ಕೊರಿಂಗಿಲ ರಸ್ತೆ ದುರಸ್ತಿಗೆ ಆಗ್ರಹ
Team Udayavani, Sep 2, 2018, 11:46 AM IST
ಬೆಟ್ಟಂಪಾಡಿ: ಇಲ್ಲಿಯ ಕೊರಿಂಗಿಲ ಬಳಿ ರಸ್ತೆ ತೀರಾ ಹದಗೆಟ್ಟಿದ್ದು, ಸಂಚರಿಸಲು ಅತ್ಯಂತ ತ್ರಾಸದಾಯಕವಾಗಿದೆ.
ಪುತ್ತೂರು – ಪಾಣಾಜೆ ಲೋಕೋಪಯೋಗಿ ರಸ್ತೆ ತಲೆಪ್ಪಾಡಿಯಿಂದ ಮುಂದೆ ಕೊರಿಂಗಿಲ ಸೇತುವೆಯವರೆಗೆ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಸಂಚಕಾರ ತಂದಿದೆ. ಮಳೆಗಾಲದಲ್ಲಿ ರಸ್ತೆ ಬದಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಇಲ್ಲದೆ ರಸ್ತೆ ಹಾಳಾಗುತ್ತಿದ್ದು, ಅರ್ಧ ಮಳೆಗಾಲ ಮುಗಿದ ನಂತರ ನಿರ್ವಹಣೆ ನೆನಪಾಗಿ ಕೆಲಸ ಆರಂಭಿಸುತ್ತಾರೆ ಎಂದು ಸಾರ್ವಜನಿಕರು ಹೇಳುತ್ತಾರೆ. ಇನ್ನಾದರೂ ಈ ಬಗ್ಗೆ ಇಲಾಖೆ ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸಲು ಮುಂದಾದರೆ ರಸ್ತೆ ಈ ರೀತಿಯಾಗದು ಎಂದು ಜನರ ಅಭಿಪ್ರಾಯ.