ಬರಿದಾಗುತ್ತಿದೆ ಕುಮಾರಧಾರಾ ಒಡಲು

ಭವಿಷ್ಯದ ದಿನಗಳಲ್ಲಿ ಬರಗಾಲ ಆವರಿಸುವ ಲಕ್ಷಣ ಗೋಚರ!

Team Udayavani, Dec 13, 2019, 4:47 AM IST

sa-41

ಸುಬ್ರಹ್ಮಣ್ಯ: ದೀರ್ಘಾವಧಿ ಮಳೆ ಬಳಿಕ ಚಳಿ, ಬಿಸಿಲಿನಾಟ ಆರಂಭ ವಾಗಿದೆ. ನಿರಂತರ ಮಳೆಯಿಂದ ರೋಸಿ ಹೋಗಿದ್ದ ಜಿಲ್ಲೆಯಲ್ಲಿ ಈಗ ರಣ ಬಿಸಿ ಲಿನ ವಾತಾವರಣ ಕಾಡುತ್ತಿದೆ. ತಾಪ ಮಾನದಲ್ಲೂ ಏರಿಕೆ ಯಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಒಡಲಲ್ಲಿ ಹರಿಯುತ್ತಿರುವ ಪುಣ್ಯ ನದಿ ಕುಮಾರಧಾರಾ ನಿಧಾನಕ್ಕೆ ಬತ್ತಲಾರಂಭಿಸಿದೆ.

ಬೇಸಗೆ ಆರಂಭದಲ್ಲೇ ನದಿ ಬತ್ತುವುದನ್ನು ನೋಡಿದರೆ ಭವಿಷ್ಯದ ದಿನಗಳಲ್ಲಿ ಬರಗಾಲ ಆವರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಹಿಂದಿನ ವರ್ಷಗಳಲ್ಲಿ ಭಾರೀ ಮಳೆಯಿಂದ ಜಲ ಪ್ರಳಯವನ್ನೇ ಸೃಷ್ಟಿಸಿದ್ದ ಈ ಭಾಗದ ನದಿ, ತೊರೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಹರಿವು ಕ್ಷೀಣಿಸುತ್ತಿರುವುದು ಕಂಡು ಬರುತ್ತಿವೆ.

ಕುಮಾರಧಾರಾ ಸಹಿತ ಉಪ ನದಿಗಳ ತಳದಲ್ಲಿ ಕಲ್ಲು ಬಂಡೆಗಳು ಗೋಚರವಾಗುತ್ತಿದ್ದು, ಮರಳು ಮಣ್ಣು ರಾಶಿ ಬಿದ್ದಿವೆ. ಪ್ರಕೃತಿಯ ಮುನಿಸು ಬರಗಾಲದ ರೂಪದಲ್ಲಿ ಮುಂದಿನ ದಿನಗಳಲ್ಲಿ ಜನತೆಯನ್ನು ಕಾಡಲು ತಯಾರಿ ನಡೆಸುತ್ತಿರುವಂತೆ ಭಾಸವಾಗುತ್ತಿದೆ. ಜಿಲ್ಲೆಯ ಪ್ರಮುಖ ನದಿಗಳಲ್ಲಿ ಕುಮಾರಧಾರಾ ಒಂದು. ಮಳೆಗಾಲದಲ್ಲಿ ತುಂಬಿ ಹರಿಯುವ ಕುಮಾರಧಾರಾ ಬೇಸಗೆಯಲ್ಲಿ ಬತ್ತುತ್ತದೆ. ಇಡೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕುಮಾರಧಾರಾ ನದಿ ನೀರು ಬಳಕೆಗೆ ಸಿಗುತ್ತದೆ. ನದಿಯಿಂದ ಜಾಕ್‌ವೆಲ್‌ ಮೂಲಕ ನೀರು ಎತ್ತಿ ತೊಟ್ಟಿಗಳಲ್ಲಿ ಸಂಗ್ರಹಿಸಿ ಬಳಕೆಗೆ ಮಾಡಲಾಗುತ್ತಿದೆ. ಬೇಸಗೆ ಮಧ್ಯದ ಅವಧಿ ತನಕವೂ ನೀರಿಗೆ ಬರ ಬರುವುದಿಲ್ಲ.

ಜಲ ದಿಗ್ಬಂಧನ!
ಈ ಬಾರಿ ಬೇಗನೆ ನದಿ ಬತ್ತಲಾ ರಂಭಿಸಿರುವುದು ಆತಂಕವನ್ನು ಉಂಟು ಮಾಡಿದೆ. ಈ ನದಿಯಷ್ಟೆ ಬತ್ತುತ್ತಿ ರುವುದಲ್ಲ, ಈ ಭಾಗದ ಹರಿಹರ ಕೊಲ್ಲಮೊಗ್ರು, ಕಲ್ಮಕಾರು, ಮಡಪ್ಪಾಡಿ, ಗುತ್ತಿಗಾರು, ಪಂಜ, ಗುಂಡ್ಯ ಈ ಭಾಗದ ಉಪ ನದಿ, ಹೊಳೆಗಳಲ್ಲೂ ನೀರಿನ ಹರಿವು ಇಳಿಕೆ ಕಂಡಿದೆ. ಈ ನದಿಗಳೆಲ್ಲವೂ ಈ ಹಿಂದೆಲ್ಲ ಮುಂಗಾರಿನಲ್ಲಿ ಪ್ರವಾಹ ಮಟ್ಟವನ್ನೇ ಮೀರಿ ಹರಿದು ಹಲವು ಗ್ರಾಮಗಳಿಗೆ ಜಲ ದಿಗ್ಬಂಧನ ವಿಧಿಸಿದ್ದವು. ಮಾತ್ರವಲ್ಲದೆ, ಕೃಷಿ ಫ‌ಸಲನ್ನು ಬಲಿ ಪಡೆದಿದ್ದವು. ಆದರೆ, ಈ ಹೊಳೆಗಳು ಇಂದು ಬತ್ತುವುದನ್ನು ನೋಡಿದರೆ, ಪ್ರವಾಹ ಸೃಷ್ಟಿಸಿದ್ದನ್ನು ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ತಣ್ಣಗೆ ಹರಿಯುತ್ತಿವೆ. ಅತಿವೃಷ್ಟಿಯಿಂದ ಅಂತರ್ಜಲ ಮಟ್ಟ ಏರಿಕೆಯಾಗಿ ಬೆಟ್ಟ ಶ್ರೇಣಿಗಳ ಕುಸಿತಕ್ಕೆ ಕಾರಣವಾದ ಜಲ ಮೂಲಗಳು ಸಂಪೂರ್ಣ ಬತ್ತಿ ಹೋಗುವ ಆತಂಕಗಳು ಗೋಚರಿಸುತ್ತಿವೆ. ಸದ್ಯಕ್ಕೆ ನೀರಿನ ಕೊರತೆಯ ಆತಂಕವಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ಜಲಕ್ಷಾಮದ ಸುಳಿವು ಕಂಡು ಬರುತ್ತಿವೆ. ಈ ಭಾಗದಲ್ಲಿ ನೀರಿನ ಜಲಮೂಲಗಳಾದ ಹಳ್ಳ, ಕೊಳ್ಳ, ತೊರೆಗಳಿದ್ದರೂ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ತಲೆದೋರುತ್ತದೆ. ಮಳೆ ನಿಂತು ಬೆರಳೆಣಿಕೆಯ ದಿನಗಳು ಮಾತ್ರ ಕಳೆದಿದ್ದು, ಜಿಲ್ಲೆಯಾದ್ಯಂತ ಸುಡು ಬಿಸಿಲಿನ ಹವಾಮಾನ ಕಂಡು ಬರುತ್ತಿದೆ. ಬೆಳಗ್ಗೆ ಸಾಧಾರಣ ಚಳಿಯ ವಾತಾವರಣವಿದ್ದು ಅನಂತರ ತಾಪ ಮಾನ ಏರುತ್ತಿದೆ. ದಿನದ ಉಷ್ಣಾಂಶದಲ್ಲಿ ಏರಿಕೆ ದಾಖಲಾಗುತ್ತಿದೆ.

ಮಣ್ಣು, ಕಲ್ಲು, ಬಂಡೆಗಳ ರಾಶಿ
ಭಾರಿ ಭೂ ಕುಸಿತ ಮತ್ತು ಉಕ್ಕೇರಿದ ಪ್ರವಾಹದಿಂದ ನದಿಗಳು ಹರಿಯುವ ದಿಕ್ಕು ಬದಲಾಯಿಸಿದ ಘಟನೆಗಳು ಪುಷ್ಪಗಿರಿ ತಪ್ಪಲಿನ ಕುಮಾರಧಾರಾ, ಕಲ್ಮಕಾರು, ಶಿರಾಡಿ ಭಾಗದಲ್ಲಿ ನಡೆದಿತ್ತು. ಭೂ ಕುಸಿತದಿಂದ ಭಾರಿ ಪ್ರಮಾಣದ ಮಣ್ಣು, ಕಲ್ಲು ಬಂಡೆಗಳ ರಾಶಿ ಹಾಗೂ ಮರಗಳು ಕೂಡ ನದಿ ತೊರೆಗಳ ಒಡಲು ಸೇರಿದ್ದು, ಅವುಗಳು ನದಿಯಲ್ಲೇ ಉಳಿದಿವೆ. ಇದೂ ನೀರಿನ ಹರಿವು ಮತ್ತು ಅಂತರ್ಜಲ ಕ್ಷೀಣಿಸಲು ಮತ್ತೂಂದು ಕಾರಣವಾಗುತ್ತಿವೆ. ಕೆರೆಗಳು, ಬಾವಿಗಳು ಮಾತ್ರವಲ್ಲದೆ ಬೋರ್‌ವೆಲ್‌ಗ‌ಳಲ್ಲೂ ನೀರಿನ ಪ್ರಮಾಣ ಕೊಂಚ ಇಳಿಕೆಯಾಗುತ್ತಲಿದೆ. ಮುಂದಿನ ದಿನಗಳಲ್ಲಿ ಅಡಿಕೆ ತೋಟಗಳು ನೀರಿಲ್ಲದೆ ಒಣಗುವ ಲಕ್ಷಣಗಳು ಸಹಜವಾಗಿಯೇ ಇರುತ್ತದೆ. ಇದು ಕೃಷಿಕರನ್ನು ಕಂಗಾಲಾಗಿಸುತ್ತದೆ.

ಆರಂಭದಲ್ಲೇ ಮುನ್ನೆಚ್ಚರಿಕೆ
ಜಲಪ್ರಳಯ ಸಂಭವಿಸಿದ ವೇಳೆ ನದಿಯಲ್ಲಿ ಗುಡ್ಡದ ಮಣ್ಣು ತುಂಬಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಮಾರಧಾರಾ ನದಿ ಪಾತ್ರದ ಜನವಸತಿ ಇರುವ ವ್ಯಾಪ್ತಿಯಲ್ಲಿ 1 ಕಿ.ಮೀ. ವ್ಯಾಪ್ತಿಯ ತನಕ ನದಿಯ ಹೂಳೆತ್ತುವ ಕುರಿತಂತೆ ಪಂಚಾಯತ್‌ ಕಡೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಧಾರಣ ಸಾಮರ್ಥ್ಯ ಹೆಚ್ಚಿಸುವ ಕ್ರಮಕ್ಕೂ ಮನವಿ ಮಾಡಿಕೊಳ್ಳಲಾಗಿದೆ. ಕುಮಾರಧಾರಾ ಸ್ನಾನ ಘಟ್ಟದ ಬಳಿ ದೇಗುಲದ ಕಿಂಡಿ ಅಣೆಕಟ್ಟು ಇದ್ದು, ಹರಿದು ಹೋಗುವ ನೀರು ಇಂಗಿಸಲು ವ್ಯವಸ್ಥೆ ಇದೆ. ನದಿಯಲ್ಲಿ ನೀರಿನ ಹರಿವು ಈಗಲೂ ಇದ್ದು, ಕೊರತೆ ಆಗದಂತೆ ಆರಂಭದಲ್ಲೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
– ಮುತ್ತಪ್ಪ , ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಒ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.