ಬಂಟ್ವಾಳ: ಉರುಳಿಗೆ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಚಿರತೆಯ ರಕ್ಷಣೆ
Team Udayavani, Mar 22, 2022, 12:03 PM IST
ಬಂಟ್ವಾಳ: ಉರುಳಿಗೆ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ್ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆಯವರು ರಕ್ಷಿಸಿ ಪಿಲಿಕುಳಕ್ಕೆ ಹಸ್ತಾಂತರ ಮಾಡಲಾಗಿದೆ.
ಅಲ್ಲಿಪಾದೆ ಸಮೀಪದ ದೇವಶ್ಯಪಡೂರು ಗ್ರಾಮದ ಬೀಜಪ್ಪಾಡಿ ಎಂಬಲ್ಲಿ ಕಾಡಿನಲ್ಲಿ ಯಾರೋ ಇಟ್ಟಿದ್ದ ಉರುಳಿಗೆ ಸುಮಾರು 6 ವರ್ಷ ಪ್ರಾಯದ ಗಂಡು ಚಿರತೆಯೊಂದು ಉರುಳಿ ಗೆ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದರು.
ಇದನ್ನೂ ಓದಿ:ಮಂಗಳೂರು: ನಂದಿಗುಡ್ಡ ವೇಶ್ಯಾವಾಟಿಕೆ ಪ್ರಕರಣ; ಮತ್ತೊಬ್ಬನ ಬಂಧನ
ಕೂಡಲೇ ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತ್ರತ್ವದಲ್ಲಿ ರಾತ್ರಿ ಸುಮಾರು 9 ಗಂಟೆಯಿಂದ ಮುಂಜಾನೆ 4. ಗಂಟೆ ವರೆಗೆ ಕಾರ್ಯಚರಣೆ ನಡೆಸಿ ಚಿರತೆಯನ್ನು ರಕ್ಷಣೆ ಮಾಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಚಿರತೆ ಆರೋಗ್ಯವಾಗಿದ್ದು ಪಿಲಿಕುಳ ನಿಸರ್ಗದಾಮಕ್ಕೆ ಹಸ್ತಾಂತರ ಮಾಡಲಾಗಿದೆ.
ವೈದ್ಯಾಧಿಕಾರಿ ಯಶಸ್ವಿ, ಇಲಾಖೆಯ ಅಧಿಕಾರಿಗಳಾದ ಪ್ರೀತಂ,ಅರಣ್ಯ ರಕ್ಷಕರಾದ ಲಕ್ಮೀನಾರಾಯಣ, ಜಿತೇಶ್, ವಾಚರ್ ಪ್ರವೀಣ್, ಚಾಲಕ ಜಯರಾಮ ಸಂಕೇತ ಹಾಗೂ ಸ್ನೇಕ ಕಿರಣ್ ಸಹಾಯ ದಲ್ಲಿ ರಕ್ಷಣೆ ಮಾಡಲಾಯಿತು.