ಕಡಬ: ಜಾನುವಾರು ಜಂತುಹುಳ ನಿವಾರಣ ಔಷಧಿ ವಿತರಣೆ
Team Udayavani, Aug 5, 2018, 11:13 AM IST
ಕಡಬ : ದ.ಕ. ಹಾಲು ಒಕ್ಕೂಟದ ನೆರವಿನೊಂದಿಗೆ ಕಡಬದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಂಘದ ಕಾರ್ಯವ್ಯಾಪ್ತಿಯ ಎಲ್ಲಾ ರಾಸುಗಳಿಗೆ ಉಚಿತವಾಗಿ ಜಂತುಹುಳ ನಿವಾರಣ ಔಷಧಿ ವಿತರಣೆ ಮಾಡಲಾಯಿತು.
ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ ಅವರು ಜಾನುವಾರುಗಳಿಗೆ ಔಷಧಿ ತಿನ್ನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಕಾರ್ಯದರ್ಶಿ ಕುಂಞಣ್ಣ ಕುದ್ರಡ್ಕ, ಸಹಾಯಕರಾದ ಅಶೋಕ್ ಕುದ್ರಡ್ಕ, ದೀಕ್ಷಿತ್ ಗೌಡ ಹಳ್ಳಿ ಮುಂತಾದವರು ಹಾಜರಿದ್ದರು.