ್ಯೆಯಾಗುತ್ತಿದೆ. ಇದನ್ನು ವಿಲೇ ಮಾಡುವ ಕುರಿತು ಸ್ಥಳೀಯ ಗ್ರಾ.ಪಂ.ಗಳು ಗಮನ ಹರಿಸಬೇಕಾಗಿದೆ. ಮಳೆಗಾಲ ಸಮೀಪಿಸುತ್ತಿರುವುದರಿಂದ ಪ್ಲಾಸ್ಟಿಕ್ಗಳು ಚರಂಡಿ ಸೇರಿ ನೀರು ಸರಾಗವಾಗಿ ಹರಿಯಲು ಸಮಸ್ಯೆ ತಂದೊಡ್ಡಲಿದ್ದು, ಇದಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.