ಮಸೀದಿ ನಿರ್ಮಾಣದ ಸಂಪತ್ತು ಪವಿತ್ರವಾಗಿರುವುದು ಕಡ್ಡಾಯ


Team Udayavani, Jul 12, 2019, 5:08 AM IST

masidi-nirmana

ಸವಣೂರು: ಜಗತ್ತಿನ ಪ್ರತಿಯೊಂದು ಮಸೀದಿಯೂ ಪವಿತ್ರ ಕಾಬಾಗೆ ಮುಖ ಮಾಡಿಕೊಂಡಿರುತ್ತದೆ. ಕಾಬಾ ಪವಿತ್ರವಾಗಿ ನಿರ್ಮಾಣವಾಗಿದೆ. ಜಗತ್ತಿನಲ್ಲಿ ನಿರ್ಮಾಣವಾಗುವ ಪ್ರತಿಯೊಂದು ಮಸೀದಿಯೂ ಪಾವಿ ತ್ರತೆಯಿಂದ ಕೂಡಿರಬೇಕು, ಮಸೀದಿ ನಿರ್ಮಾಣ ಮಾಡುವಾತನ ಸಂಪತ್ತೂ ಪವಿತ್ರವಾಗಿರಬೇಕು ಎಂದು ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸಯ್ಯದುಲ್ ಉಲಮಾ ಮುಹಮ್ಮದ್‌ ಜಿಫ್ರಿ ಮುತ್ತುಕೋಯಾ ತಂಙಳ್‌ ಹೇಳಿದರು.

ಸರ್ವೆ ಗ್ರಾಮದ ಕೂಡುರಸ್ತೆಯಲ್ಲಿ ನವೀಕೃತ ಅಲ್ರಿಫಾ ಯಿಯ್ಯ ಜುಮಾ ಮಸೀದಿಯನ್ನು ಉದ್ಘಾಟಿಸಿ ವಕ್ಫ್ ನಿರ್ವಹಣೆ ಮಾಡಿ ಮಾತನಾಡಿದರು.

ಸೌಹಾರ್ದದ ತಾಣ

ಮಸೀದಿಗಳು ಊರಿನ ಸೌಹಾರ್ದದ ತಾಣಗಳಾಗಿವೆ. ಮಸೀದಿ ನಿರ್ಮಾಣವಾಗುವ ವೇಳೆ ಆ ಊರಿನ ಪ್ರತಿಯೊಬ್ಬರಿಗೂ ಸಂತೋಷ ವಾಗುವಂತಾಗಬೇಕು. ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲರೂ ಗ್ರಾಮದಲ್ಲಿ ಸೌಹಾರ್ದದಿಂದ ಬಾಳ್ವೆ ನಡೆಸುವಂತೆ ಮಸೀದಿಗಳು ಪ್ರೇರೇಪಿಸುತ್ತವೆ. ಮಸೀದಿ ನಿರ್ಮಾಣ ಮಾಡುವ ಸಂಪತ್ತಿನ ಮೂಲ ಯಾವುದು ಎಂದು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಮಸೀದಿ ನಿರ್ಮಾಣ ಮಾಡಿದರೆ ಸಾಲದು. ಅದರಲ್ಲಿ ಪ್ರಾರ್ಥನೆ ಹಾಗೂ ಸತ್ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಜನತೆಯ ಆಶಾ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. ಕೂಡುರಸ್ತೆ ಮಸೀದಿ ನಿರ್ಮಾಣ ಮಾಡಿದ ಉದ್ಯಮಿಗೆ ತಂಙಳ್‌ ಅವರು ಪ್ರಾರ್ಥನೆ ನಡೆಸಿದರು.

ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್‌ ಸಯ್ಯದ್‌ ಅಹ್ಮದ್‌ ಪೂಕೋಯಾ ತಂಙಳ್‌ ಮಾತನಾಡಿ, ಮಸೀದಿಯ ಘನತೆ ಹಾಗೂ ಗೌರವವನ್ನು ಕಾಪಾಡಿಕೊಂಡು ಬರಬೇಕಾದ್ದು ಜಮಾತಿನವರ ಕರ್ತವ್ಯ. ಮಸೀದಿಯನ್ನು ಪ್ರಾರ್ಥನೆ ನಡೆಸುವ ಮೂಲಕ ಅಂದಗೊಳಿಸಬೇಕು ಎಂದು ಹೇಳಿದರು.

ಪಣೆಮಜಲು ಜುಮಾ ಮಸೀದಿ ಅಧ್ಯಕ್ಷ ಮೂಸಾ, ಮಸೀದಿ ನಿರ್ಮಾಣ ಮಾಡಿರುವ ಉದ್ಯಮಿ ಯೂಸುಫ್‌ ಶಾರ್ಜಾ, ಮಾಡನ್ನೂರು ನೂರುಲ್ಹುದಾ ಪ್ರಿನ್ಸಿಪಾಲ್ ಅಡ್ವೊಕೇಟ್ ಹನೀಫ್‌ ಹುದವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಕ್ವೆ ಖತೀಬ್‌ ಸಯ್ಯದ್‌ ಅಬೂಬುರ್ರಹ್ಮಾನ್‌ ಅಲ್ಬುಖಾರಿ ಫೈಝಿ, ಇರ್ಷಾದ್‌ ದಾರಿಮಿ ಮಿತ್ತಬೈಲು, ಮಹ್‌ಮೂದುಲ್ ಫೈಝಿ ಓಲೆಮುಂಡೋವು, ಮಸೀದಿ ಗೌರವಾಧ್ಯಕ್ಷ ಮಾಹಿನ್‌ ಬಾಳಾಯ, ಎಂಜಿನಿಯರ್‌ ಜಲೀಲ್, ಕರ್ನಾಟಕ ಮುಸ್ಲಿಂ ಜಮಾಅತ್‌ ಜಿಲ್ಲಾ ಉಪಾಧ್ಯಕ್ಷ ಪಿ.ಎಂ. ಅಬ್ದುಲ್ ರಹಿಮಾನ್‌ ಅರಿಯಡ್ಕ, ಅಬ್ಟಾಸ್‌ ಮದನಿ ಪಣೆಜಮಲು, ಕೆ.ಆರ್‌. ಹುಸೈನ್‌ ದಾರಿಮಿ ರೆಂಜಲಾಡಿ, ಅನೀಸ್‌ ಕೌಸರಿ ಕೆಐಸಿ, ಕೂಡುರಸ್ತೆ ಜುಮಾ ಮಸೀದಿ ಅಧ್ಯಕ್ಷ ಪಿ.ಕೆ. ಮಹಮ್ಮದ್‌, ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್‌ ಕೂಡುರಸ್ತೆ ಉಪಸ್ಥಿತರಿದ್ದರು.

ರಿಫಾಯಿಯ್ಯ ಯೂತ್‌ಫೆಡರೇಶನ್‌ ಮತ್ತು ಹಳೆ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕೂಡುರಸ್ತೆ ಖತೀಬ್‌ ಯಾಕೂಬ್‌ ದಾರಿಮಿ ಕೂಡುರಸ್ತೆ ಸ್ವಾಗತಿಸಿ ವಂದಿಸಿದರು.

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.