“ಓದುವ ಹವ್ಯಾಸ ಬೆಳೆಸಿಕೊಳ್ಳಿ’
ಓದುವ ತಿಂಗಳು ಕಾರ್ಯಕ್ರಮ
Team Udayavani, Jul 18, 2019, 5:00 AM IST
ಬಂಟ್ವಾಳ: ಗ್ರಂಥಾಲಯ ನೆಮ್ಮದಿ ನೀಡುವ, ಮನಸ್ಸು ಕೇಂದ್ರೀಕೃತಗೊಳ್ಳುವ ದೇವಾಲಯ ಇದ್ದಂತೆ. ಓದುವ ಹವ್ಯಾಸವನ್ನು ಮಕ್ಕಳು ಸ್ವತಃ ಬೆಳೆಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ ಹೇಳಿದರು.
ಬಿ.ಸಿ.ರೋಡ್ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಓದುವ ತಿಂಗಳು ಕಾರ್ಯಕ್ರಮದಲ್ಲಿ ಅವರು ಮಾತ ನಾಡಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾ ಲಯ ಮಂಗಳೂರು ಹಾಗೂ ಬಂಟ್ವಾಳ ಶಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಉದ್ದೇಶ ಈಡೇರಲಿ ಎಂದರು.
ಜಯಂತಿ ಗಂಗಾಧರ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಓದುವ ಮನಸ್ಸು ಮಾಡಿದಾಗ ವ್ಯಕ್ತಿತ್ವ ವಿಕಸನ ಗೊಳ್ಳುತ್ತದೆ. ಕತೆ-ಕವನಗಳು ಮನಸ್ಸು ಶುದ್ಧಿ ಮಾಡುತ್ತವೆ ಎಂದರು.
ಮಕ್ಕಳಿಗೆ ಕರಕುಶಲ ವಸ್ತುಗಳ ತಯಾರಿಕೆ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲಾ ಕೇಂದ್ರ ಗ್ರಂಥಾ ಲಯದ ಗ್ರಂಥಾಧಿಕಾರಿ ಮಮತಾ ರೈ, ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥ ಪಾಲಕಿ ಗಾಯತ್ರಿ, ಓದುಗರಾದ ಜೆರೊಮ್ ರೋಡ್ರಿಗಸ್, ಗ್ರಂಥಾಲಯ ಸಿಬಂದಿ ಸುಜಾತಾ ಹಾಗೂ ಯಶವಂತಿ ಉಪಸ್ಥಿತರಿದ್ದರು. ಶಾಖಾ ಗ್ರಂಥ ಪಾಲಕಿ ಪ್ರಣಿತಪ್ರಿಯಾ ಮೊಂತೆರೊ ಸ್ವಾಗತಿಸಿ, ನಿರೂಪಿಸಿದರು. ಶಾಖಾ ಗ್ರಂಥ ಪಾಲಕಿ ನಮಿತಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ