ಕಾಣಿಯೂರು ವಿಶ್ವಜ್ಞ ಯುವಕ ಮಂಡಲದಿಂದ ಮೋರಿ ನಿರ್ಮಾಣ
Team Udayavani, Jul 25, 2018, 2:42 PM IST
ಕಾಣಿಯೂರು : ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ಬೈತಡ್ಕದಲ್ಲಿ ಚರಂಡಿಯಲ್ಲಿ ಕೊಳಚೆ ನೀರು ಬ್ಲಾಕ್ ಆಗಿದ್ದು, ಚರಂಡಿಗೆ ಮೋರಿ ನಿರ್ಮಿಸಿ ಕೊಳಚೆ ನೀರನ್ನು ಸರಾಗವಾಗಿ ಹರಿದು ಹೋಗುವಲ್ಲಿ ಕಾಣಿಯೂರಿನ ವಿಶ್ವಜ್ಞ ಯುವಕ ಮಂಡಲದವರು ವ್ಯವಸ್ಥೆ ಮಾಡಿದರು.
ರಸ್ತೆಗೆ ಮೋರಿ ಅಳವಡಿಸಿರುವ ಕಾರಣ ತಗ್ಗು ಪ್ರದೇಶದಲ್ಲಿ ಶೇಖರಣೆಗೊಂಡ ಕೊಳಚೆ ನೀರು ಸರಾಗವಾಗಿ ಹರಿದು ಹೋಯಿತು. ಚರಂಡಿಯಲ್ಲಿ ಬೆಳೆದಿದ್ದ ಹುಲ್ಲು, ಕೊಳಚೆ, ಕಸಕಡ್ಡಿ, ತ್ಯಾಜ್ಯ, ಪ್ಲಾಸ್ಟಿಕ್ ಗಳನ್ನು ತೆಗೆದು ಶುಚಿಗೊಳಿಸಲಾಯಿತು. ವಿಶ್ವಜ್ಞ ಯುವಕ ಮಂಡಲವು ಹಮ್ಮಿಕೊಂಡ ಈ ಕಾರ್ಯವು ಪ್ರಶಂಸೆಗೆ ಪಾತ್ರವಾಯಿತು. ಯುವಕ ಮಂಡಲದ ಅಧ್ಯಕ್ಷ ರಂಜಿತ್ ಹೊಸೊಕ್ಲು, ಕಾರ್ಯದರ್ಶಿ ರಾಕೇಶ್ ಬನಾರಿ, ಸದಸ್ಯರಾದ ಪುರುಷೋತ್ತಮ್ ಗೌಡ ಬೈತಡ್ಕ, ಚಂದ್ರಶೇಖರ್ ಬನಾರಿ, ಸುಧಾಕರ್ ಕಾಣಿಯೂರು, ಲಕ್ಷ್ಮೀಶ್ ಬೆಳಂದೂರು, ಬಾಲಚಂದ್ರ ಬರೆಪ್ಪಾಡಿ, ಸಚಿನ್ ಅಬೀರ, ಪ್ರಜ್ವಲ್ ಅಬೀರ, ಯೋಗೀಶ್ ಬರೆಪ್ಪಾಡಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ