ಧರ್ಮಸ್ಥಳ: ಭಕ್ತರಿಗೆ ಕಷ್ಟ ರಾಜ್ಯ ಸಾರಿಗೆ ಸಂಸ್ಥೆಗೆ ನಷ್ಟ


Team Udayavani, Dec 13, 2020, 6:25 AM IST

ಧರ್ಮಸ್ಥಳ: ಭಕ್ತರಿಗೆ ಕಷ್ಟ ರಾಜ್ಯ ಸಾರಿಗೆ ಸಂಸ್ಥೆಗೆ ನಷ್ಟ

ಧರ್ಮಸ್ಥಳ: ಸಾರಿಗೆ ನೌಕರರು ಬಸ್‌ ನಿಲ್ದಾಣದಲ್ಲೇ ಅಡುಗೆ ಸಿದ್ಧಪಡಿಸಿದರು.

ಬೆಳ್ತಂಗಡಿ: ಸಾರಿಗೆ ನೌಕರರ ಮುಷ್ಕರವು ಧರ್ಮಸ್ಥಳ ಲಕ್ಷದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಬರುವ ನಾಡಿನ ಎಲ್ಲೆಡೆಯ ಭಕ್ತರಿಗೆ ತ್ರಾಸ ತಂದಿದೆ. ಇದರಿಂದ ಕೆಎಸ್ಸಾರ್ಟಿಸಿ ಆದಾಯಕ್ಕೆ ಹೊಡೆತ ಬಿದ್ದಿದೆ.

ಧರ್ಮಸ್ಥಳ ಘಟಕದಿಂದ ಪ್ರತಿನಿತ್ಯ ರಾಜ್ಯದ ವಿವಿಧೆಡೆಗೆ 350ಕ್ಕೂ ಅಧಿಕ ಬಸ್‌ಗಳು ಟ್ರಿಪ್‌ ನಡೆಸು ತ್ತವೆ. ಲಕ್ಷದೀಪೋತ್ಸವ ಸಂದರ್ಭದಲ್ಲಿ ಒಂದು ವಾರ ಕಾಲ ಹೆಚ್ಚುವರಿ ಟ್ರಿಪ್‌ ಇರುತ್ತದೆ. ಮುಂಜಾನೆ 5.30 ರಿಂದ ಆರಂಭಿಸಿ ಪ್ರತೀ ಕಾಲು ತಾಸಿಗೊಂದರಂತೆ ಬೆಂಗಳೂರಿಗೆ ಮತ್ತು ಅರ್ಧ ತಾಸಿಗೆ ಒಂದರಂತೆ ಉಡುಪಿ, ಮಂಗಳೂರು; ಪ್ರತೀ ಹತ್ತು ನಿಮಿಷಗಳಿಗೆ ಒಂದರಂತೆ ಸುಬ್ರಹ್ಮಣ್ಯಕ್ಕೆ ಬಸ್‌ ಸಂಚರಿಸುತ್ತವೆ.

ಆದಾಯ ಕಡಿತ
ಲಕ್ಷ ದೀಪೋತ್ಸವ ಸಂದರ್ಭ ಧರ್ಮಸ್ಥಳ ಘಟಕವೊಂದರಲ್ಲೇ ಕನಿಷ್ಠ 50 ಹೆಚ್ಚುವರಿ ಬಸ್‌ ನಿಯೋಜಿಸಲಾಗುತ್ತಿತ್ತು. ಮಡಿಕೇರಿ, ಪುತ್ತೂರು, ಬಿ.ಸಿ. ರೋಡ್‌, ಸುಳ್ಯ ವ್ಯಾಪ್ತಿಗೆ ಪ್ರತೀ ನಿತ್ಯ 30 ಟ್ರಿಪ್‌ ಇರುತ್ತಿದ್ದವು. ಇದೂ ಸಾಧ್ಯವಾಗಿಲ್ಲ. ರಾಜಹಂಸ ಬಸ್‌ಗಳ 10 ಟ್ರಿಪ್‌ಗ್ಳನ್ನೂ ಕಡಿತ ಮಾಡಲಾಗಿದೆ. ಲಕ್ಷದೀಪೋತ್ಸವ ಸಂದರ್ಭ ಸರಾಸರಿ ಪ್ರತೀ ದಿನ 20ರಿಂದ 22 ಲಕ್ಷ ರೂ. ಆದಾಯ ಬರುತ್ತಿತ್ತು. ಪ್ರಸಕ್ತ ಆರಂಭದ ಎರಡು ದಿನ 10 ಲಕ್ಷ ರೂ. ದಾಟಿಲ್ಲ. ಮುಷ್ಕರದಿಂದಾಗಿ ಬೆರಳೆಣಿಕೆಯ ಬಸ್‌ಗಳು ಮಾತ್ರ ಓಡಾಟ ನಡೆಸಿವೆ. ಇದರಿಂದ ಲಕ್ಷಾಂರ ರೂ.ಆದಾಯ ಖೋತಾ ಆಗಿದೆ.

ಮುಷ್ಕರ ಬಿಸಿ, ಪ್ರಯಾಣಿಕರ ಪರದಾಟ
ಶುಕ್ರವಾರ ಮುಷ್ಕರ ಇತ್ತಾದರೂ ಕೆಲವು ಬಸ್‌ಗಳು ಸಂಚರಿಸಿದ್ದವು. ಆದರೆ ಶನಿವಾರ ಎಲ್ಲ ಸಿಬಂದಿಯೂ ಮುಷ್ಕರವನ್ನು ಬೆಂಬಲಿಸಿದ್ದರಿಂದ ಧರ್ಮಸ್ಥಳ ಘಟಕದಲ್ಲಿ 140 ಬಸ್‌ಗಳ ಪೈಕಿ 100 ನಿಲ್ದಾಣದಲ್ಲೇ ಉಳಿದಿದ್ದವು. ಪ್ರಯಾಣಿಕರ ಅನಿವಾರ್ಯತೆಯನ್ನು ಪ‌ರಿಗಣಿಸಿ ಧರ್ಮಸ್ಥಳ- ಮಂಗಳೂರು ನಡುವೆ 10 ಟ್ರಿಪ್‌ ನಡೆಸಿದ್ದು ಬಿಟ್ಟರೆ ಬೇರಾವುದೇ ಟ್ರಿಪ್‌ ಮಾಡಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ನಿಲ್ದಾಣದಲ್ಲೇ ಊಟ, ಉಪಾಹಾರ
ನೂರಾರು ಸಿಬಂದಿ ಮುಷ್ಕರ ಬೆಂಬಲಿಸಿ ಧರ್ಮಸ್ಥಳದಲ್ಲೇ ಉಳಿದಿದ್ದು, ಸ್ವತಃ ಬಾಣಸಿಗರಾಗಿ ಊಟ, ಉಪಾಹಾರ ವ್ಯವಸ್ಥೆ ಮಾಡಿಕೊಂಡರು. ಉಳಿದ ಪ್ರಯಾಣಿಕರಿಗೂ ಆಹಾರದ ವ್ಯವಸ್ಥೆ ಮಾಡಿದರು.

ಮುಷ್ಕರದಿಂದಾಗಿ ಬಸ್‌ಗಳು ಓಡಾಟ ನಡೆಸಿಲ್ಲ. ಕೊರೊನಾದಿಂದ ನಷ್ಟವಾಗಿತ್ತು. ಈಗ ಆದಾಯ ಮತ್ತಷ್ಟು ಕುಸಿದಿದೆ. ಲಕ್ಷ ದೀಪೋತ್ಸವಕ್ಕೆ ಹೆಚ್ಚುವರಿ ಬಸ್‌ ಹಾಕಬೇಕಿತ್ತಾದರೂ ಸಾಧ್ಯವಾಗಿಲ್ಲ.
-ಶಿವರಾಮ ನಾಯ್ಕ , ಘಟಕ ವ್ಯವಸ್ಥಾಪಕರು, ಧರ್ಮಸ್ಥಳ

ಮುಷ್ಕರದಿಂದ ಕಡಿತಗೊಂಡ ಸೇವೆ
100 ಟ್ರಿಪ್‌ ಧರ್ಮಸ್ಥಳ- ಮಂಗಳೂರು
196 ಟ್ರಿಪ್‌ಬೆಂಗಳೂರು, ಹುಬ್ಬಳ್ಳಿ, ಚಿಕ್ಕಮಗಳೂರು, ಇತರೆಡೆ
45 ಟ್ರಿಪ್‌ ಧರ್ಮಸ್ಥಳ-ಸುಬ್ರಹ್ಮಣ್ಯ

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

Puttur ಶ್ರೀಗಂಧ ದಾಸ್ತಾನು ಪತ್ತೆ: ಓರ್ವ ಸೆರೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.