ವಿನಾಶದತ್ತ ಬಿದಿರು; ಕಾಣದಾಯಿತು ಕಳಲೆ!

  ಮಳೆಗಾಲದ ರುಚಿಕರ ಆಹಾರ ಪದಾರ್ಥ ಈಗ ಕಾಣಸಿಗುವುದೇ ವಿರಳ

Team Udayavani, Jul 25, 2019, 5:00 AM IST

q-16

ಕಲ್ಲುಗುಡ್ಡೆ: ಮಳೆಗಾಲ ಬಂದರೆ ಸಾಕು ಗ್ರಾಮೀಣ ಭಾಗದ ಜನರು ಪ್ರಕೃತಿಯಲ್ಲಿಯೇ ಸಿಗುವ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಬಳಸಿಕೊಳ್ಳುತ್ತಾರೆ. ಅದರಲ್ಲೂ ತುಳುನಾಡಿನಲ್ಲಿ ಇದರ ಬಗ್ಗೆ ಆಸಕ್ತಿ ಹೆಚ್ಚು. ಇದರಲ್ಲಿ ಕಣಿಲೆ (ಕಳಲೆ) ಒಂದು. ಆದರೆ ಬಿದಿರಿನ ವಿನಾಶದಿಂದ ಕಳಲೆ ಕಾಣುವುದೇ ವಿರಳವಾಗಿದೆ.

ಹೊಸ ಬಿದಿರಿನ ಮೊಳಕೆಯೇ ಕಳಲೆ. ಕರಾವಳಿ ಭಾಗದಲ್ಲಿ ವರ್ಷಗಳ ಹಿಂದೆ ಯಥೇತ್ಛವಾಗಿ ಬಿದಿರುಗಳು ಕಾಡಿನಲ್ಲಿ ಕಾಣಸಿಗುತ್ತಿದ್ದು, ಹೀಗಾಗಿ ಮಳೆಗಾಲ ಕಾಲಿರಿಸಿದ ಬೆನ್ನಲ್ಲೇ ಕಳಲೆಗಳು ಬೆಳೆಯುತ್ತಿದ್ದು, ಜನರು ಕತ್ತಿ ಹಿಡಿದು ಕಳಲೆಯನ್ನು ಅರಸಿಕೊಂಡು ತೆರಳುತ್ತಿದ್ದರು. ಆದರೆ ಈಗ ಬಿದಿರು ರಾಜನ್‌ (ಹೂವು) ಬಿಟ್ಟು, ಒಣಗಿ ಸಾಯುತ್ತಿದ್ದು, ಕಳಲೆಗಳೂ ಸಿಗುತ್ತಿಲ್ಲ.

ಆಹಾರ ಪದಾರ್ಥ
ಬಿದಿರು ಬೆಳೆದ ನಾಲ್ಕೆ çದು ವರ್ಷಗಳ ಬಳಿಕ ಅದರ ಬುಡದ ಬೇರುಗಳಿಂದ ಹೊಸ ಮೊಳಕೆಗಳು ಹುಟ್ಟುತ್ತವೆ. ಅದುವೇ ಕಳಲೆ. ಅವುಗಳನ್ನು ಕತ್ತರಿಸಿ ಮನೆಗೆ ತಂದು ಅದರ ಎಳೆಯ ಭಾಗವನ್ನು ಚಿಕ್ಕದಾಗಿ ಕತ್ತರಿಸಿ ಬಳಿಕ ನೀರಿನಲ್ಲಿ ನೆನೆಯಲು ಹಾಕಿ ದಿನ ಕಳೆದ ಬಳಿಕ ತೆಗೆದು ಶುದ್ಧ ನೀರಿನಿಂದ ತೊಳೆದು ಬಳಿಕ ಸಾರು, ಪಲ್ಯ ಮಾಡಲಾಗುತ್ತದೆ. ತುಳುವಿನ ಆಟಿ ತಿಂಗಳಲ್ಲಿ ಕಳಲೆ ಹೆಚ್ಚಾಗಿ ಕಂಡುಬರುತ್ತಿದ್ದು, ಆಟಿ ವಿಶೇಷ ಖಾದ್ಯಗಳಲ್ಲಿ ಕಳಲೆಯ ಪದಾರ್ಥವೂ ಒಂದು. ಕಾಡಿನ ಬದಿಯ ಬಿದಿರು ಮೆಳೆಗಳಲ್ಲಿ ಈ ಹಿಂದೆ ಯಥೇತ್ಛವಾಗಿ ಸಿಗುತ್ತಿದ್ದ ಕಳಲೆಗಳು, ಈಗ ನಗರವಾಸಿಗಳ ಜತೆಗೆ ಹಳ್ಳಿಗರಿಗೂ ವಿರಳವೇ.

ಆರೋಗ್ಯ ವರ್ಧಕ
ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಒಳಗೊಂಡಿರುವ ಕಳಲೆಯಲ್ಲಿ ನಾರಿನಲ್ಲಿ ಪಿಷ್ಟೇತರ ಕಾಬೋì ಹೈಡ್ರೇಟ್‌ಗಳು ಮಿತವಾದ ಪ್ರಮಾಣದಲ್ಲಿರುತ್ತವೆ. ಮಲಬದ್ಧತೆಯನ್ನು ನಿವಾರಿಸುವಲ್ಲಿ ನೆರವಾಗುತ್ತವೆ. ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸಲೂ ಸಹಾಯಕ. ಇದರ ವಿಟಾಮಿನ್‌ ಅಂಶಗಳು ಶರೀರದ ಜೀವಕೋಶಗಳಲ್ಲಿ ಹಾರ್ಮೋನ್‌ಗಳ ಉತ್ಪತ್ತಿ ಮತ್ತು ಪಚನ ಕ್ರಿಯೆಗಳಿಗೆ ಅಗತ್ಯವಾಗಿವೆ. ಮಳೆಗಾಲದಲ್ಲಿ ಶೀತದಿಂದ ರಕ್ಷಿಸಲೂ ಪೂರಕವಾಗುತ್ತದೆ.

ಸಾಂಬಾರು, ಪಲ್ಯ
ವರ್ಷದಲ್ಲಿ ಕನಿಷ್ಠ ಒಂದು ಬಾರಿ ಕಳಲೆಯ ಪದಾರ್ಥ ತಿನ್ನಬೇಕು. ಪಲ್ಯ, ಸಾಂಬಾರು, ಉಪ್ಪಿನಕಾಯಿ ಇತ್ಯಾದಿಗಳಲ್ಲೂ ಕಳಲೆ ಬಳಸಿದರೆ ರುಚಿ ಹೆಚ್ಚುತ್ತದೆ. ಇವುಗಳನ್ನು ತೆಳುವಾಗಿ ಹೆಚ್ಚಿ ಉಪ್ಪಿನಲ್ಲಿ ಹಾಕಿಟ್ಟರೆ ಬೇಕೆಂದಾಗ ಬಳಸಬಹುದು.

ಬಿದಿರು ನಾಶ
ಸುಮಾರು 60 ವರ್ಷಗಳಿಗೆ ಒಂದು ಸಲ ಬಿದಿರು ಹೂವು ಬಿಟ್ಟು ಇಡೀ ಮೆಳೆಯೇ ಸಾಯುತ್ತದೆ.
ಈಗ ಮತ್ತೆ ಬಿದಿರು ಮೆಳೆಗಳು ಬೆಳೆಯಲು ಕೆಲವು ವರ್ಷಗಳೇ ಬೇಕು. ಹೀಗಾಗಿ, ಸದ್ಯಕ್ಕೆ ಕಳಲೆಯೂ ಸಿಗುವುದು ಕಷ್ಟ ಎನ್ನುತ್ತಾರೆ ಹಳ್ಳಿಗರು.

 ಬಿದಿರು ಬೆಳೆಸುವ ಅನಿವಾರ್ಯತೆ
ಬಿದಿರು ಮೆಳೆಗಳು ರಾಜನ್‌ (ಹೂವು) ಬಿಟ್ಟು ನಾಶವಾಗಿರುವ ಕಾರಣ, ಈ ಸಲ ಕಳಲೆಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಪ್ರಕೃತಿಯಲ್ಲಿ ನಾವು ಬಿದಿರು ಮೆಳೆಗಳನ್ನು ಬೆಳೆಸುವುದು ಅನಿವಾರ್ಯ. ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
– ಉಮೇಶ್‌ ಶೆಟ್ಟಿ ಕಲ್ಲುಗುಡ್ಡೆ, ನೂಜಿಬಾಳ್ತಿಲ

-  ದಯಾನಂದ ಕಲ್ನಾರ್‌

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.