ನೋಡುತ್ತಲೇ ಕಲಿತು ಚಿತ್ರಕಲೆಯಲ್ಲಿ ಮಿಂಚಿದ ಮಕ್ಕಳು


Team Udayavani, Sep 15, 2019, 5:20 AM IST

as-17

ಡಗನ್ನೂರು: ಎಲ್ಲ ವಿದ್ಯೆಗಳಿಗೂ ಗುರು ಇರುತ್ತಾನೆ. ಆದರೆ ಕೆಲವೊಂದು ವಿದ್ಯೆಗಳು ಪ್ರತಿಭೆಯಿಂದ ಅನಾವರಣಗೊಳ್ಳುತ್ತವೆ ಎನ್ನುವ ಮಾತು ಕುಂಬ್ರದಲ್ಲಿರುವ ಕರ್ನಾಟಕ ಇಸ್ಲಾಮಿಕ್‌ ಅಕಾಡೆಮಿಯ 10ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ವಯಂ ಪ್ರತಿಭೆಯಿಂದ ಚಿತ್ರಕಲೆಯಲ್ಲಿ ಮಿಂಚುತ್ತಿರುವುದನ್ನು ಗಮನಿಸಿದರೆ ಸತ್ಯವೆಂದು ತೋರುತ್ತದೆ.

ಹತ್ತು ವಿದ್ಯಾರ್ಥಿಗಳೂ ಚಿತ್ರಕಲೆಯಲ್ಲಿ ಪರಿಣತಿ ಹೊಂದಿದ್ದಾರೆ. ಅವರ ಪೈಕಿ ಪ್ರಥಮ ಪದವಿ ವಿದ್ಯಾರ್ಥಿ ಸುಹೈಲ್ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿ ತಪ್ಸೀರ್‌ ಕಲೆಯಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಇವರಿಬ್ಬರೂ ನೂರಾರು ಚಿತ್ರಗಳನ್ನು ಬಿಡಿಸಿದ್ದಾರೆ. ವಿಶ್ವನಾಯಕರು, ರಾಷ್ಟ್ರದ ನಾಯಕರು, ಧಾರ್ಮಿಕ ಪಂಡಿತರು, ಪ್ರಕೃತಿ ಹೀಗೆ ಹಲವು ಬಗೆಯ ಚಿತ್ರಗಳನ್ನು ರಚಿಸಿದ್ದಾರೆ. ಅದೂ ಹವ್ಯಾಸಕ್ಕಾಗಿ. ಕಲೆಯಲ್ಲಿ ಪರಿಣತಿ ಇದ್ದರೂ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿಲ್ಲ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಕುಂಬ್ರದ ಕರ್ನಾಟಕ ಇಸ್ಲಾಮಿಕ್‌ ಅಕಾಡೆಮಿಯಲ್ಲಿವೆ 10ಕ್ಕೂ ಹೆಚ್ಚು ಪ್ರತಿಭೆಗಳು

ಗಣ್ಯರ ಚಿತ್ರಗಳು
ರಾಜಕೀಯ ಸ್ಥಿತಿಗತಿ, ರಾಜಕೀಯ ನಾಯಕರ ಹೇಳಿಕೆಗಳು, ಸಂಘಟನೆಗಳ ವಿವಿಧ ಹೋರಾಟಗಳು ಮುಂತಾದ ವಿಷಯಗಳನ್ನು ಇಟ್ಟುಕೊಂಡು ಕ್ಷಣಮಾತ್ರದಲ್ಲಿ ವ್ಯಂಗ್ಯ ಕಾಟೂìನ್‌ಗಳನ್ನು ಈ ವಿದ್ಯಾರ್ಥಿಗಳು ರಚಿಸುತ್ತಾರೆ. ನೆಲ್ಸನ್‌ ಮಂಡೇಲಾ, ಮದರ್‌ ತೆರೇಸಾ, ಮೊಘಲ್‌ ಚಕ್ರವರ್ತಿ ಅಕ್ಬರ್‌, ಅಬ್ರಾಹಂ ಲಿಂಕನ್‌, ಮಾಜಿ ಪ್ರಧಾನಿ ಇಂದಿರಾಗಾಂಧಿ, ಜೋಕರ್‌, ಲಿಯೋನಲ್‌ ಮೆಸ್ಸಿ, ಇತ್ತೀಚೆಗೆ ನಿಧನರಾದ ಖ್ಯಾತ ಮುಸ್ಲಿಂ ವಿದ್ವಾಂಸ ಅತ್ತಿಪಟ್ಟೆ ಉಸ್ತಾದ್‌ ಸಹಿತ ಹಲವು ಗಣ್ಯ ವ್ಯಕ್ತಿಗಳ ಕ್ಯಾರಿಕೇಚರ್‌ಗಳನ್ನು ಚಿತ್ತಾಕರ್ಷಕವಾಗಿ ಬಿಡಿಸಿ ಜನಮೆಚ್ಚುಗೆ ಗಳಿಸಿದ್ದಾರೆ.

ಸಾಹಸವೇ ಸರಿ
ಯಾವುದೇ ಚಿತ್ರ ಅಥವಾ ಫೋಟೋವನ್ನು ಅವರಿಗೆ ನೀಡಿದರೆ ಸಾಕು, ಕೆಲವೇ ನಿಮಿಷದಲ್ಲಿ ಆ ಚಿತ್ರವನ್ನು ಯಥಾಪ್ರಕಾರ ಬಿಡಿಸುವ ಕಲೆ ಸುಹೈಲ್‌ ಮತ್ತು ತಪ್ಸಿರ್‌ ಅವರಿಗೆ ಸಿದ್ಧಿಸಿದೆ. ಅವರು ಯಾವುದೇ ಚಿತ್ರಕಲಾ ತರಗತಿಗೆ ಹೋಗಿಲ್ಲ. ಬಿಡುವಿನ ಸಮಯದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದ್ದು ಕೇವಲ ಆಸಕ್ತಿಯ ಫ‌ಲವಾಗಿ. ವ್ಯಕ್ತಿಗಳ ರೇಖಾ ಚಿತ್ರ ಬಿಡಿಸುವ ಕಲೆಯಂತೂ ಅದ್ಭುತ ಎನಿಸುವಷ್ಟು ಒಲಿದಿದೆ.

ಈ ಮಕ್ಕಳಿಗೆ ಅರೇಬಿಕ್‌ ಕಲೆಯೂ ಕರಗತ
ಅರೇಬಿಕ್‌ ಪದಗಳನ್ನು ಜೋಡಿಸಿ, ಚಿತ್ರದಂತೆ ಬಿಡಿಸುವ ಕಲೆ ಅತ್ಯಂತ ಕಠಿನ. ಆದರೂ ಅರೇಬಿಕ್‌ ಭಾಷೆಗಳಲ್ಲಿರುವ ಕೆಲವೊಂದು ಸಾಹಿತ್ಯವನ್ನು ಅಕ್ಷರ ಜೋಡಣೆಯ ಮೂಲಕ ಚಿತ್ರ ರೂಪಕ್ಕೆ ತರುವ ಕಾಲಿಯೋಗ್ರಫಿಯ ಅನೇಕ ಮಾದರಿಗಳು ಇವರಲ್ಲಿವೆ. ಸಂಸ್ಥೆಗೆ ಭೇಟಿ ನೀಡುವ ಗಣ್ಯ ವ್ಯಕ್ತಿಗಳ ಚಿತ್ರ ಬಿಡಿಸಿ, ಅದನ್ನೇ ಅವರಿಗೆ ಗಿಫ್ಟ್ ಕೊಡುವ ಹವ್ಯಾಸವನ್ನು ಈ ಇಬ್ಬರೂ ಬೆಳೆಸಿಕೊಂಡಿದ್ದಾರೆ.

ದಿನೇಶ್‌ ಪೇರಾಲು

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.