ಮಾನವೀಯ ದೃಷ್ಟಿಯಿಂದ ಸಹಕರಿಸಿ: ಮಠಂದೂರು
Team Udayavani, May 14, 2020, 5:35 AM IST
ಪುತ್ತೂರು: ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿನ 12 ಹೊಟೇಲ್ ವಸತಿ ಗೃಹಗಳ ಮಾಲಕರ ಸಭೆ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆಯಿತು.
ವಿದೇಶ, ಹೊರ ರಾಜ್ಯಗಳಿಂದ ತಾಲೂಕಿಗೆ ಬರುವ ಮಂದಿಗೆ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೆಲವರು ಹೊಟೇಲ್ ವಸತಿ ಗೃಹಗಳನ್ನು ಬಯಸುತ್ತಾರೆ. ಅಂತಹವರಿಗೆ ಬದುಕು ಕೊಡುವ ಮಾನವೀಯ ಕೆಲಸ ನಮ್ಮಿಂದ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಹೊಟೇಲ್ ವಸತಿ ಗೃಹ ಇದ್ದವರು ಸಹಕರಿಸುವಂತೆ ಶಾಸಕರು ಹೇಳಿದರು.
ಮುಂಬಯಿ, ದಿಲ್ಲಿಯಿಂದ ಬಹುತೇಕ ಮಂದಿ ಹೊಟೇಲ್ ಉದ್ಯಮಿಗಳು ಬರುತ್ತಾರೆ. ಅವರಲ್ಲಿ ಹೆಚ್ಚಿನವರು ಆರೋಗ್ಯವಂತರು. ಅವರು ವಸತಿ ಗೃಹ ಅಪೇಕ್ಷೆ ಪಟ್ಟಿದ್ದಾರೆ. ವಸತಿ ಗೃಹದ ಬಾಡಿಗೆ ಬಾಬ¤ನ್ನು ಅವರೇ ಭರಿಸುತ್ತಾರೆ ಎಂದ ರು.
ಎಲ್ಲರಿಗೂ ಆರೋಗ್ಯ ತಪಾಸಣೆ
ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್ ಕುಮಾರ್ ರೈ ಮಾತನಾಡಿ, ವಿದೇಶ ಮತ್ತು ಹೊರರಾಜ್ಯಗಳಿಂದ ಬರು ವವರ ವೈದ್ಯಕೀಯ ತಪಾಸಣೆ ನಡೆಸುತ್ತೇವೆ. 14 ದಿನ ಕ್ವಾರಂಟೈನ್ ಮುಗಿದ ಬಳಿಕವೂ ಗಂಟಲ ದ್ರವ ಪರೀಕ್ಷೆ ನಡೆಯಲಿದೆ. ಪ್ರತಿ ರೂಮ್ಗಳನ್ನು ಸ್ಯಾನಿಟೈಸ್ ಮಾಡಲಾಗು ತ್ತದೆ ಎಂದರು. ಹೊಟೇಲ್, ವಸತಿಗೃಹದ ಮಾಲಕರು ಮಾತನಾಡಿ, ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಬಂದಿ ಊರಿಗೆ ಹೋಗಿದ್ದಾರೆ. ಅವರಿಗೆ ಬರಲು ವ್ಯವಸ್ಥೆಯೂ ಇಲ್ಲ. ಈ ನಿಟ್ಟಿನಲ್ಲಿ ಸ್ವತ್ಛತೆ, ಇತರ ಸೇವೆ ನೀಡಲು ಕಷ್ಟ ಆಗುತ್ತದೆ. ಜತೆಗೆ ರೂಮ್ಗಳ ಬಟ್ಟೆಗಳ ಸ್ವತ್ಛತೆಯನ್ನು ಖಾಸಗಿ ಸಂಸ್ಥೆಗೆ ವಹಿಸಿ ದ್ದರಿಂದ ತೊಂದರೆಯಾಗುತ್ತದೆ ಎಂದರು.
ವಸತಿಗೃಹದ ಮಾಲಕರು ಆರಂಭದಲ್ಲಿ ರೂಮ್ ಕೊಡಲು ಹಿಂದೇಟು ಹಾಕಿದ್ದರೂ ಇಲಾಖಾಧಿಕಾರಿಗಳು ಸುರಕ್ಷತೆಯ ಭರವಸೆ ನೀಡಿದ್ದರಿಂದ ಒಪ್ಪಿಕೊಂಡರು.ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು.
ದರ ನಿಗದಿಪಡಿಸಿ
ಉಪವಿಭಾಗಾಧಿಕಾರಿ ಡಾ| ಯತೀಶ್ ಉಳ್ಳಾಲ್ ಮಾತನಾಡಿ, ಪುತ್ತೂರಿನ ಹೊಟೇಲ್ ವಸತಿ ಗೃಹದಲ್ಲಿರುವವರು 14 ದಿನ ಉಳಿದು ಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭ ಬಾಡಿಗೆ ದುಬಾರಿಯಾದರೆ ಕಷ್ಟ. ಹಾಗಾಗಿ ಲಾಡ್ಜ್ನಲ್ಲಿ ಪ್ಯಾಕೇಜ್ ದರ ನಿಗದಿ ಮಾಡಿ. ಪ್ರತಿ ರೂಂಗೂ ಸಿ.ಸಿ. ಟಿ.ವಿ., ಹೌಸ್ ಕೀಪಿಂಗ್, ಸ್ಟಾಫ್ನ ವ್ಯವಸ್ಥೆ ಮಾಡಿಸಿಕೊಳ್ಳಿ. ಅವರು ಆರೋಗ್ಯವಂತರಾಗಿದ್ದಾರೆಯೇ ಎಂದು ತಪಾಸಣೆ ಮಾಡಿಯೇ ಕಳಿಸುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ