ಕಡಬ: ಕಡ್ಯ ಕೊಣಾಜೆ ಪ್ರದೇಶದಲ್ಲಿ ಹಾಡಹಗಲೇ ಮನೆ ಅಂಗಳಕ್ಕೆ ನುಗ್ಗಿದ ಕಾಡಾನೆ
Team Udayavani, Nov 21, 2021, 6:54 PM IST
ಸುಬ್ರಹ್ಮಣ್ಯ: ಕಾಡಾನೆ ಹಿಂಡು ಹಾಡು ಹಗಲಲ್ಲೇ ಮನೆ ಅಂಗಳ, ತೋಟಕ್ಕೆ ಲಗ್ಗೆ ಇಟ್ಟು ಜನರನ್ನು ಭಯಬೀತಿ ಗೊಳಿಸುತ್ತಿರುವುದು ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕಡ್ಯ ಕೊಣಾಜೆ ಗ್ರಾ.ಪಂ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಹಾಗೂ ಹಾಡು ಹಗಲಲ್ಲೂ ತೋಟಕ್ಕೆ ನುಗ್ಗಿ ಕೃಷಿ ನಾಶ ಪಡಿಸುತ್ತಿರುವ ದೂರು ಕೇಳಿಬಂದಿದೆ.
ರವಿಪ್ರಸಾದ್ ಭಟ್ ಗುಜ್ಜಲ, ನರಸಿಂಹ ಭಟ್ ಪೆರಡೆ, ಮಧುಸೂದನ್ ಭಟ್ ಕಡ್ಯ, ನಾಗರಾಜ್ ಭಟ್ ಕಡ್ಯ, ರವೀಂದ್ರ ಬತ್ತಿಲ್ ಹಾಗೂ ಇತರರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ನೂರಾರು ಅಡಿಕೆ ಗಿಡ, ಬಾಳೆ, ಇತರೆ ಕೃಷಿಗಳನ್ನು ನಾಶ ಪಡಿಸಿದೆ.
ಕಾಡಾನೆ ಉಪಟಳ ದಿಂದಾಗಿ ಜನತೆ ಭಯಭೀತರಾಗಿದ್ದು, ಹಗಲಲ್ಲೂ ಮನೆ ಹೊರಗೆ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.