ಸಾಲ ಪಡೆಯಲು ಅಸಲಿ ಎಂದು ನಂಬಿಸಿ ನಕಲಿ ದಾಖಲೆ ಪತ್ರ ಸಲ್ಲಿಕೆ : ದೂರು
Team Udayavani, Aug 3, 2022, 4:56 PM IST
ಪುತ್ತೂರು: ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸ್ಥಿರಾಸ್ತಿ ಮತ್ತು ಮನೆ ಖರೀದಿಗಾಗಿ ಕಬಕ ಗ್ರಾಮದ ಕರ್ನಾಟಕ ಬ್ಯಾಂಕ್ನಿಂದ ರೂ.19 ಲಕ್ಷ ಸಾಲ ಪಡೆದು ವಂಚನೆ ಎಸಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬಕದ ಅಬ್ದುಲ್ ನಝೀರ್, ಫೌಝಿಯಾ ಮತ್ತು ಮಹಮ್ಮದ್ ರಫೀಕ್ ಬ್ಯಾಂಕ್ಗೆ “ಅಸಲಿ’ ಎಂದು “ನಕಲಿ’ ದಾಖಲೆ ಪತ್ರಗಳನ್ನು ಸಲ್ಲಿಸಿ ಸಾಲ ಪಡೆದು ವಂಚನೆ ಮಾಡಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. 2019 ರ ನ.14ರಂದು ಅಬ್ದುಲ್ ನಝೀರ್ ಮತ್ತು ಫೌಝಿಯಾ ಅವರು ಸ್ಥಿರಾಸ್ತಿ ಮತ್ತು ಮನೆ ಖರೀದಿಯ ಬಗ್ಗೆ 19 ಲಕ್ಷ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭ ಮಹಮ್ಮದ್ ರಫೀಕ್ ಅವರನ್ನು ಜಾಮೀನುದಾರರನ್ನಾಗಿ ಕಾಣಿಸಿದ್ದರು. ಬೇರೊಬ್ಬರು ನಿರ್ಮಿಸಿದ್ದ ಮನೆಯನ್ನು ತನ್ನ ಮನೆ ಎಂದು ತೋರಿಸಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕ್ಗೆ ಹಾಜರುಪಡಿಸಿದ್ದರು.
ಬ್ಯಾಂಕ್ನವರು ದಾಖಲೆ ಪತ್ರಗಳನ್ನು ಅಸಲಿ ಎಂದು ನಂಬಿ ರೂ.19 ಲಕ್ಷ ಸಾಲ ನೀಡಿದ್ದರು. ಆದರೆ, ಸಾಲ ಪಡೆದ ಆರೋಪಿಗಳು ಸಾಲವನ್ನು ಮರುಪಾವತಿಸದೆ ಇದುದರಿಂದ ಬ್ಯಾಂಕ್ನ ಮೆನೆಜರ್ ಮತ್ತು ಅಧಿಕಾರಿಗಳು ಪರಿಶೀಲಿಸಿದಾಗ ಆರೋಪಿಗಳ ಬಣ್ಣ ಬಯಲಾಗಿದೆ. ತಮ್ಮದಲ್ಲದ ನಿವೇಶನ ಮತ್ತು ಕಟ್ಟಡವನ್ನು ತೋರಿಸಿ ಸಾಲ ಪಡೆದು ವಂಚಿಸಿರುವುದು ಬ್ಯಾಂಕಿನವರ ಗಮನಕ್ಕೆ ಬಂದಿತ್ತು.
ಈ ಕುರಿತು ಬ್ಯಾಂಕ್ನ ಮ್ಯಾನೇಜರ್ ಶಶಿಧರ್ ಎಸ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ