ಮೊರ್ಗನಾಡು: ಮದ್ಯದ ಬಾಟಲ್ನಲ್ಲಿ ಹೊಡೆದು ಹಲ್ಲೆ
Team Udayavani, Nov 3, 2022, 7:36 PM IST
ಬಂಟ್ವಾಳ: ರಾತ್ರಿ ಹೊತ್ತು ತರಕಾರಿ ತೆಗೆದುಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಐವರು ಆರೋಪಿಗಳ ತಂಡ ಮದ್ಯದ ಬಾಟಲ್ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಅ. 31ರಂದು ನರಿಕೊಂಬು ಗ್ರಾಮದ ಮೊರ್ಗನಾಡಿನಲ್ಲಿ ನಡೆದಿದೆ.
ನರಿಕೊಂಬು ಪಲ್ಲತ್ತಿಲ ನಿವಾಸಿ ಪ್ರವೀಣ್ಕುಮಾರ್ ಹಲ್ಲೆಗೊಳಗಾದವರು. ಅವರು ಅ. 31ರಂದು ರಾತ್ರಿ 9ಕ್ಕೆ ಮೊರ್ಗನಾಡಿನ ಅಂಗಡಿಯೊಂದರಿಂದ ತರಕಾರಿ ಖರೀದಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಐವರು ಆರೋಪಿಗಳು ಮದ್ಯದ ಬಾಟಲ್ನಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಜತೆಗೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ