ಚರಂಡಿಗೆ ಉರುಳಿದ ಕಾರು: ಪ್ರಯಾಣಿಕರ ಸಹಿತ ಚಾಲಕ ಅದೃಷ್ಟವಶಾತ್ ಪಾರು
Team Udayavani, Feb 14, 2020, 1:40 PM IST
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಚರಂಡಿಗೆ ಉರುಳಿದ ಘಟನೆ ಬೆಳ್ಳಾರೆ- ಸೋಣಂಗೇರಿ ರಸ್ತೆಯ ಕಲ್ಲೋಣಿ ಯಲ್ಲಿ ನಡೆದಿದೆ.
ಐವರ್ನಾಡಿನ ಹೇಮಂತ್ ಅವರು ಚಲಾಯಿಸುತ್ತಿದ್ದ ಕಾರು ಇದಾಗಿದೆ.
ಪ್ರಯಾಣಿಕರ ಸಹಿತ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪಾರಾಗಿದ್ದಾರೆ.