ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ: ಆರೋಪಿ ಎಸ್ಕೇಪ್
Team Udayavani, Jan 26, 2021, 2:22 AM IST
ಉಪ್ಪಿನಂಗಡಿ: ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡುವ ಅಸಾಮಿಯೋರ್ವ ನಕಲಿ ಚಿನ್ನವನ್ನು ಅಡವಿರಿಸಿ ಲಕ್ಷಾಂತರ ರೂಪಾಯಿ ಹಣವನ್ನು ದೋಚುತ್ತಿರುವ ವಿದ್ಯಾಮಾನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕೇರಳ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರೊಂದರಲ್ಲಿ ಆಗಮಿಸುವ ಆತ ಉಪ್ಪಿನಂಗಡಿಯಲ್ಲಿನ ಸಹಕಾರಿ ಹಣಕಾಸು ಸಂಸ್ಥೆಗಳಿಗೆ ಗಣ್ಯ ಗ್ರಾಹಕನ ಸೋಗಿನಲ್ಲಿ ಎಂಟ್ರಿ ಕೊಟ್ಟು ತರಾತುರಿಯಲ್ಲಿದ್ದೇನೆಂಬ ಭಾವವನ್ನು ವ್ಯಕ್ತಪಡಿಸಿ ತಾನು ತಂದಿರುವ ನಕಲಿ ಚಿನ್ನಾಭರಣವನ್ನು ಅಡಮಾನವಿರಿಸಿ ಸಾಲವಾಗಿ ಹಣವನ್ನು ಕೇಳುತ್ತಾನೆ. ಅಸಲಿ ಚಿನ್ನಾಭರಣದಂತೆ ಸಹಜ ತೂಕದ ಆಭರಣಗಳು ಮೇಲ್ನೋಟಕ್ಕೆ ನೈಜ ಚಿನ್ನಾಭರಣಗಳಂತೆ ಕಾಣುತ್ತಿರುವುದರಿಂದ ಚಿನ್ನಾಭರಣ ಪರೀಕ್ಷಕ ಬರುವವರೆಗೆ ಕಾಯದೆ ಸಹಕಾರಿ ಸಂಸ್ಥೆಗಳು ಆತನಿಗೆ ಸಾಲ ರೂಪದಲ್ಲಿ ಹಣವನ್ನಿತ್ತು ಕಳುಹಿಸಿಕೊಟ್ಟಿದ್ದವು. ಆತ ಹೋದ ಬಳಿಕ ಬರುವ ಚಿನ್ನಾಭರಣ ಪರೀಕ್ಷಕ ಆಭರಣವನ್ನು ಪರೀಕ್ಷಿಸಿದಾಗಲೆ ಅವುಗಳು ನಕಲಿ ಚಿನ್ನಾಭರಣವೆನ್ನುವುದು ತಿಳಿಯುತ್ತಿದ್ದವು. ಆ ವೇಳೆಗೆ ವಂಚಕ ನಾಪತ್ತೆಯಾಗುವುದರೊಂದಿಗೆ ಸಂಸ್ಥೆಗಳು ವಂಚನೆಗೆ ತುತ್ತಾದಂತಾಗಿದೆ.
ಉಪ್ಪಿನಂಗಡಿಯಲ್ಲಿ ಸೋಮವಾರ ಒಂದೇ ದಿನದಲ್ಲಿ ನಾಲ್ಕು ಸಹಕಾರಿ ಸಂಸ್ಥೆಗಳಿಗೆ ವಂಚಿಸಿರುವ ಆತ ರವಿವಾರ ಶುಭಾರಂಭಗೊಂಡ ಸಹಕಾರಿ ಸಂಸ್ಥೆಗೆ ವಂಚಿಸಲು ಮುಂದಾದಾಗ ಈತನ ವಂಚನ ಪ್ರಕರಣ ಬಯಲಾಗಿದೆ. ಆದರೆ ಆತ ಪರಾರಿಯಾಗಿದ್ದ. ಉಪ್ಪಿನಂಗಡಿ ಪೊಲೀಸರು ವಂಚಕನ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ