ದುಬಾೖಯಲ್ಲಿ ಬೈಕ್ ಅಪಘಾತ: ಯುವಕ ಸಾವು
Team Udayavani, Oct 15, 2022, 6:35 AM IST
ಬೆಳ್ತಂಗಡಿ: ಇಲ್ಲಿನ ಕುವೆಟ್ಟು ಗ್ರಾಮದ ಸಬರಬೈಲ್ ಬಳಿಯ ನಿವಾಸಿ ಸಿರಿಲ್ ರೋಡ್ರಿಗಸ್ ಅವರ ಪುತ್ರ ಕ್ಲೇವಿನ್ ಅವಿನ್ ರೋಡ್ರಿಗಸ್ (25) ಅವರು ದುಬಾೖಯಲ್ಲಿ ಅ. 11ರಂದು ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಉದ್ಯೋಗ ನಿಮಿತ್ತ ವಿಸಿಟಿಂಗ್ ವೀಸಾದಲ್ಲಿ ಆರು ತಿಂಗಳ ಹಿಂದೆ ದುಬಾೖಗೆ ತೆರಳಿದ್ದ ಅವರಿಗೆ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗವೂ ಲಭಿಸಿತ್ತು. ಇನ್ನೊಂದು ವಾರ ದಲ್ಲಿ ಭಾರತಕ್ಕೆ ಹಿಂದಿರುಗ ಲಿದ್ದರು. ಅ. 11ರ ರಾತ್ರಿ ಸ್ನೇಹಿತನ ಜತೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಬೈಕ್ ರಸ್ತೆಯ ಡಿವೈಡರ್ಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಕ್ಲೇವಿನ್ ಅವಿನ್ ಅವರ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಸ್ವರೂಪದ ಪೆಟ್ಟಾಗಿ ಮೃತಪಟ್ಟರು.
ದುಬಾೖ ಸರಕಾರದ ನಿಯಮಾವಳಿ ಯಂತೆ ಮೃತದೇಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಟ್ಟಿದ್ದು, ಶನಿವಾರ ಬೆಳ್ತಂಗಡಿಗೆ ಬರಲಿದೆ ಎಂದು ಕುಟುಂಬದವರು ಹೇಳಿದ್ದಾರೆ.
ಅವಿವಾಹಿತರಾಗಿದ್ದ ಮೃತರು ತಂದೆ, ತಾಯಿ, ಸಹೋದರರನ್ನು ಅಗಲಿದ್ದಾರೆ. ಕ್ಲೀವಿನ್ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಪದವಿ ಪೂರೈಸಿ ಬಳಿಕ ನಿಟ್ಟೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು