ಹಾರಾಡಿ ಸಂಪರ್ಕ ರಸ್ತೆಯಲ್ಲಿ ಸಂಚಾರವೇ ನರಕ ಸದೃಶ
Team Udayavani, Sep 10, 2021, 11:00 AM IST
ಪುತ್ತೂರು: ಉಪ್ಪಿನಂಗಡಿ- ಪುತ್ತೂರು ರಾಜ್ಯ ಹೆದ್ದಾರಿಯಲ್ಲಿನ ಹಾರಾಡಿಯಿಂದ ಪುತ್ತೂರು ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ಪ್ರಯಾಣಿಸಿದರೆ ನರಕ ಸದೃಶ ಅನುಭವ ಉಂಟಾಗುವುದು ನಿಸ್ಸಂಶಯ
ಜಿಲ್ಲಾ ಕೇಂದ್ರದ ಕನಸಿನಲ್ಲಿರುವ ನಗರದ ಈ ರಸ್ತೆಯ ಶೋಚನಿಯ ಸ್ಥಿತಿಗೆ ಹಲವು ದಶಕಗಳೇ ಸಂದಿವೆ. ರೈಲ್ವೇ ಮತ್ತು ಸ್ಥಳೀಯಾಡಳಿತ ನಡುವಿನ ತಿಕ್ಕಾಟದಲ್ಲಿ ಇಲ್ಲಿ ಸಂಚರಿಸುವ ಪ್ರಯಾಣಿಕರ ಪಾಡಂತು ಹೇಳತೀರದು.
ಕೆಲವು ವರ್ಷಗಳ ಹಿಂದೆಯೇ ರೈಲ್ವೇ ಈ ಸಂಬಂಧ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ಸರಕಾರ ಮತ್ತು ರೈಲ್ವೇ 50:50 ಅನುಪಾತದಲ್ಲಿ ಅನುದಾನದಲ್ಲಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಮುಂದಿಟ್ಟಿತ್ತು. ಅದರೆ ಅದು ನನೆಗುದಿಗೆ ಬಿದ್ದಿದೆ.
ಪಟ್ಟು ಬಿಡುತ್ತಿಲ್ಲ :
ರೈಲ್ವೇ ಆಸ್ತಿಯಾಗಿರುವ ಹಾರಾಡಿ ರಸ್ತೆಯ ದುರಸ್ತಿಗೆ ನಗರಸಭೆ ಹಣ ನೀಡಲು ಸಾಧ್ಯವಿಲ್ಲ. ರಸ್ತೆಯನ್ನು ನಗರಸಭೆಗೆ ಹಸ್ತಾಂತರಿಸಿದರೆ ಶೇ.100 ಅನುದಾನ ಹಾಕಿ ದುರಸ್ತಿ ಮಾಡಲಿದೆ ಎನ್ನುವುದು ನಗರಸಭೆಯ ವಾದ. ರಸ್ತೆ ಪೂರ್ಣವಾಗಿ ಹಸ್ತಾಂತರ ಅಸಾಧ್ಯ. ದುರಸ್ತಿ ಕಾರ್ಯಕ್ಕಾಗಿ ತಾತ್ಕಾಲಿಕವಾಗಿ ಬಿಟ್ಟು ಕೊಡಬಹುದು. ಅದಕ್ಕೆ ಜಿಲ್ಲಾಧಿಕಾರಿಗಳು ಪತ್ರ ಬರೆಯಬೇಕಾಗುತ್ತದೆ. ನಿಗದಿತ ಮೊತ್ತದ ಬಗ್ಗೆ ಖಾತರಿ ನೀಡಬೇಕಾಗುತ್ತದೆ. ರೈಲ್ವೇ ಆಸ್ತಿಯನ್ನು ಶಾಶ್ವತವಾಗಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎನ್ನುವುದು ರೈಲ್ವೇ ವಾದ. ಈ ಇಬ್ಬರ ಜಗಳದಲ್ಲಿ ಸಂಪರ್ಕ ರಸ್ತೆ ಸಂಚಾರಕ್ಕೆ ಅಸಾಧ್ಯವಾಗಿರುವ ಸ್ಥಿತಿಗೆ ತಲುಪಿದೆ.
ನಡೆದಾಡಲು ಕಷ್ಟ :
ಈ ಸಂಪರ್ಕ ರಸ್ತೆಯಲ್ಲಿ ವಾಹನ ಮಾತ್ರವಲ್ಲ, ಪಾದಚಾರಿಗಳಿಗೆ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ. ಮೀಟರ್ಗೊಂದರಂತೆ ಹೊಂಡ ಸೃಷ್ಟಿಯಾಗಿದ್ದು ಮಳೆ ಬಂದರೆ ತೋಡಿನ ಸ್ಥಿತಿ ಉಂಟಾಗುತ್ತದೆ. ಇಷ್ಟಾದರೂ ಅನುದಾನ ಹಂಚಿಕೆ ವಿಚಾರದಲ್ಲಿ ರೈಲ್ವೇ ಮತ್ತು ಸ್ಥಳೀಯಾಡಳಿತ ಮಧ್ಯೆ ಜಟಾಪಟಿ ನಡೆಯುತ್ತಿದೆ. ಲಭ್ಯ ಮಾಹಿತಿ ಪ್ರಕಾರ 1990-95ರ ಅವಧಿಯಲ್ಲಿ ಆಗಿನ ಪುರಸಭೆಯೇ ಈ ರಸ್ತೆಯ ದುರಸ್ತಿ ಮಾಡಿತ್ತು. ಆಗಲೂ ರೈಲ್ವೇ ಕೇವಲ ದುರಸ್ತಿಗಾಗಿ ತಾತ್ಕಾಲಿಕ ನೆಲೆಯಲ್ಲಿ ಪುರಸಭೆಗೆ ಅನುಮತಿ ನೀಡಿತ್ತು. ಅನಂತರ ಅಭಿವೃದ್ಧಿ ಕಂಡೇ ಇಲ್ಲ.
ಹಾರಾಡಿ ಸಂಪರ್ಕ ರಸ್ತೆ ಅಭಿವೃದ್ಧಿಗಾಗಿ ನಗರಸಭೆಗೆ ನೀಡುವಂತೆ ರೈಲ್ವೇಗೆ ಮನವಿ ಮಾಡಿದ್ದರೂ ಅವರಿಂದ ಸ್ಪಂದನೆ ಸಿಕ್ಕಿಲ್ಲ. ರೈಲ್ವೇ ಅಧೀನದ ರಸ್ತೆ ಅಭಿವೃದ್ಧಿ ಮಾಡಲು ನಗರಸಭೆಗೆ ಅಧಿಕಾರ ಇಲ್ಲ. ಹೀಗಾಗಿ ನಾವು ಈ ರಸ್ತೆಗೆ ಬದಲಿಯಾಗಿ ಹಾರಾಡಿ-ಚಿಕ್ಕಪುತ್ತೂರು ರಸ್ತೆ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದೇವೆ. ಈಗಾಗಲೇ ದಾನಿಗಳ ಸಹಕಾರ ಪಡೆದು ಮಣ್ಣು ಹಾಕುವ ಕಾರ್ಯ ಆಗಿದೆ. ಒಂದು ಕಡೆ ಭೂ ಸ್ವಾಧೀನ ಬಾಕಿ ಇದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗವುದು. -ಜೀವಂಧರ್ ಜೈನ್, ಅಧ್ಯಕ್ಷ, ನಗರಸಭೆ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ