ನಕಲಿ ವಿಮೆ: ಉದಯವಾಣಿ ವರದಿ ಮೂಡಿಸಿದ ಸಂಚಲನ: ಓರ್ವನ ವಿಚಾರಣೆ, ತಪ್ಪೊಪ್ಪಿಗೆ

ನಕಲಿ ವಿಮೆ: ಉದಯವಾಣಿ ವರದಿ ಮೂಡಿಸಿದ ಸಂಚಲನ

Team Udayavani, Oct 16, 2020, 1:44 AM IST

ನಕಲಿ ವಿಮೆ: ಉದಯವಾಣಿ ವರದಿ ಮೂಡಿಸಿದ ಸಂಚಲನ: ಓರ್ವನ ವಿಚಾರಣೆ, ತಪ್ಪೊಪ್ಪಿಗೆ

ಸಾಂದರ್ಭಿಕ ಚಿತ್ರ

ಪುತ್ತೂರು: ಅಧಿಕೃತ ಏಜೆನ್ಸಿಗಳ ಕೋಡ್‌ ಬಳಸಿ ನಕಲಿ ವಾಹನ ವಿಮೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಧಿಕೃತ ಏಜೆಂಟ್‌ ನೀಡಿದ ದೂರಿನ ಅನ್ವಯ ನಗರ ಪೊಲೀಸರು ಓರ್ವ ಆರ್‌ಟಿಒ ದಲ್ಲಾಳಿಯನ್ನು ವಿಚಾರಣೆ ನಡೆಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ.

“ಅಧಿಕೃತ ಏಜೆನ್ಸಿಗಳ ಕೋಡ್‌ ಬಳಸಿ ನಕಲಿ ವಾಹನ ವಿಮೆ’ ಶೀರ್ಷಿಕೆಯಡಿ ಅ. 15ರಂದು ಉದಯವಾಣಿ ವರದಿ ಪ್ರಕಟಿಸಿದ ಬೆನ್ನಲ್ಲೇ ಈ ನಕಲಿ ವ್ಯವಹಾರದ ಕರಾಳ ಮುಖ ಹೊರ ಬರಲಾರಂಭಿಸಿದೆ. ಆರ್‌ಟಿಒ ದಲ್ಲಾಳಿ ಪುತ್ತೂರಿನ ಹೊರವಲಯದ ಅಶ³ಕ್‌ ತಪ್ಪೊಪ್ಪಿಕೊಂಡಿರುವ ವ್ಯಕ್ತಿ.

ಆರ್‌ಸಿ ಬದಲಾವಣೆಗೆ ನಕಲಿ ವಿಮೆ ಬಳಕೆ
ಅಬ್ದುಲ್‌ ಖಾದರ್‌ ಅವರು ಜಲೀಲ್‌ಗೆ ಅಟೋ ರಿಕ್ಷಾ ಮಾರಾಟ ಮಾಡಿದ್ದು, ಜಲೀಲ್‌ ಅ. 12ರಂದು ಪುತ್ತೂರು ವಿಮಾ ಕಚೇರಿಗೆ ಬಂದು ವಿಮೆಯನ್ನು ತನ್ನ ಹೆಸರಿಗೆ ಬದಲಾಯಿಸಲು ಮುಂದಾದ ಸಂದರ್ಭ ಈ ಆವಾಂತರ ಬೆಳಕಿಗೆ ಬಂದಿದೆ. ಆರ್‌ಸಿ ಬದಲಾವಣೆಗೆ ಆರ್‌ಟಿಒ ಕಚೇರಿಗೆ ವಿಮಾ ಪ್ರತಿ ಸಲ್ಲಿಸಬೇಕು. ಇದಕ್ಕಾಗಿ ನಕಲಿ ವಿಮೆ ತಯಾರಿಸಿ ನೀಡಲಾಗಿದೆ. ಇಲ್ಲಿ ಅಶ³ಕ್‌ನು ಖಾದರ್‌ ಅವರಿಗೆ ಆರ್‌ಸಿ ಬದಲಾವಣೆ ಸಂದರ್ಭ ಅಧಿಕೃತ ಸಂಸ್ಥೆಯ ಏಜೆನ್ಸಿ ಕೋಡ್‌ ಬಳಸಿ ಖಾದರ್‌ ಹೆಸರಿನಲ್ಲಿ ವಿಮೆ ನೀಡಿದ್ದಾರೆ. ಇದು ನಕಲಿ ಅನ್ನುವ ವಿಚಾರ ಖಾದರ್‌ ಅವರ ಗಮನಕ್ಕೂ ಬಂದಿರಲಿಲ್ಲ. ಅವರು ಅಸಲಿ ವಿಮೆಯೆಂದೇ ಭಾವಿಸಿ ವಿಮೆ ಸಹಿತ ಜಲೀಲ್‌ಗೆ ಅಟೋ ಮಾರಾಟ ಮಾಡಿದ್ದರು. ವಿಮೆ ನಕಲಿಯೆಂದು ತಿಳಿದಾಗ ಅಧಿಕೃತ ಸಂಸ್ಥೆಯ ಏಜೆಂಟ್‌ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಾಹನದ ಮಾಲಕನನ್ನು ವಿಚಾರಿಸಿದಾಗ ಆತ ತನಗೆ ವಿಮೆ ಮಾಡಿಕೊಟ್ಟ ದಲ್ಲಾಳಿ ಅಶ³ಕ್‌ನ ಮಾಹಿತಿ ನೀಡಿದರು.

ವಿಮೆ ಅಧಿಕಾರಿಗಳ ನಿರ್ಲಕ್ಷ ಕಾರಣ
ಆರ್‌ಸಿ ಬದಲಾವಣೆ ಸಂದರ್ಭ ಆ ವಾಹನದ ವಿಮೆ ಪ್ರತಿಯನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಬೇಕು. ಆರ್‌ಟಿಒ ಅಧಿಕಾರಿಗಳು ಪರಿಪೂರ್ಣವಾಗಿ ಪರಿಶೀಲಿಸದೆ ವಿಮೆ ಪಾಲಿಸಿ ಪತ್ರದಲ್ಲಿ ವಾಹನದ ಮಾಹಿತಿ ಮತ್ತು ದಿನಾಂಕ ಮಾತ್ರ ನೋಡಿ ಒಪ್ಪಿಗೆ ನೀಡುತ್ತಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಅನಧಿಕೃತ ದಲ್ಲಾಳಿಗಳು ಆರ್‌ಸಿ ವರ್ಗಾವಣೆಗೆ ವಿಮೆ ಕಟ್ಟುವ ಹೆಸರಿನಲ್ಲಿ ವಾಹನ ಮಾಲಕರಿಂದ ಹಣ ವಸೂಲಿ ಮಾಡಿ, ಅನಂತರ ನಕಲಿ ವಿಮೆ ಸೃಷ್ಟಿಸುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ಜಾಲ ಸಕ್ರಿಯವಾಗಲು ಕಾರಣ ಎನ್ನುವ ಅಂಶವೀಗ ಸ್ಪಷ್ಟವಾಗಿದೆ.

ಕ್ಯುಆರ್‌ ಕೋಡ್‌ ಸ್ಕ್ಯಾನ್‌
ವಿಮೆ ಅಸಲಿ/ನಕಲಿ ಬಯಲು ತಾನು ಹೊಂದಿರುವ ವಿಮೆ ನಕಲಿಯೊ ಅಥವಾ ಅಸಲಿಯೋ ಎಂದು ಅರಿಯಲು ಸ್ಮಾರ್ಟ್‌ ಫೋನ್‌ ಹೊಂದಿರುವ ವಿಮಾದಾರರು ವಿಮಾ ಪ್ರತಿಯಲ್ಲಿರುವ ಕ್ಯುಆರ್‌ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದರೆ ಖಾತರಿ ಆಗುತ್ತದೆ. ಆದರೆ ಈ ಕಾರ್ಯವನ್ನು ಆರ್‌ಟಿಒ ಅಧಿಕಾರಿಗಳಾಗಲಿ, ಸಂಚಾರ ಪೊಲೀಸರಾಗಲಿ ಮಾಡುತ್ತಿಲ್ಲ.

ಪೈಪೋಟಿ ನೆಪ; ಸೌಲಭ್ಯಕ್ಕೆ ಕುತ್ತು!
ವಾಹನ ವಿಮೆ ಮಾಡಿಸಿಕೊಡಲು ಹಲವು ಪೋರ್ಟಲ್‌ ಕಚೇರಿಗಳು ಕಾರ್ಯ ನಿರ್ವ ಹಿಸುತ್ತಿದ್ದು ಕೆಲವು ವಿಮಾ ಪ್ರತಿನಿಧಿಗಳು ಭಾರೀ ರಿಯಾಯಿತಿ ದರದಲ್ಲಿ ಪಾಲಿಸಿ ಮಾಡುವ ಆಫರ್‌ ನೀಡುತ್ತಿದ್ದಾರೆ. ಇದರ ನಿಜವಾದ ಅಸಲಿಯತ್ತು ಪರಿಶೀಲಿಸಿದರೆ ದರ ಕಡಿಮೆಯಿಂದ ವಿಮಾದಾರ ಹಲವು ಸೌಲಭ್ಯಗಳಿಂದ ವಂಚಿತನಾಗುತ್ತಿದ್ದಾನೆ ಎನ್ನುವುದು ಖಚಿತ. ಉದಾಹರಣೆಗೆ ವಾಹನದ ಡಿಎಲ್‌ ಹೊಂದಿರುವ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಅಥವಾ ಅಂಗ ಊನವಾಗಿ ಕೆಲಸ ಮಾಡುವ ಶಕ್ತಿ ಕಳೆದುಕೊಂಡರೆ ತನ್ನ ವಾಹನಕ್ಕೆ ಪಾವತಿಸಿದ ವಿಮೆಯಿಂದ 15 ಲಕ್ಷ ರೂ. ಪರಿಹಾರ ಕುಟುಂಬಕ್ಕೆ ದೊರೆಯುತ್ತದೆ. ಕಡಿಮೆ ದರದಲ್ಲಿ ಪಾಲಿಸಿ ಮಾಡಿಕೊಡುವ ಸಂದರ್ಭ ಇಂತಹ ಸೌಲಭ್ಯ ದೊರೆಯದಂತಹ ಪಾಲಿಸಿಯನ್ನು ನೀಡಲಾಗುತ್ತಿದೆ. ಈ ಬಗ್ಗೆ ವಿಮೆ ಕಂತು ಪಾವತಿಸುವ ಸಂದರ್ಭ ಫಲಾನುಭವಿ ಎಚ್ಚರಿಕೆಯಿಂದ ಇರಬೇಕು ಎಂದು ವಿಮಾ ತಜ್ಞರು ತಿಳಿಸಿದ್ದಾರೆ.

ಏಜೆಂಟ್‌ ನೀಡಿದ ದೂರಿನ ಆಧಾರದಲ್ಲಿ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆತ ಎರಡು ನಕಲಿ ವಿಮೆ ಮಾಡಿರುವ ಬಗ್ಗೆ ಒಪ್ಪಿದ್ದಾನೆ. ಎರಡು ದಿನದೊಳಗೆ ಅಸಲಿ ವಿಮೆ ಹಾಜರುಪಡಿಸುವಂತೆ ಸೂಚಿಸಲಾಗಿದೆ.
– ಜಂಬೂರಾಜ್‌,  ಎಸ್‌ಐ ಪುತ್ತೂರು ನಗರ ಠಾಣೆ

ಟಾಪ್ ನ್ಯೂಸ್

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ; ಪ್ರಕರಣ ದಾಖಲು

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.