ಶಾಸಕರಿಂದ 160 ಮಂದಿಗೆ ಉಚಿತ ಸಾರಿಗೆ ಸೇವೆ
ಬೆಳ್ತಂಗಡಿ-ಬೆಂಗಳೂರು ಬೆಸೆದ ಶ್ರಮಿಕ ಸಂಪರ್ಕ
Team Udayavani, May 11, 2020, 5:54 AM IST
ಬೆಳ್ತಂಗಡಿ: ಲಾಕ್ಡೌನ್ ಸಂದರ್ಭ ಊರಿಗೆ ಮರಳಿದ್ದವರಿಗೆ ನಿಯಮ ಸಡಿಲಿಕೆಯಾದರೂ ಸೂಕ್ತ ಸಾರಿಗೆ ಸೌಲಭ್ಯವಿಲ್ಲದ್ದರಿಂದ ಮತ್ತೆ ಉದ್ಯೋಗಕ್ಕೆ ತೆರಳಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನರಿತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶನಿವಾರ ಉಚಿತ ಸಾರಿಗೆ ಸೇವೆ ಒದಗಿಸಿದರು.
ಬೆಳ್ತಂಗಡಿ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಶ್ರಮಿಕ ಸಂಪರ್ಕಕ್ಕೆ ಚಾಲನೆ ನೀಡಿ ಮಾತನಾಡಿ, ಲಾಕ್ಡೌನ್ ಸಡಿಲಿಕೆಯಿಂದ ಬೆಂಗಳೂರಿನಲ್ಲಿ ಒಂದಷ್ಟು ಕಂಪೆನಿಗಳು ಉದ್ಯೋಗ ಪ್ರಾರಂಭಿಸಿವೆ. ನಮ್ಮ ಕ್ಷೇತ್ರದವರು ಮರಳಿ ಉದ್ಯೋಗಕ್ಕೆ ಸೇರಿಕೊಳ್ಳ ಲಾರದೆ ಸಂಕಷ್ಟದಲ್ಲಿರುವುದನ್ನು ಕಂಡು ನನ್ನ ಕರ್ತವ್ಯದಿಂದ ಉಚಿತ ಸೇವೆ ಒದಗಿಸಿದ್ದೇನೆ ಎಂದರು.
9 ಬಸ್ 160 ಮಂದಿ
ಶ್ರಮಿಕ ಸಂಪರ್ಕ ಸೇವೆ ಒದಗಿಸುವ ಸಲುವಾಗಿ 3 ದಿನಗಳಿಂದ ಆನ್ಲೈನ್ ನೋಂದಣಿಗೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಪ್ರಥಮವಾಗಿ 2 ಬಸ್ ಒದಗಿಸಲಾಗಿದ್ದರೂ ಬೇಡಿಕೆ ಹೆಚ್ಚಿದ್ದರಿಂದ ಒಟ್ಟು 9 ಬಸ್ಗಳ ಮೂಲಕ ಪ್ರತಿ ಬಸ್ನಲ್ಲಿ 20ರಂತೆ 160 ಮಂದಿಯನ್ನು ಕಳುಹಿಸಿಕೊಡ ಲಾಯಿತು. ಇದಕ್ಕೂ ಮುನ್ನ ರಾತ್ರಿ 8 ಗಂಟೆಯಿಂದ ವೈಯಕ್ತಿಕ ನೋಂದಣಿ ನಡೆಸಿ ಥರ್ಮಲ್ ಸ್ಕ್ರೀನಿಂಗ್ ತಪಾ ಸಣೆಗೊಳಪಡಿಸಲಾಯಿತು. ಶಾಸಕರು ತಾವೇ ಉಪಾಹಾರ ನೀಡಿ ಪ್ರಯಾಣಕ್ಕೆ ಶುಭಕೋರಿದರು. ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಂಡಲ ಪ್ರ. ಕಾರ್ಯದರ್ಶಿ ಸೀತಾರಾಮ ಬೆಳಾಲು, ಬಿಜೆಪಿ ನಿಯೋಜಿತ ಕಾರ್ಯದರ್ಶಿಗಳಾದ ಶ್ರೀನಿವಾಸ್, ಸುಬ್ರಹ್ಮಣ್ಯ ಗೌಡ ಕೈಕುರೆ, ಲಾೖಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ