ಕೋವಿಡ್‌ ವೇಳೆ ಕೈಹಿಡಿದ ಮತ್ಸ್ಯಗಂಧ


Team Udayavani, Oct 23, 2020, 6:00 AM IST

Fishಕೋವಿಡ್‌ ವೇಳೆ ಕೈಹಿಡಿದ ಮತ್ಸ್ಯಗಂಧ

ಮೀನು ವ್ಯಾಪಾರ ನಿರತ ಅಶೋಕ್‌ ಪೂಜಾರಿ.

ಬೆಳ್ತಂಗಡಿ: ಉದ್ಯಮ ಅಥವಾ ಉದ್ಯೋಗ ಆಯ್ಕೆಗಳು ಭಿನ್ನವಾದರೂ ಪರಿಶ್ರಮದಿಂದ ಯಶಸ್ಸು ಸಾಧ್ಯ. ಕೋವಿಡ್‌ ಹಲವರ ಬದುಕನ್ನು ಬದಲಿಸಿದಂತೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಪಾಡೆಂಕಿ ನಿವಾಸಿ ಅಶೋಕ್‌ ಪೂಜಾರಿ ಅವರ ಬದುಕನ್ನೂ ಬದಲಿಸಿದೆ. ಲಾಕ್‌ಡೌನ್‌ ಸಂದರ್ಭ ಅವರ ಕೈಹಿಡಿದದ್ದು ಮೀನು ವ್ಯಾಪಾರ. ಇಂದು ಅದೇ ವೃತ್ತಿ ಸಂತೃಪ್ತ ಜೀವನ ನೀಡಿದೆ.

ಇಳಂತಿಲ ಗ್ರಾಮದ ಪಾಡೆಂಕಿ ನಿವಾಸಿ ಹೊನ್ನಪ್ಪ ಪೂಜಾರಿ ಮತ್ತು ಯಶೋದಾ ದಂಪತಿಯ ಪುತ್ರ ಅಶೋಕ್‌. ತಮ್ಮ, ತಂಗಿಯೊಂದಿಗೆ ಕುಟುಂಬ ನಿರ್ವಹಣೆಯ
ಜವಾಬ್ದಾರಿ ಹೊತ್ತಿರುವ ಪದವೀಧರ. ಬಳಿಕ ಉದ್ಯೋಗ ಅರಸಿ ಬೆಂಗಳೂರಿಗೆ ಹೋದವರು ಸಿನೆಮಾ ರಂಗಕ್ಕೆ ಕಾಲಿಟ್ಟರು. 2006ರಲ್ಲಿ ಸಿನೆಮಾ ನಿರ್ಮಾಣ ವಿಭಾಗದಲ್ಲಿ ಸಹಾಯಕನಾಗಿ ವೃತ್ತಿ ಬದುಕು ಆರಂಭಿಸಿದರು. 2008ರಲ್ಲಿ ಟಾಟಾ ಮಳಿಗೆಯಲ್ಲಿ ಮಾರುಕಟ್ಟೆ ವಿಭಾಗ ಆಯ್ಕೆ ಮಾಡಿ ಕೊಂಡರು. ಅದೇ ಕಂಪೆನಿಯ ವಿಮಾ ಪ್ರತಿನಿಧಿಯೂ ಆಗಿದ್ದಾರೆ. ಮನೆಯಲ್ಲೇ ತಾಜಾ ಹಣ್ಣಿನ ಜ್ಯೂಸ್‌ ತಯಾರಿಸಿ ಮಾರಾಟ ನಡೆಸಿದ್ದರು. ಆದರೆ ಇದು ಯಾವುದೂ ಅವರ ಕೈಹಿಡಿಯಲಿಲ್ಲ.

ಕೈಹಿಡಿಯಿತು 10 ವರ್ಷ ಹಿಂದೆ ಕಂಡ ಕನಸು!
ಲಾಕ್‌ಡೌನ್‌ ಸಂದರ್ಭ ಅಶೋಕ್‌ ಅವರ ಬದುಕಿನ ಎಲ್ಲ ದಾರಿಗಳೂ ಮುಚ್ಚಿದಂತಾದವು. ಸಣ್ಣ ಜಮೀನು ಹೊಂದಿರುವ ಕುಟುಂಬಕ್ಕೆ ಅನ್ಯ ಆದಾ ಯದ ಮೂಲ ಇರಲಿಲ್ಲ. ಹೀಗಿರುವಾಗ 10 ವರ್ಷಗಳ ಹಿಂದೆ ಒಮ್ಮೆ ಯೋಚನೆ ಮಾಡಿದ್ದ ಮೀನು ವ್ಯಾಪಾರದ ವಿಚಾರ ನೆನಪಿಗೆ ಬಂದಿತು. ಕೂಡಲೇ ಕಾರ್ಯ ಪ್ರವೃತ್ತರಾದರು. ಮನೆ ಮಂದಿಯ ಸಮ್ಮತಿ ದೊರೆಯಿತು; ಸ್ನೇಹಿತರೂ ಬೆನ್ನಹಿಂದೆ ನಿಂತರು. ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಗ್ರಾ.ಪಂ. ಮಾರುಕಟ್ಟೆಯಲ್ಲಿ ಏಲಂ ಮೂಲಕ ಅಂಗಡಿ ಖರೀದಿಸಿದ್ದ ವ್ಯಕ್ತಿಯೊಬ್ಬರು ವ್ಯಾಪಾರ ನಡೆಸ ದ್ದರಿಂದ ಅಶೋಕ್‌ ಅವರು ಅದೇ ಅಂಗಡಿಯನ್ನು ಪಡೆದು “ಮತ್ಸಗಂಧ’ ನಾಮಕರಣ ದೊಂದಿಗೆ ವ್ಯವಹಾರ ಆರಂಭಿಸಿದರು.ಎಪ್ರಿಲ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡಿದರು. ಆಗಸ್ಟ್‌ ವೇಳೆಗೆ ಗ್ರಾಹಕರ ಸಂಖ್ಯೆ ವೃದ್ಧಿಯಾಗಿತ್ತು.

ಮುಂಜಾನೆ 3ಕ್ಕೆ ಎದ್ದು ಮಲ್ಪೆ ಅಥವಾ ಮಂಗಳೂರು ದಕ್ಕೆಯಿಂದ ಮೀನುಗಳನ್ನು ಖರೀದಿಸಿ ತಂದು ಸಂಜೆವರೆಗೂ ಕೆಲಸ ನಿರ್ವಹಿಸುತ್ತಿದ್ದಾರೆ. ತಮ್ಮ ರಾಜೇಶ್‌ ಅವರ ಬೆಂಬಲವೂ ಇದೆ. ಆಟೋ ಓಡಿಸುವುದರೊಂದಿಗೆ ಬಿಡುವಿನ ವೇಳೆಯಲ್ಲಿ ಅಣ್ಣನಿಗೆ ಸಹಕರಿಸುತ್ತಿದ್ದಾರೆ.

ಕೆಲವು ಯುವಕರು ಶಿಕ್ಷಣ ವಂಚಿತರಾಗಿ ಯಾವ ಉದ್ಯೋಗ ಆಯ್ಕೆ ಮಾಡಬೇಕು ಎಂಬ ಚಿಂತೆಯಲ್ಲಿದ್ದರೆ, ಶಿಕ್ಷಣ ಪಡೆದ ಕೆಲವರು ಸಿಕ್ಕಿದ ಉದ್ಯೋಗದಲ್ಲಿ ತೃಪ್ತಿ ಕಾಣದೆ ಖನ್ನತೆಗೆ ಒಳಗಾಗುತ್ತಿದ್ದಾರೆ. ದೊಡ್ಡ ಹುದ್ದೆಗಳ ಆಕಾಂಕ್ಷೆ ಬೇಕು ನಿಜ. ಆದರೆ ಇರುವ ಉದ್ಯೋಗದಲ್ಲೇ ನೆಮ್ಮದಿ ಕಂಡುಕೊಳ್ಳುವುದು ನಮ್ಮ ಕೈಯಲ್ಲಿದೆ. ಇಂದು ನಮ್ಮ ಬಗ್ಗೆ ಆಡಿಕೊಂಡವರು ಮುಂದೆ ನಮ್ಮ ಬೆನ್ನು ತಟ್ಟುವಂತೆ ಆಗಬೇಕು. ಅದರಂತೆ ನಾನು ಯಾರ ಟೀಕೆಗೂ ತಲೆಕೆಡಿಸಿಕೊಳ್ಳದೆ ಶ್ರಮಪಟ್ಟು ಉದ್ಯೋಗ ನಿರ್ವಹಿಸು ತ್ತಿದ್ದೇನೆ. ಅದರಲ್ಲೇ ನೆಮ್ಮದಿ ಕಾಣುತ್ತಿದ್ದೇನೆ.
– ಅಶೋಕ್‌ ಪೂಜಾರಿ, ಪಾಡೆಂಕಿ

ಕೊರೊನಾ ತಂದಿತ್ತ ಸಂಕಷ್ಟವನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳುತ್ತಿರುವವರ ಕುರಿತು ಈ ಅಂಕಣ. ನಿಮ್ಮ ಅಕ್ಕಪಕ್ಕದಲ್ಲಿ ಇಂಥವರಿದ್ದರೆ ನಮಗೆ ತಿಳಿಸಿ. ನಿಮಗೂ ತಿಳಿದಿದ್ದರೆ ಹೆಸರು, ಊರು, ಸಂಪರ್ಕ ಸಂಖ್ಯೆ, ವಿವರ ಕಳಿಸಿಕೊಡಿ. ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲೆಂದು
ಈ ಮಾಲಿಕೆ . ವಾಟ್ಸ್‌ಆ್ಯಪ್‌ ಸಂಖ್ಯೆ:  7618774529

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.