ಬಾಯ್ದೆರೆದಿವೆ ಬೃಹತ್‌ ಹೊಂಡಗಳು

 ಬಿ.ಸಿ. ರೋಡ್‌-ಮೆಲ್ಕಾರ್‌ ಹೆದ್ದಾರಿ

Team Udayavani, Jul 26, 2019, 5:00 AM IST

m-35

ಬಂಟ್ವಾಳ: ಸಾಮಾನ್ಯವಾಗಿ ಹೆದ್ದಾರಿಯೆಂದರೆ ಸುಸಜ್ಜಿತ ವಾಗಿದ್ದು, ಪ್ರಯಾಣವೂ ಹೆಚ್ಚು ಅನುಕೂಲಕರ ವಾಗಿರುತ್ತದೆ. ಆದರೆ ಬಿ.ಸಿ. ರೋಡ್‌-ಮಾಣಿ ರಾ.ಹೆ. ಹೆದ್ದಾರಿ – 75ರ ಪ್ರಯಾಣ ಇದಕ್ಕೆ ಅಪವಾದವಾಗಿದೆ. ಹೆದ್ದಾರಿಯ ಬಿ.ಸಿ. ರೋಡ್‌-ಮೆಲ್ಕಾರ್‌ ಮಧ್ಯೆ ಮರಣ ಗುಂಡಿಗಳೇ ಇದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.

ಈ ಬಾರಿ ಮಳೆ ಕಡಿಮೆಯಿದ್ದರೂ ಹೆದ್ದಾರಿಯ ಹೊಂಡಗಳಿಗೇನು ಕೊರತೆ ಯಾಗಿಲ್ಲ. ಬಿ.ಸಿ. ರೋಡ್‌, ಪಾಣೆ ಮಂಗಳೂರು, ಮೆಲ್ಕಾರ್‌ ಹೀಗೆ ಪ್ರತಿ ಜಂಕ್ಷನ್‌ಗಳಲ್ಲೂ ಬೃಹತ್‌ ಗಾತ್ರದ ಹೊಂಡಗಳಿದ್ದು, ವಾಹನಗಳು ಎದ್ದು ಬಿದ್ದು ಸಾಗಬೇಕಾದ ಸ್ಥಿತಿ ಇದೆ. ದ್ವಿಚಕ್ರ ವಾಹನ ಸವಾರರು ಹಾಗೂ ಸಣ್ಣ ವಾಹನಗಳ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ.

ಈ ಹಿಂದೆ ಹೆದ್ದಾರಿಯ ಹೊಂಡ ಗಳನ್ನು ಮುಚ್ಚಲಾಗಿತ್ತಾದರೂ ಅಲ್ಪ ಮಳೆಯಲ್ಲೇ ಹೊಂಡಗಳು ಸೃಷ್ಟಿ ಯಾಗಿವೆ. ವಾಹನಗಳು ಬೃಹತ್‌ ಹೊಂಡಕ್ಕೆ ಇಳಿದೇ ಸಾಗುವುದರಿಂದ ದಿನದಿಂದ ದಿನಕ್ಕೆ ಹೊಂಡಗಳ ಗಾತ್ರವೂ ಹೆಚ್ಚುತ್ತಿದೆ. ಹೀಗಾಗಿ ಈಗಲೇ ತಾತ್ಕಾಲಿಕ ಪರಿಹಾರ ನೀಡದೇ ಇದ್ದರೆ ಮುಂದಿನ ದಿನಗಳಲ್ಲಿ ವಾಹನ ಸಂಚಾರವೇ ದುಸ್ತರ ಎನಿಸುವ ಸಾಧ್ಯತೆಯೂ ಇದೆ.

ಎಚ್ಚರ ತಪ್ಪಿದರೆ ಅಪಾಯ
ಹೆದ್ದಾರಿಯಲ್ಲಿ ವಾಹನಗಳು ವೇಗ ವಾಗಿ ಸಾಗಿ ಹೊಂಡಗಳನ್ನು ಕಂಡು ಏಕಾಏಕಿ ಬ್ರೇಕ್‌ ಹಾಕುತ್ತವೆ. ಈ ಸಂದರ್ಭ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗುವ ಸಾಧ್ಯತೆ ಇದ್ದು, ಹಿಂದಿನಿಂದ ಮತ್ತೂಂದು ವಾಹನ ವೇಗವಾಗಿ ಬಂದರೆ ಅಪಾಯ ಭೀತಿಯಿದೆ. ಹೊಂಡದಲ್ಲಿ ನೀರು ತುಂಬಿ ಹೊಂಡ ಇರುವುದು ಗಮನಕ್ಕೇ ಬಾರದೇ ಇದ್ದಾಗಲೂ ಅಪಾಯ ಸಾಧ್ಯತೆ ಇದೆ.

ಆಟೋ ರಿಕ್ಷಾ, ಕಾರಿನಂತಹ ಸಣ್ಣ ವಾಹನಗಳು ಒಮ್ಮೆ ಹೊಂಡಕ್ಕೆ ಇಳಿದರೆ ಮೇಲೆ ಬರಲು ಹರಸಾಹಸ ಪಡಬೇಕಿದೆ. ಇನ್ನು ವಾಹನಗಳು ಸಾಗುವ ಸಂದರ್ಭ ಹೊಂಡಗಳ ಪಕ್ಕದಲ್ಲಿ ಪಾದಾಚಾರಿಗಳು ನಿಂತಿದ್ದರೆ ಅವರಿಗೆ ಕೆಸರಿನ ಅಭಿಷೇಕವಾಗುವು ದರಲ್ಲಿ ಸಂಶಯವಿಲ್ಲ.

ಪೈಪ್‌ಲೈನ್‌ ಲೀಕೇಜ್‌?
ಹೆದ್ದಾರಿಗಳಲ್ಲಿ ಕಾಣಿಸಿಕೊಂಡಿರುವ ಹೊಂಡಗಳ ಕುರಿತು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರಾ. ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಅಧಿಕಾರಿಗಳ ಜತೆ ಮಾತನಾಡಿದ ವೇಳೆ ಬಿ.ಸಿ. ರೋಡ್‌ನ‌ ಹೆದ್ದಾರಿಯಲ್ಲಿ ಹೊಂಡ ಕಾಣಿಸಿಕೊಳ್ಳುವುದಕ್ಕೆ ನೀರು ಪೂರೈಕೆಯ ಪೈಪ್‌ನಲ್ಲಿ ಸೋರುವಿಕೆ ಕಾರಣ ಎಂದು ಹೇಳಿದ್ದಾರೆ.

ಬಿ.ಸಿ. ರೋಡ್‌ನ‌ಲ್ಲಿ ಹೆದ್ದಾರಿಯ ತಳಭಾಗದಲ್ಲಿ ಕರ್ನಾಟಕ ಅರ್ಬನ್‌ ವಾಟರ್‌ ಸಪ್ಲೈ ಬೋರ್ಡ್‌ನ ಪೈಪ್‌ಲೈನ್‌ ಹಾದುಹೋಗಿದ್ದು, ಹೀಗಾಗಿ ಅದರ ಸೋರುವಿಕೆಯಿಂದ ಹೊಂಡ ಸಮಸ್ಯೆ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಆದರೆ ಇತರ ಭಾಗಗಳಲ್ಲಿ ಹೊಂಡಗಳಿರುವ ಪ್ರದೇಶದಲ್ಲಿ ಯಾವುದೇ ಪೈಪ್‌ಲೈನ್‌ ಇಲ್ಲವಾಗಿದ್ದು, ಆದರೂ ಹೊಂಡಗಳು ಕಾಣಿಸಿಕೊಂಡಿವೆ. ಹೊಂಡಗಳು ಕಾಣಿಸಿಕೊಂಡಿರುವ ಬಹುತೇಕ ಪ್ರದೇಶವು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬರುವ ಕಾರಣದಿಂದ ಪುರಸಭೆಯು ಎನ್‌ಎಚ್‌ಎಐನ ಜತೆಗೆ ನೀರು ಪೂರೈಕೆ ನಿಗಮಕ್ಕೂ ನೋಟಿಸ್‌ ನೀಡುವುದಕ್ಕೆ ಚಿಂತನೆ ನಡೆಸಿದೆ. ಸ್ಥಳೀಯಾಡಳಿತ ಒತ್ತಡ ಹೇರಿದರೆ ಹೊಂಡಗಳಿಗೂ ಮುಕ್ತಿ ಸಿಗಬಹುದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನೋಟಿಸ್‌ ನೀಡುತ್ತೇವೆ
ಹೆದ್ದಾರಿ ಹೊಂಡಗಳಿಂದ ಅಪಾಯದ ಸಾಧ್ಯತೆಯಿದ್ದು, ಹೀಗಾಗಿ ದುರಸ್ತಿಗಾಗಿ ಸಂಬಂಧಪಟ್ಟವರಿಗೆ ಪುರಸಭೆಯಿಂದ ನೋಟಿಸ್‌ ನೀಡಲಾಗುವುದು. ಜತೆಗೆ ಎನ್‌ಎಚ್‌ಎಐನವರು ನೀರು ಪೂರೈಕೆಯ ಪೈಪ್‌ ಸೋರುವುದರಿಂದ ಹೊಂಡ ಸೃಷ್ಟಿಯಾಗಿದೆ ಎಂದು ಹೇಳುತ್ತಿದ್ದು, ಹೀಗಾಗಿ ನಗರ ನೀರು ಪೂರೈಕೆ ನಿಗಮಕ್ಕೂ ನೋಟಿಸ್‌ ನೀಡಲಾಗುವುದು.
 - ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.