ಮಗಳನ್ನು ಕಾಣಲು ಬಂದ ಅಪ್ಪ ಸಾವು
Team Udayavani, Mar 22, 2021, 1:26 AM IST
ಬೆಳ್ತಂಗಡಿ: ಲಾೖಲ ಗ್ರಾಮದ ಕಾಶಿಬೆಟ್ಟು ಪ್ರಸನ್ನ ಕಾಲೇಜಿನಲ್ಲಿ ಬಿಎಎಂಎಸ್ ವ್ಯಾಸಂಗ ಮಾಡುತ್ತಿದ್ದ ತನ್ನ ಪುತ್ರಿಯನ್ನು ನೋಡಲೆಂದು ದಾವಣಗೆರೆ ಜಿಲ್ಲೆಯ ಹರಿಹರದಿಂದ ಬಂದಿದ್ದ ತಂದೆ ಗಂಗಾಧರ ಸಂಗಪ್ಪ ಯರೇಶಿಮಿ (52) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ರವಿವಾರ ಉಜಿರೆಯಲ್ಲಿ ಸಂಭವಿಸಿದೆ.
ಅವರು ಚಿಕ್ಕಪ್ಪನೊಂದಿಗೆ ತನ್ನ ಮಗಳನ್ನು ಕಾಣಲು ಬಂದಿದ್ದರು. ಧರ್ಮಸ್ಥಳದಿಂದ ರವಿವಾರ ಬೆಳಗ್ಗೆ 8 ಗಂಟೆಗೆ ಸರಕಾರಿ ಬಸ್ಸಿನಲ್ಲಿ ಕಾಲೇಜಿಗೆ ಹೊರಟವರು ಉಜಿರೆ ತಲುಪುತ್ತಿದ್ದಂತೆ ಬಸ್ಸಿನಲ್ಲಿಯೇ ಕುಸಿದು ಬಿದ್ದಿದ್ದರು. ತತ್ಕ್ಷಣ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.