ತಂದೆಯನ್ನೇ ಹೊಡೆದು ಕೊಲೆಗೈದ ಪುತ್ರ
Team Udayavani, Jan 19, 2021, 2:19 AM IST
ಬೆಳ್ತಂಗಡಿ: ತಾನು ಪ್ರೀತಿಸಿದ್ದ ಹುಡುಗಿಯೊಂದಿಗೆ ವಿವಾಹವಾಗಿ ಮನೆಗೆ ಬಂದಾಗ ತಂದೆ ಅಸಮಾಧಾನ ಗೊಂಡು ಜಗಳವಾಡಿದ್ದಲ್ಲದೆ ಸೊಸೆಯನ್ನು ಒಪ್ಪಿಕೊಳ್ಳದೇ ಹೋದಾಗ ಪುತ್ರ ತನ್ನ ತಂದೆಯನ್ನು ಹೊಡೆದು ಕೊಲೆಗೈದ ಘಟನೆ ಸೋಮವಾರ ಗರ್ಡಾಡಿ ಸಮೀಪ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (55) ಅವರನ್ನು ಅವರ ಪುತ್ರ ಹರೀಶ ( 27) ಕೊಲೆಗೈದಿದ್ದಾನೆ. ಮೃತ ಶ್ರೀಧರ ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಹರೀಶ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸದಲ್ಲಿದ್ದು, ಬೆಂಗಳೂರಿ ನಲ್ಲಿ ತಾನು ಪ್ರೀತಿಸಿದ್ದ ಯುವತಿ ಜತೆ ವಿವಾಹವಾಗಿದ್ದ. ಕಳೆದ 27 ದಿನಗಳ ಹಿಂದೆ ಪತ್ನಿ ಜತೆ ಊರಿಗೆ ಬಂದು ನೆಲೆಸಿದ್ದ. ಆದರೆ ಅನ್ಯಜಾತಿಯ ಯುವತಿಯನ್ನು ಮನೆ ಮಂದಿ ಒಪ್ಪಿಗೆ ಇಲ್ಲದೆ ವಿವಾಹವಾಗಿರುವ ಕುರಿತು ತಂದೆ ಶ್ರೀಧರ ಪೂಜಾರಿ ಬೇಸರಗೊಂಡಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಪ್ರತಿನಿತ್ಯ ತಂದೆ ಮಗನ ಮಧ್ಯೆ ಜಗಳವಾಗುತ್ತಿತ್ತು. ಸೋಮವಾರ ಕುಡಿದ ಮತ್ತಿನಲ್ಲಿ ಹರೀಶ ಕಟ್ಟಿಗೆ ತುಂಡಿನಿಂದ ಹಲ್ಲೆ ನಡೆಸಿದ್ದಾನೆ. ತಲೆಗೆ ಬಿದ್ದ ಏಟಿನಿಂದಶ್ರೀಧರ ಪೂಜಾರಿ ಅಸುನೀಗಿರುವುದಾಗಿ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಸಿಬಂದಿ ಧಾವಿಸಿದ್ದು ಸ್ಥಳ ಮಹಜರು ನಡೆಸಿ ಕೃತ್ಯವೆಸಗಿದ ಮಗನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ