ಮರೀಲು ರೈಲ್ವೇ ಸೇತುವೆ ಸನಿಹ ತ್ಯಾಜ್ಯ ರಾಶಿ!


Team Udayavani, May 3, 2019, 5:17 PM IST

sud-1

•ವಿಶೇಷ ವರದಿ

ನಗರ ಮೇ 2: ಸ್ವಚ್ಛ ಪುತ್ತೂರಿನ ಕನಸು ಬಿತ್ತಿ ನಗರವಿಡೀ ಜಾಗೃತಿ ಮೂಡಿಸಿದ್ದ ನಗರಸಭೆ ವ್ಯಾಪ್ತಿಯ ಮರೀಲು ರೈಲ್ವೇ ಸೇತುವೆ ಸನಿಹದ ತೋಡು ತ್ಯಾಜ್ಯ ತುಂಬುವ ಅನಧಿಕೃತ ಡಂಪಿಂಗ್‌ ಯಾರ್ಡ್‌ ಆಗಿ ಬದಲಾಗಿದೆ.

ಮಳೆ ನೀರು ಹರಿದು ಹೋಗುವ ತೋಡು ಇದಾಗಿದ್ದು, ತ್ಯಾಜ್ಯ, ಕಸ ತುಂಬಿ ಇಡೀ ಪರಿಸರ ದುರ್ನಾತ ಬೀರುತ್ತಿದೆ. ಹೀಗಾಗಿ ಪರಿಸರದಲ್ಲಿ ಸಾಂಕ್ರಾಮಿಕ ರೋಗ, ಅನಾರೋಗ್ಯದ ಭೀತಿ ಆವರಿಸಿದೆ.

ಅಂತಾರಾಜ್ಯ ಸಂಪರ್ಕ ರಸ್ತೆ

ಕಾಣಿಯೂರು-ಮಂಜೇಶ್ವರ ಅಂತಾರಾಜ್ಯ ರಸ್ತೆ ಹಾದು ಹೋಗುವ ಪ್ರದೇಶ ಇದಾಗಿದ್ದು, ನಗರಸಭೆ ವ್ಯಾಪ್ತಿ ಯ ಕೆಮ್ಮಿಂಜೆ ಎರಡನೆ ವಾರ್ಡ್‌ ಗೆ ಸೇರಿದೆ. ಕೋಳಿ ತ್ಯಾಜ್ಯ, ಕೊಳತೆ ಹಣ್ಣು, ತರಕಾರಿ, ತಿಂದುಂಡು ಎಸೆದ ಪ್ಲಾಸ್ಟಿಕ್‌ ಬಟ್ಟಲು, ಇತರೆ ವಸ್ತುಗಳು ಇಲ್ಲಿ ರಾಶಿ ಬಿದ್ದಿವೆ. ಬೇಸಗೆ, ಮಳೆಗಾಲದಲ್ಲಿ ತ್ಯಾಜ್ಯ ವಸ್ತುಗಳನ್ನು ತೋಡಿಗೆ ಎಸೆದು ಪರಿಸರವನ್ನು ಹಾಳುಗೆಡವುತ್ತಿದ್ದರೂ ನಗರಸಭೆ ಅಧಿಕಾರಿಗಳು ಗಮನ ಹರಿ ಸುತ್ತಿಲ್ಲ ಅನ್ನುತ್ತಾರೆ ಸ್ಥಳೀಯ ಪರಿಸರದ ನಿವಾಸಿಗಳು.

ಮಾದರಿ ವಾರ್ಡ್‌..!

ವಾರ್ಡ್‌ ನಂಬರ್‌ 23 ಮತ್ತು 24ರ ಸರಹದ್ದಿನಲ್ಲಿ ಇರುವ ಈ ತೋಡು ರಸ್ತೆ ಸನಿಹದಲ್ಲೇ ಇದೆ. ಈ ಹಿಂದೆ ಮರೀಲು ಯೂತ್‌ ಕೌನ್ಸಿಲ್, ಚರ್ಚ್‌ ವತಿಯಿಂದ ಈ ಪರಿಸರದ ವಾರ್ಡ್‌ಗಳನ್ನು ಮಾದರಿ ವಾರ್ಡ್‌ ಆಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಹಮ್ಮಿಕೊಂಡಿತ್ತು. ಸ್ವಚ್ಛತಾ ಫಲಕ, ರಸ್ತೆ ಫಲಕ ಸೇರಿದಂತೆ ಸಭೆ ಸಮಾರಂಭ ಆಯೋಜಿಸಿ ಜಾಗೃತಿ ಮೂಡಿಸಿತ್ತು. ಆದರೆ ಈ ತ್ಯಾಜ್ಯದ ರಾಶಿ ಮಾದರಿ ವಾರ್ಡ್‌ ಕನಸಿಗೆ ಅಡ್ಡಿ ಉಂಟು ಮಾಡಿದೆ.

ಅಪರಿಚಿತರ ಕೃತ್ಯ

ಇಲ್ಲಿ ತ್ಯಾಜ್ಯ, ಕಸ ಎಸೆಯುವವರು ಈ ವಾರ್ಡ್‌ನವರು ಅಲ್ಲ. ಬದಲಿಗೆ ಹೊರ ಭಾಗದಿಂದ ಬಂದು ಎಸೆದು ಹೋಗುತ್ತಾರೆ. ಕೆಲ ಮಾಂಸದ ಅಂಗಡಿ ಯಿಂದ ತ್ಯಾಜ್ಯವನ್ನು ರಾತ್ರಿ ವೇಳೆ ತೋಡಿಗೆ ಎಸೆಯುತ್ತಾರೆ. ವಾಹನ ನಿಲ್ಲಿಸದೆ ತ್ಯಾಜ್ಯದ ಚೀಲಗಳನ್ನು ತೋಡಿಗೆ ಎಸೆಯಲು ಇಲ್ಲಿ ಸಾಧ್ಯವಿರುವ ಕಾರಣ ಕಿಡಿಗೇಡಿಗಳ ಕೃತ್ಯಕ್ಕೆ ಸೂಕ್ತ ಸ್ಥಳ ಎನಿಸಿದೆ. ವಾಹನ ನಿಲ್ಲಿಸದೆ ತ್ಯಾಜ್ಯ ಎಸೆಯುವ ಕಾರಣ ತೋಡಿನ ಬಹುತೇಕ ಭಾಗದಲ್ಲಿ ತ್ಯಾಜ್ಯ ತುಂಬಿದೆ.

ನಗರಸಭೆ ಮೌನ

ಈ ಹಿಂದೆ ಪುರಸಭಾ ಅವಧಿಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ ಅಂದಿನ ಆಡಳಿತ ಸಿಸಿ ಕೆಮಾರ ಅಳವಡಿಸಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಅದು ಈ ತನಕ ಕಾರ್ಯಗತವಾಗಿಲ್ಲ. ವಾರ್ಡ್‌-24 ಪುತ್ತೂರುಮೂಲೆ ರಸ್ತೆ ಈ ತೋಡಿನಲ್ಲೇ ಹಾದು ಹೋಗಿದೆ. ಮಳೆಗಾಲದ ಆರಂಭ, ಬೇಸಗೆ ಕಾಲದ ಆರಂಭದಲ್ಲಿ ವಾಹನ ತೊಳೆದು ನೀರು ಮಲೀನ ಮಾಡುವ ಪ್ರಕರಣ ಎಗ್ಗಿಲ್ಲದೆ ಸಾಗುತ್ತದೆ. ಅದರ ಜತೆಗೆ ಕಸ, ತ್ಯಾಜ್ಯದ ಕಾಟ ತೋಡಿನ ಸ್ವರೂಪವನ್ನೆ ಹಾಳು ಮಾಡಿದೆ. ಅದಾಗ್ಯೂ ನಗರಸಭೆ ಕ್ಯಾರೆ ಅಂದಿಲ್ಲ.

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.