ಹವಾಮಾನ ವೈಪರೀತ್ಯದಿಂದ ಕೈಕೊಟ್ಟ ಗೇರು ಬೆಳೆ

ಮಾರುಕಟ್ಟೆ ಧಾರಣೆ ಕುಸಿತ; ರೈತನಿಗೆ ಗಾಯದ ಮೇಲೆ ಮತ್ತೆ ಬರೆ

Team Udayavani, Jan 25, 2020, 5:42 AM IST

jan-18

ಅರಂತೋಡು: ಈ ವರ್ಷ ಹವಾಮಾನ ವೈಪರೀತ್ಯದಿಂದ ಗೇರು ಬೆಳೆ ಕುಸಿತಗೊಳ್ಳುವ ಮುನ್ಸೂಚನೆ ಎದುರಾಗಿದೆ. ಇತರ ಬೆಳೆಗಳಿಗ ಬಾಧಿಸಿರುವ ರೋಗ ಹಾಗೂ ಮಾರುಕಟ್ಟೆ ಧಾರಣೆ ಕುಸಿತದಿಂದ ಕಂಗೆಟ್ಟಿರುವ ರೈತನಿಗೆ ಈ ವರ್ಷ ಗೇರು ಬೆಳೆ ಕುಸಿತಗೊಂಡಿರುವ ಕಾರಣ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.

2019ನೇ ಸಾಲಿನ ಡಿ. 15ರ ತನಕ ತಾಲೂಕು ಹಾಗೂ ನೆರೆಯ ತಾಲೂಕಿನಲ್ಲಿ ಮಳೆ ಇದ್ದ ಪರಿಣಾಮ ಹವಾಮಾನ ವೈಪರೀತ್ಯಗೊಂಡಿದೆ. ಮಳೆ ನಿಂತರೂ ಚಳಿ ಆರಂಭಗೊಳ್ಳಲೇ ಇಲ್ಲ. ಗೇರು ಮರ ಸೂಕ್ತವಾಗಿ ಫ‌ಲ ಬಿಡಲು ಫ‌ಲಗಾಳಿಯೂ ಇಲ್ಲ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೇರು ಮರ ಹೂ ಬಿಡಲು ತಡವಾಗಿದೆ. ಇನ್ನೂ ಕೆಲವೆಡೆ ಮರಗಳು ಹೂ ಬಿಟ್ಟಿಲ್ಲ. ಈ ಪರಿಣಾಮದಿಂದ ಜನವರಿ ತಿಂಗಳ ಕೊನೆಗೆ ಮೂರು ಎಕ್ರೆ ಗೇರು ತೋಟದಲ್ಲಿ 10 ಕ್ವಿಂಟಲ್‌ ಗೇರು ಬೀಜ ದೊರೆಯುತ್ತಿದ್ದ ರೈತರಿಗೆ ಈತನಕ ಸಿಕ್ಕಿದ್ದು 10 ಕೆ.ಜಿ.ಯಷ್ಟು ಮಾತ್ರ.

ಪೂರಕ ಬೆಳೆ ಕುಸಿತ
ಅಡಿಕೆಗೆ ಹಳದಿ ರೋಗ, ರಬ್ಬರ್‌ಗೆ ಧಾರಣೆ ಕುಸಿತ, ಕರಿಮೆಣಸಿಗೆ ಸೊರಬು ರೋಗದಿಂದ ತಾಲೂಕಿನ ರೈತರು ಬೇರೆ ಬೇರೆ ಪರ್ಯಾಯ ಬೆಳೆಯತ್ತ ಆಲೋಚಿಸಿದರು. ಅದರಲ್ಲಿ ಹೆಚ್ಚಿನವರು ಗೇರು ಕೃಷಿಯ ಬಗ್ಗೆ ಆಲೋಚಿಸಿ ಗೇರಿನ ವಿವಿಧ ಹೈಬ್ರಿಡ್‌ ತಳಿಗಳಾದ ಉಳ್ಳಾಲ-1 ಉಳ್ಳಾಲ-2, ಉಳ್ಳಾ-3 ,ಉಳ್ಳಾಲ-4 ಯು.ಎನ್‌.-50, ಚಿಂತಾಮಣಿ-1 ಭಾಸ್ಕರ ಹೀಗೆ ವಿವಿಧ ತಳಿಗಳನ್ನು ನಾಟಿ ಮಾಡಿದರು. ಗೇರು ಗಿಡಗಳು ಫ‌ಸಲು ನೀಡಲು ಪ್ರಾರಂಭವಾಗಿ ಅನೇಕ ವರ್ಷಗಳು ಕಳೆದಿವೆ. ಇನ್ನೂ ಕೆಲವರು ಮತ್ತೆ ಪ್ರತಿ ವರ್ಷ ಗೇರು ನಾಟಿ ಮಾಡುತ್ತಿದ್ದಾರೆ. ಸುಳ್ಯ ತಾಲೂಕಿನಲ್ಲಿ 2,500 ಹೆಕ್ಟೇರ್‌ ಭೂಮಿಯಲ್ಲಿ ಗೇರು ಬೆಳೆ ಬೆಳೆಯಲಾಗಿದೆ. ರಬ್ಬರ್‌, ಅಡಿಕೆ ಈ ಬೆಳೆಯಲ್ಲಿ ಆಗುತ್ತಿರುವ ನಷ್ಟವನ್ನು ರೈತ ಗೇರು ಬೆಳೆಯ ಮೂಲಕ ಒಂದಷ್ಟು ಸರಿದೂಗಿಸುವ ಲೆಕ್ಕ ಹಾಕುತ್ತಿರುವಾಗಲೇ ನಿರೀಕ್ಷಿತ ಫ‌ಲ ದೊರೆಯಲು ಅಸಾಧ್ಯ ಎಂದು ಚಿಂತೆ ಕಾಡತೊಡಗಿದೆ.

ಧಾರಣೆ ಏರುಪೇರು
2018ನೇ ಸಾಲಿನಲ್ಲಿ ಗೇರು ಬೀಜ ಕೆ.ಜಿ.ಯೊಂದಕ್ಕೆ 150ರಿಂದ 160 ರೂ. ಗಡಿ ದಾಟಿತ್ತು. ಆದರೆ ಕಳೆದ ವರ್ಷ ಕೆ.ಜಿ.ಯೊಂದಕ್ಕೆ 100ರಿಂದ 120ರ ತನಕ ಧಾರಣೆ ಇತ್ತು.

ಬೇಡಿಕೆ ಹೆಚ್ಚು
ಗೋಡಂಬಿ ವಿದೇಶಿ ವಿನಿಮಯ ಗಳಿಸುತ್ತಿರುವ ಬೆಳೆಗಳಲ್ಲಿ ಒಂದು. ಕರ್ನಾಟಕ ಕರಾವಳಿ ಪ್ರದೇಶಗಳು ಒಳನಾಡು ಒಣ ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಸಿಹಿತಿಂಡಿಗಳು, ಖಾರ ತಿಂಡಿಗಳು, ಪಾನೀಯ ಹಾಗೂ ಮದ್ಯ ತಯಾರಿಕೆಯಲ್ಲಿ ನೀರು ಬಸಿದು ಹೋಗುವಂತಹ ಕೆಂಪು ಗೋಡು, ಜಂಬಿಟ್ಟಿಗೆ ಮತ್ತು ಮಧ್ಯಮ ಕಪ್ಪು ಮಣ್ಣು ಈ ಬೆಳೆಗೆ ಸೂಕ್ತ.

ಗೋಡಂಬಿ ಬೆಳೆ ವಾತಾವರಣದಲ್ಲಿ ಹೆಚ್ಚು ತೇವಾಂಶ ಮತ್ತು ಹೆಚ್ಚು ಉಷ್ಣಾಂಶ ಇರುವ ತೀರ ಪ್ರದೇಶಗಳಲ್ಲಿ ಬೆಳೆಯಬಲ್ಲದು. ಅಲ್ಲದೆ ಮಣ್ಣಿನಲ್ಲಿ ತೇವಾಂಶ ಕಡಿಮೆ ಆದಾಗಲೂ ಅಂತಹ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯಬಲ್ಲದು. ಹೈಬ್ರಿಡ್‌ ತಳಿಗಳು ಮೂರು ವರ್ಷದಲ್ಲಿ ಫ‌ಸಲು ನೀಡುತ್ತವೆ.

ದುಷ್ಪರಿಣಾಮ ಬೀರಬಹುದು
ಗೇರು ಬೆಳೆಯನ್ನು ತಾತ್ಸಾರ ಮಾಡುವ ಹಾಗಿಲ್ಲ. ಉತ್ತಮ ಫ‌ಸಲಿಗೆ ಕಾಲ ಕಾಲಕ್ಕೆ ತಕ್ಕಂತೆ ಎನ್‌.ಪಿ.ಕೆ. ಹಾಗೂ ಇತರ ಗೊಬ್ಬರವನ್ನು ಗಿಡಗಳ ಪ್ರಾಯಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ಸೂಕ್ತ ಪ್ರಮಾಣದಲ್ಲಿ ನೀಡಬೇಕು. ಕಾಲ ಕಾಲಕ್ಕೆ ತಕ್ಕಂತೆ ನೀರುಣಿಸಬೇಕು. ಕೀಟಗಳ ಹತೋಟಿ ಮಾಡಬೇಕಾಗಿದೆ. ಈ ಬಾರಿಯ ಹವಾಮಾನ ಗೇರು ಬೆಳೆಗೆ ಸ್ವಲ್ಪ ಮಟ್ಟಿಗೆ ದುಷ್ಪರಿಣಾಮ ಬೀರಬಹುದು.
– ಅರ್ಬನ್‌ ಪೂಜಾರೆ , ಸಹಾಯಕ ಅಧಿಕಾರಿ, ತೋಟಗಾರಿಕಾ ಇಲಾಖೆ ಸುಳ್ಯ

ಇಳುವರಿ ಭಾರಿ ಕುಸಿತ
ಗೇರು ಮರ ಹೂ ಬಿಡುವ ಕಾಲದಲ್ಲಿ ವಿಪರೀತ ಮಳೆ ಸುರಿದಿದೆ. ಹವಾಮಾನದ ಬದಲಾವಣೆಯಿಂದ ಈ ವರ್ಷ ಗೇರು ಕೃಷಿಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕಳೆದ ವರ್ಷ ಈ ಸಮಯಕ್ಕೆ ನನಗೆ 10 ಕ್ವಿಂಟಲ್‌ ಗೇರು ಬೀಜ ಆಗಿದೆ. ಈ ಸಲ 10 ಕೆ.ಜಿ. ಮಾತ್ರ ಬೆಳೆದಿದೆ. ಇಳುವರಿ ಭಾರೀ ಕುಸಿತವಾಗಿದೆ. ರೈತರಿಗೆ ಒಂದರ ಮೇಲೆ ಇನ್ನೊಂದು ಸಮಸ್ಯೆಯಾಗುತ್ತಿದೆ. ಸರಕಾರವು ಗೇರು ಬೆಳೆಗಾರರ ಕಡೆ ಗಮನ ಹರಿಸಬೇಕಾಗಿದೆ.
– ಸತೀಶ್‌ ರೈ ಕರ್ನೂರು , ಗೇರು ಕೃಷಿಕ

ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.