ನ್ಯಾಯಾಲಯದ ಡಿಕ್ರಿಗಳಿಗೆ ಕಂದಾಯ ಇಲಾಖೆ ತಡೆ

ವ್ಯರ್ಥವಾಗುತ್ತಿದೆ ಕೋರ್ಟ್‌ ಅಲೆದಾಟ 6 ತಿಂಗಳಿಂದ ವಿಲೇಯಾಗದ ಕಡತಗಳು

Team Udayavani, Aug 27, 2020, 5:40 AM IST

ನ್ಯಾಯಾಲಯದ ಡಿಕ್ರಿಗಳಿಗೆ ಕಂದಾಯ ಇಲಾಖೆ ತಡೆ

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ: ಸ್ಥಿರಾಸ್ತಿಗಳನ್ನು ವಿಂಗಡಿಸುವ ಸಲುವಾಗಿ ನ್ಯಾಯಾಲಯದಲ್ಲಿ ಹತ್ತಾರು ವರ್ಷಗಳಿಂದ ದಾವೆ ಹೂಡಿ, ನ್ಯಾಯಾಲಯದ ಆಯುಕ್ತರ ವರದಿಯಂತೆ ಪಡೆದ ಅಂತಿಮ ಡಿಕ್ರಿ ಆಧಾರದಲ್ಲಿ ಈ ಹಿಂದೆ ನಡೆಯುತ್ತಿದ್ದ ಆರ್‌ಟಿಸಿ ಬದಲಾವಣೆ ಪ್ರಕ್ರಿಯೆಯನ್ನು ಪ್ರಸ್ತುತ ಕಂದಾಯ ಇಲಾಖೆ ತಡೆ ಹಿಡಿದಿರುವುದರಿಂದ ಸಾರ್ವಜನಿಕರಿಗೆ ತಮ್ಮ ಆಸ್ತಿ ಹಕ್ಕು ಸಿಗದಂತಾಗಿದೆ. ರಾಜ್ಯದಲ್ಲಿ ಕೋರ್ಟ್‌ ಡಿಕ್ರಿಗೆ ಸಂಬಂಧಿಸಿ 6 ತಿಂಗಳಿಂದ ಯಾವುದೇ ಕಡತ ವಿಲೇವಾರಿಯಾಗಿಲ್ಲ. ದ.ಕ., ಉಡುಪಿ ಜಿಲ್ಲೆಗಳಲ್ಲಿ 4,000ಕ್ಕೂ ಅಧಿಕ ಅರ್ಜಿಗಳು ಬಾಕಿ ಇದ್ದು, ಕಂದಾಯ ಇಲಾಖೆಯ ಈ ಕ್ರಮದಿಂದ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಾರ್ಥಕವಾಗಿ ನೋಡುವಂತಾಗಿದೆ.

ಲೋಕ ಅದಾಲತ್‌ಗೆ ಹಿನ್ನಡೆ
ನ್ಯಾಯಾಲಯ ಲೋಕ ಅದಾಲತ್‌ಗಳನ್ನು ನಡೆಸಿ ಸ್ಥಿರಾಸ್ತಿ ವಿಭಾಗದ ಬಗ್ಗೆ ನೀಡಿದ ರಾಜಿ ಡಿಕ್ರಿಗಳ ಆಧಾರದಲ್ಲಿ ಪಹಣಿ ಪತ್ರಿಕೆಗಳಲ್ಲಿ ಖಾತಾ ಬದಲಾವಣೆಗೆ ರೈತರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದರು. ಆದರೆ ಆಸ್ತಿ ಹಕ್ಕುದಾರರನ್ನು ಸಾಕಷ್ಟು ಸತಾಯಿಸಿ ಮಗದೊಮ್ಮೆ 11ಇ ನಕ್ಷೆ ನೀಡುವಂತೆ ಕಂದಾಯ ಇಲಾಖೆ ಹಿಂಬರಹ ನೀಡುವ ಮೂಲಕ ಲೋಕ ಅದಾಲತ್‌ ವ್ಯವಸ್ಥೆಗೆ ಹಿನ್ನಡೆಯಾಗಿದೆ. ಜನರು ನ್ಯಾಯಾಲಯದ ರಾಜಿ ಡಿಕ್ರಿ ಹಿಡಿದು ಅಲೆದಾಡುವಂತಾಗಿದೆ.

ನ್ಯಾಯಾಲಯದ ಆದೇಶಕ್ಕೆ ಹಿಂಬರಹ
ಈ ಹಿಂದೆ ನ್ಯಾಯಾಲಯದ ರಾಜಿ ಡಿಕ್ರಿ/ಅಂತಿಮ ಪಾಲು ವಿಂಗಡಣೆ ಡಿಕ್ರಿಗಳ ದೃಢೀಕೃತ ಪ್ರತಿಯನ್ನು ಆಯಾಯ ಸಹಾಯಕ ಆಯುಕ್ತರಿಗೆ ನೀಡಲಾಗುತ್ತಿತ್ತು. ಬಳಿಕ ಅವರು ರಾಜಿ ಡಿಕ್ರಿ, ಅಂತಿಮ ಪಾಲು ವಿಂಗಡನ ಡಿಕ್ರಿಗಳ ಆಧಾರದಲ್ಲಿ ಹಕ್ಕುದಾರರ ಹೆಸರಿಗೆ ಪಹಣಿ
ದಾಖಲಿಸುವಂತೆ ತಹಶೀಲ್ದಾರರಿಗೆ ಆದೇಶಿಸುತ್ತಿದ್ದರು. ಆದರೆ ಕಳೆದ 6 ತಿಂಗಳಿನಿಂದ ಸಹಾಯಕ ಆಯುಕ್ತರಿಗೆ ಕೊಟ್ಟಂತಹ ಎಲ್ಲ ಅರ್ಜಿಗಳಿಗೆ 11ಇ ನಕ್ಷೆ ಒದಗಿಸುವಂತೆ ಹಿಂಬರಹ ನೀಡುತ್ತಿದ್ದಾರೆ. ಇದೊಂದು ಅವೈಜ್ಞಾನಿಕ ಕ್ರಮವಾಗಿದ್ದು, ನ್ಯಾಯಾಲಯದ ಆದೇಶವನ್ನೇ ತಿರಸ್ಕರಿಸಿದಂತೆ ಎಂದು ನ್ಯಾಯವಾದಿಗಳು ಆರೋಪಿಸಿದ್ದಾರೆ.

ಅಸ್ಪಷ್ಟ ಆದೇಶ
ಹಲವಾರು ಪ್ರಕರಣಗಳಲ್ಲಿ ಪಹಣಿ ಪತ್ರಿಕೆಯಲ್ಲಿ ಹೆಸರಿರುವ ವ್ಯಕ್ತಿಗಳು ಮೃತಪಟ್ಟಿರುವುದರಿಂದ ಅವರ ವಾರಸುದಾರರ ಪೈಕಿ ಯಾರಾದ ರೊಬ್ಬರು ನ್ಯಾಯಾಲಯದ ಕದ ತಟ್ಟುವುದು ಸಾಮಾನ್ಯ. ಮೃತರ ಹೆಸರಿನಲ್ಲಿ ಪಹಣಿಯಿದ್ದಾಗ 11ಇ ನಕ್ಷೆಗೆ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ ಎಂಬುದನ್ನು ಕಂದಾಯ ಇಲಾಖೆಯೇ ಸ್ಪಷ್ಟ ಪಡಿಸಬೇಕಿದೆ. ನ್ಯಾಯಾಲಯದ ಕದ ತಟ್ಟಿ ಡಿಕ್ರಿ ಪಡೆದುಕೊಂಡಿರುವ ಸಣ್ಣ ರೈತರು ಅದೆಷ್ಟೋ ಪ್ರಕರಣಗಳಲ್ಲಿ ಪೋಡಿ (ಪ್ಲಾಟಿಂಗ್‌) ಆಗಲಿಲ್ಲ ಎಂಬ ಕಾರಣಕ್ಕೆ 11ಇ ನಕ್ಷೆಯನ್ನು ಪಡೆಯಲಾಗದೆ ಅತಂತ್ರರಾಗಿದ್ದು, ಈ ವಿಚಾರದಲ್ಲೂ ಕಂದಾಯ ಇಲಾಖೆಯಲ್ಲಿ ಸ್ಪಷ್ಟತೆ ಇಲ್ಲ.

ತಪ್ಪದ ಅಲೆದಾಟ
ನೆಮ್ಮದಿ ಕೇಂದ್ರಗಳಲ್ಲಿ ಡಿಕ್ರಿಗಳ ಆಧಾರದಲ್ಲಿ ಅರ್ಜಿ ಸ್ವೀಕರಿಸಲು ಅಗತ್ಯ ವ್ಯವಸ್ಥೆ ಇದ್ದರೂ ಕಂದಾಯ ಇಲಾಖೆ ವ್ಯವಸ್ಥಿತವಾಗಿ 11ಇ ನಕ್ಷೆ ತಯಾರಿಸುವ ಬಗ್ಗೆ ಅರ್ಜಿ ನೀಡುವಂತೆ ಸೂಚಿಸುತ್ತಿರುವುದನ್ನು ಕಂಡಾಗ ಇಲಾಖೆ ಯಾವುದೋ ಒತ್ತಡಕ್ಕೆ ಮಣಿದಂತೆ ಕಾಣಿಸುತ್ತಿದೆ. ಈಗಾಗಲೇ ಹಲವು ತೊಂದರೆಗಳಿಂದ ಬೇಸತ್ತಿರುವ ರೈತರು ಈ ನಡುವೆ ಪಹಣಿ ಪತ್ರಿಕೆ ಬದಲಾವಣೆ ಆಗದೆ ಕೃಷಿ ಸಾಲ ಮೊದಲಾದ ಸೌಲಭ್ಯ ಪಡೆಯಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ/ಜನಪ್ರತಿನಿಧಿಗಳು ರೈತರ ನೋವಿಗೆ ಸ್ಪಂದಿಸಬೇಕಿದೆ.

ಕೋರ್ಟ್‌ ಆದೇಶದಂತೆ 11ಇ ನಕ್ಷೆ ಬೇಕೇ ಬೇಕು. ಕರ್ನಾಟಕ ಕಂದಾಯ ಕಾಯ್ದೆಯಲ್ಲಿ 11ಇ ನಕ್ಷೆ ಪಡೆದು ಪಹಣಿ ಮಾಡುವಂತೆ ಸೂಚನೆ ಇದೆ. ಸರಕಾರ ಈ ಕುರಿತು ತಿದ್ದುಪಡಿ ಆದೇಶ ತಂದಲ್ಲಿ ಮಾತ್ರ ಈ ಹಿಂದಿನಂತೆ 11ಇ ನಕ್ಷೆ ಇಲ್ಲದೆ ಪಹಣಿ ದಾಖಲಿಸಬಹುದು.
– ಸಿದ್ಧಲಿಂಗಾರೆಡ್ಡಿ , ಸಹಾಯಕ ಆಯುಕ್ತರು, ಭೂಮಿ ಮಾನಿಟರಿಂಗ್‌ ಸೆಲ್‌, ಬೆಂಗಳೂರು

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.