ಪ್ರಾಥಮಿಕ, ಪ್ರೌಢ, ಕಾಲೇಜು ತರಗತಿ ಪ್ರಾರಂಭ : ಬಸ್‌ ಪಾಸ್‌ಗಳಿಗೆ ಬೇಡಿಕೆ ಹೆಚ್ಚಳ


Team Udayavani, Jan 18, 2021, 3:20 AM IST

ಪ್ರಾಥಮಿಕ, ಪ್ರೌಢ, ಕಾಲೇಜು ತರಗತಿ ಪ್ರಾರಂಭ : ಬಸ್‌ ಪಾಸ್‌ಗಳಿಗೆ ಬೇಡಿಕೆ ಹೆಚ್ಚಳ

ಪುತ್ತೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಾ ಗುತ್ತಿರುವ ಪರಿಣಾಮ ರಿಯಾಯಿತಿ ದರದ ಬಸ್‌ ಪಾಸ್‌ ಬೇಡಿಕೆ ಕೂಡ ಹೆಚ್ಚಾಗಿದೆ.

ಕಳೆದ ಹತ್ತು ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳು ಇಲ್ಲದ ಕಾರಣ ಬಸ್‌ ಪಾಸ್‌ ವಿತರಣೆ ಸ್ಥಗಿತವಾಗಿತ್ತು. ವಿದ್ಯಾಗಮ, ಎಸೆಸೆಲ್ಸಿ, ಪಿಯುಸಿ ತರಗತಿಗಳು ಜನವರಿಯಲ್ಲಿ ಪುನಾರರಂಭಗೊಂಡಿರುವ ಹಿನ್ನೆಲೆಯಲ್ಲಿ ಬಸ್‌ ಪಾಸ್‌ಗೂ ಬೇಡಿಕೆ ಕಂಡು ಬಂದಿದೆ.

ಹಳೆ ಬಸ್‌ ಪಾಸ್‌ಗೆ ಕಾಲಾವಕಾಶ :

ಕಳೆದ ವರ್ಷದ ಶೈಕ್ಷಣಿಕ ಅವಧಿ ಯಲ್ಲಿನ ಬಸ್‌ಪಾಸ್‌ ಅವಧಿ ಎಪ್ರಿಲ್‌ ತನಕ ಇತ್ತಾದರೂ, ಕೊವೀಡ್‌ ಕಾರಣದಿಂದ ಮಾರ್ಚ್‌ನಲ್ಲೇ ತರಗತಿ ಗಳು ಮೊಟಕುಗೊಂಡಿತು. ಹೀಗಾಗಿ ಆ ಅವಧಿಯ ಪಾಸ್‌ ಅನ್ನು 2021 ಜ. 31ರೊಳಗೆ ಬಳಸಲು ಸರಕಾರ ಅನುಮತಿ ನೀಡಿದೆ. ಪಾಸ್‌ ಇಲ್ಲದಿದ್ದರೆ ಶುಲ್ಕ ಪಾವತಿಯ ರಶೀದಿ ತೋರಿಸಿ ಪ್ರಯಾಣಿಸಬಹುದು. ಹಾಗಾಗಿ ಸದ್ಯಕ್ಕೆ ಹಳೆ ಬಸ್‌ಪಾಸ್‌ ಬಳಸಬಹುದು. ಫೆ. 1ರಿಂದ ಹೊಸ ಬಸ್‌ ಪಾಸ್‌ ಅನ್ವಯ ಆಗುವ ಕಾರಣ ಪಾಸ್‌ ಪಡೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆ ಕಂಡಿದೆ.

ಹೀಗಿದೆ ದರ :

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಸ್‌ ನೀಡಲಾಗುತ್ತಿದ್ದು, 150 ರೂ. ಪ್ರೊಸೆಸಿಂಗ್‌ ಚಾರ್ಜ್‌ ಪಡೆಯಲಾಗುತ್ತಿದೆ. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೂ ಇದೇ ಮಾನ ದಂಡ ವಿದೆ. ಪ್ರೌಢಶಾಲಾ ಬಾಲಕಿಯರಿಗೆ 550 ರೂ., ಬಾಲಕರಿಗೆ 750 ರೂ., ಕಾಲೇಜು ವಿದ್ಯಾರ್ಥಿಗಳಿಗೆ 1,050 ರೂ., ವೃತ್ತಿಪರ ತರಗತಿಗಳ ವಿದ್ಯಾರ್ಥಿಗಳಿಗೆ 1,550 ರೂ., ಸಂಧ್ಯಾ ಕಾಲೇಜು, ಪಿಎಚ್‌.ಡಿ. ಸಂಶೋಧನ ವಿದ್ಯಾರ್ಥಿಗಳಿಗೆ 1,310 ರೂ. ದರ ನಿಗದಿಪಡಿಸಲಾಗಿದೆ. ಐಟಿಐ ವಿದ್ಯಾರ್ಥಿ ಗಳಿಗೆ 12 ತಿಂಗಳು ಅವಧಿ ಹೊರತುಪಡಿಸಿ ಉಳಿದ ಎಲ್ಲರಿಗೆ 10 ತಿಂಗಳ ಅವಧಿಯ ಪಾಸ್‌ ನೀಡಲಾಗುತ್ತಿದೆ.

ಆನ್‌ಲೈನ್‌ ಅರ್ಜಿ ;

ಬಸ್‌ಪಾಸ್‌ಗಾಗಿ ಸೇವಾ ಸಿಂಧೂ ಪೋರ್ಟಲ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಯಾವ ವಿಭಾಗದಲ್ಲಿ ಪಾಸ್‌ ಪಡೆಯಲಾಗುವುದು ಎನ್ನುವ ಆಯ್ಕೆಯನ್ನು ಅಲ್ಲಿ ಮಾಡಬೇಕು. ಅದರ ಆಧಾರದಲ್ಲಿ ಇಲಾಖೆ ಪರಿಶೀಲನೆ ನಡೆಸಿ ಪಾಸ್‌ ನೀಡಲು ಒಪ್ಪಿಗೆ ಸೂಚಿಸುತ್ತದೆ.

ಆಯಾ ವಿದ್ಯಾರ್ಥಿಗಳು ಅಥವಾ ಶಾಲೆಯ ಮೂಲಕ ಬಸ್‌ ನಿಲ್ದಾಣದಲ್ಲಿನ ಕೌಂಟರ್‌ಗಲ್ಲಿ ಶುಲ್ಕ ಪಾವತಿಸಿ ಪಾಸ್‌ ಪಡೆದುಕೊಳ್ಳಬಹುದು.

ಪಾಸ್‌ ವಿತರಣೆ :

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ವ್ಯಾಪ್ತಿಯ ಮಡಿಕೇರಿ, ಸುಳ್ಯ, ಪುತ್ತೂರು, ಬಿ.ಸಿ.ರೋಡ್‌, ಧರ್ಮಸ್ಥಳ ಡಿಪೋ ವ್ಯಾಪ್ತಿಯಲ್ಲಿ 5,250ಕ್ಕೂ ಅಧಿಕ ಬಸ್‌ ಪಾಸ್‌ ವಿತರಿಸಲಾಗಿದೆ. ಜನವರಿ ಕೊನೆ ವೇಳೆಗೆ ಪಾಸ್‌ ವಿತರಣೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಳೆದ ಶೈಕ್ಷಣಿಕ ಅವಧಿಯಲ್ಲಿ 46 ಸಾವಿರ ಪಾಸ್‌ವಿತರಿಸಲಾಗಿತ್ತು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ದಾಖಲೆಗಳು ಸಮ ರ್ಪಕವಾಗಿದ್ದರೆ ಇಲಾಖೆ ಅನುಮತಿ ನೀಡುತ್ತದೆ. ಬಸ್‌ ನಿಲ್ದಾಣಗಳಲ್ಲಿ ಕೌಂಟರ್‌ ತೆರೆದು ಪಾಸ್‌ ವಿತರಿಸಲಾಗುತ್ತಿದೆ. ಕಳೆದ ವರ್ಷದ ಪಾಸ್‌ ಅವಧಿಯನ್ನು ಜ. 31ರ ತನಕ ವಿಸ್ತರಿಸಲಾಗಿದ್ದು, ಫೆ. 1ರಿಂದ ಹೊಸ ಪಾಸ್‌ ಅನ್ವಯವಾಗಲಿದೆ. -ಜಿ.ಜಯಕರ ಶೆಟ್ಟಿ, ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ, ಪುತ್ತೂರು

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.