ಪುತ್ತೂರು: ಲಾರಿ- ಸ್ಕೂಟಿ ನಡುವೆ ಢಿಕ್ಕಿ; ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು
Team Udayavani, Nov 10, 2021, 11:23 AM IST
ಪುತ್ತೂರು: ಲಾರಿ ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪುತ್ತೂರಿನ ಹೊರ ವಲಯದ ಮೊಟ್ಟೆತಡ್ಕದಲ್ಲಿ ಅ.9 ರಂದು ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ಓರ್ವ ಬುಧವಾರ ಮೃತಪಟ್ಟಿದ್ದಾರೆ.
ಸಹ ಸವಾರ ಕುರಿಯ ಬಳ್ಳಮಜಲು ನಿವಾಸಿ ವಸಂತ ರೈ ಮೃತರು. ಸವಾರ ಕುರಿಯ ಬಳ್ಳಮಜಲು ನಿವಾಸಿ ನಾರಾಯಣ ನಾಯ್ಕ ಗಂಭೀರ ಗಾಯಾಳು.
ದ್ವಿ ಚಕ್ರ ವಾಹನ ಸವಾರರಿಬ್ಬರು ಗಾರೆ ಕೆಲಸದವರಾಗಿದ್ದು ಸೆಂಟ್ರಿಗ್ ಕೆಲಸಕ್ಕೆ ಹೋಗಿ ಪುತ್ತೂರಿನಿಂದ ವಾಪಸು ಕುರಿಯಕ್ಕೆ ಬರುತಿದ್ದಾಗ ಮೊಟ್ಟೆತಡ್ಕದ ಎನ್ ಆರ್ ಸಿಸಿ ಬಳಿ ಪಂಜಳದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿತ್ತು.
ಢಿಕ್ಕಿಯ ರಬ್ಬಸಕ್ಕೆ ಆಕ್ಟಿವಾದಲ್ಲಿದ್ದ ಇಬ್ಬರು ಸವಾರರು ರಸ್ತೆಗೆ ಅಪ್ಪಳಿಸಿದ್ದು ಇದರಿಂದ ಕಾಲು ತುಂಡಾಗಿದೆ. ಸವಾರಿಬ್ಬರು ಹೆಲ್ಮೇಟ್ ಧರಿಸಿದ್ದು ಹೀಗಾಗಿ ತಲೆ ಭಾಗಕ್ಕೆ ಯಾವುದೇ ಗಾಯ ಉಂಟಾಗಿಲ್ಲ. ಗಾಯಾಳುಗಳನ್ನು ಮೊದಲು ಪುತ್ತೂರಿನ ಖಾಸಗಿ ಆಸ್ಫತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ,ಜೆ ಆಸ್ಫತ್ರೆಗೆ ದಾಖಲಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ