ಮರು ನಿರ್ಮಾಣ ಕಾಮಗಾರಿ ನನೆಗುದಿಗೆ
Team Udayavani, Sep 8, 2021, 3:00 AM IST
ಕಡಬ: ರಾಮಕುಂಜ ಸಮೀಪದ ಆತೂರಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಹಾಗೂ ಅಲ್ಲಿನ ತಾತ್ಕಾಲಿಕ ಪೊಲೀಸ್ ಚೌಕಿ ಧ್ವಂಸ ಪ್ರಕರಣ ನಡೆದು 2 ತಿಂಗಳು ಕಳೆದರೂ ಪೊಲೀಸ್ ಚೌಕಿಯ ಮರು ನಿರ್ಮಾಣದ ಮಾತ್ರ ತಳ ಪಾಯದ ಹಂತದಲ್ಲಿಯೇ ನನೆಗುದಿಗೆ ಬಿದ್ದಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಜೂ. 28 ರಂದು ಕಡಬ ಪೊಲೀಸರು ವಾಹನ ತಪಾಸಣೆೆ ಮಾಡುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಮಿನಿ ಲಾರಿ ಢಿಕ್ಕಿ ಹೊಡೆದು ಆತ ಮೃತಪಟ್ಟಾಗ ಕಿಡಿಗೇಡಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ, ದಾನಿಗಳ ನೆರವಿನಿಂದ ನಿರ್ಮಾಣವಾಗಿದ್ದ ಪೊಲೀಸ್ ಚೌಕಿಯನ್ನು ಧ್ವಂಸ ಮಾಡಿ ವಿಕೃತಿ ಮೆರೆದಿದ್ದರು. ಹೆಚ್ಚಿನ ಬಲದೊಂದಿಗೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಘಟನೆಗೆ ಸಂಬಂಧಿಸಿ 20ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಒಟ್ಟು 16 ಜನರ ಬಂಧನವಾಗಿತ್ತು. ಘಟನೆಯ ಮರುದಿನವೇ ಪೊಲೀಸ್ ಚೌಕಿಯನ್ನು ಮರು ನಿರ್ಮಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖಾಧಿಕಾರಿಗಳು ಸರ್ವೇ ಕಾರ್ಯ ಮಾಡಿ ಜಾಗ ಗುರುತಿಸಿಲಾಗಿತ್ತು. ದಾನಿಗಳ ನೆರವಿನಿಂದ ಮರಳು, ಜಲ್ಲಿ, ಕೆಂಪುಕಲ್ಲು ಸೇರಿದಂತೆ ಆಗತ್ಯ ಸಾಮಗ್ರಿಗಳನ್ನು ತರಿಸಿ ಚೌಕಿ ನಿರ್ಮಾಣಕ್ಕೆ ಅಡಿಪಾಯ ತೋಡುವ ಕಾರ್ಯ ಕೂಡ ನಡೆಯಿತು. ಆದರೆ ಇಷ್ಟೆಲ್ಲ ಆಗಿ ತಿಂಗಳು ಕಳೆದರೂ ತಳಪಾಯದ ಹಂತದಿಂದ ಕಾಮಗಾರಿ ಮುಂದುವರಿಯಲಿಲ್ಲ.
ಬಸ್ ತಂಗುದಾಣಕ್ಕೆ ಶಿಲಾನ್ಯಾಸ:
ಚೌಕಿ ನಿರ್ಮಿಸಲು ಉದ್ದೇಶಿಸಿದ ಸ್ಥಳದ ಪಕ್ಕದಲ್ಲೇ ಆಲಂಕಾರು ಸಿ.ಎ. ಬ್ಯಾಂಕಿನ ಕೊçಲ ಶಾಖಾ ಕಟ್ಟಡದ ಬಳಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಬಸ್ತಂಗುದಾಣ, ಸಾರ್ವಜನಿಕ ಶೌಚಾಲಯ ಹಾಗೂ ಪೊಲೀಸರ ಅತಿಥಿಗೃಹ ಗಳನ್ನೊಳಗೊಂಡ ಕಟ್ಟಡ ನಿರ್ಮಾಣಕ್ಕೆ ಸಚಿವ ಎಸ್.ಅಂಗಾರ ಕೆಲವು ದಿನಗಳ ಹಿಂದೆ ಶಿಲಾನ್ಯಾಸ ನೆರ ವೇರಿಸಿದ್ದಾರೆ. ಸಚಿವರು ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿ ಶಿಲಾನ್ಯಾಸ ನಡೆದಿದ್ದು ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಮಧ್ಯೆ ಕೊçಲದಲ್ಲಿ ಪೊಲೀಸ್ ಔಟ್ಪೋಸ್ಟ್ ನಿರ್ಮಾಣ ಮಾಡಬೇಕೆಂದು ಸಚಿವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಅಕ್ರಮಗಳಿಗೆ ಕಡಿವಾಣ ಹಾಕಿದ್ದ ಪೊಲೀಸ್ ಚೌಕಿ :
ಲಾಕ್ಡೌನ್ ವೇಳೆ ಆತೂರಿನಲ್ಲಿ ಪೊಲೀಸ್ ಚೆಕ್ಪೋಸ್ಟ್ ರಚನೆ ಮಾಡಲಾಗಿತ್ತು. ಬಳಿಕ ಸ್ಥಳೀಯ ಬೀಟ್ ಪೊಲೀಸ್ ಹರೀಶ್ ಅವರ ಮುತು ವರ್ಜಿಯಲ್ಲಿ ದಾನಿಗಳ ನೆರವಿನಿಂದ ತಾತ್ಕಲಿಕ ನೆಲೆಯಲ್ಲಿ ಪೊಲೀಸ್ ಚೌಕಿ ನಿರ್ಮಿಸಲಾಗಿತ್ತು. ಅದು ದನ ಕಳ್ಳರು, ಮರಗಳ್ಳರು, ಅಕ್ರಮ ದಂಧೆಕೋರರು ಹಾಗೂ ಪುಂಡು ಪೋಕರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ಕಟ್ಟುನಿಟ್ಟಾದಾಗ ಅಕ್ರಮ ದಂಧೆಕೋರರು ಪೊಲೀಸರ ವಿರುದ್ಧ ಕುದಿಯಲಾರಂಭಿಸಿದರು. ಚೌಕಿ ಬಳಿ ನಡೆದ ಅಪಘಾತಕ್ಕೆ ಪೊಲೀಸರೇ ಕಾರಣವೆನ್ನುವಂತೆ ಗಲಾಟೆ ಎಬ್ಬಿಸಿದ ಕಿಡಿಗೇಡಿಗಳು ತಮಗೆ ಬೇಡವಾದ ಪೊಲೀಸ್ ಚೌಕಿಯನ್ನು ಧ್ವಂಸ ಮಾಡಿ ಪೊಲೀಸರ ವಿರುದ್ಧವೇ ಏರಿಹೋಗಿದ್ದರು.
ಆತೂರಿನಲ್ಲಿದ್ದ ತಾತ್ಕಾಲಿಕ ಪೊಲೀಸ್ ಚೌಕಿ ನಮ್ಮ ಕರ್ತವ್ಯನಿರತ ಸಿಬಂದಿಗೆ ಬಿಸಿಲು, ಗಾಳಿ ಮಳೆಯಿಂದ ರಕ್ಷಣೆ ಒದಗಿಸುತ್ತಿತ್ತು. ಆದರೆ ಅದನ್ನು ಕಿಡಿಗೇಡಿಗಳು ಪುಡಿಗೈದಿರುವುದು ದುರ ದೃಷ್ಟಕರ. ಅಲ್ಲಿ ಶೀಘ್ರದಲ್ಲಿ ಪೊಲೀಸ್ ಚೌಕಿ ನಿರ್ಮಿಸುವ ಪ್ರಯತ್ನದಲ್ಲಿದ್ದೇವೆ. –ರುಕ್ಮ ನಾಯ್ಕ, ಕಡಬ ಎಸ್ಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್