ನಿಡ್ಪಳ್ಳಿ: ಆಗುತ್ತಿರುವ ಕಾಮಗಾರಿ ಬೇಗ ಮುಗಿಯಲಿ

ಸೋಲಾರ್‌ ಇಂಧನದ ಗ್ರಾಮಕ್ಕೆ ಅಭಿವೃದ್ಧಿಯ ಬಲವೂ ಸಿಗಲಿ

Team Udayavani, Aug 1, 2022, 10:10 AM IST

4

ಬೆಟ್ಟಂಪಾಡಿ: ಪಾಣಾಜೆ ಗ್ರಾಮ ಪಂಚಾಯತ್‌ನಿಂದ 2015ರಲ್ಲಿ ವಿಭಜನೆಗೊಂಡ ನಿಡ್ಪಳ್ಳಿ ಬರೀ ಗ್ರಾಮವಾಗಿ ಉಳಿಯಲಿಲ್ಲ. ಗ್ರಾಮ ಪಂಚಾಯತ್‌ ಆಯಿತು.

ಜೈನ ಅರಸರ ಕಾಲದಲ್ಲಿ ಈ ಪ್ರದೇಶವು ಸಂಪದ್ಭರಿತವಾಗಿತ್ತು. ಅನ್ಯರು ಆಕ್ರಮಣ ಎಸಗಿದ ಸಂದರ್ಭದಲ್ಲಿ ಜನರು ತಮ್ಮ ಹಣ, ಸಂಪತ್ತನ್ನು ಬಾವಿ, ಕೆರೆಗಳಲ್ಲಿ ಅಡಗಿಸಿದರು. ನಿಧಿಯಿರುವ ಹಳ್ಳಿ ಆದ ಕಾರಣ ನಿಡ್ಪಳ್ಳಿ ಎನ್ನುವ ಹೆಸರು ಎನ್ನಲಾಗುತ್ತದೆ.

ಕೌಡಿಚ್ಚಾರು-ರೆಂಜ ಲೋಕೋ ಪಯೋಗಿ ರಸ್ತೆಯ ರೆಂಜದಿಂದ ಸ್ವಲ್ಪ ದೂರದಲ್ಲಿ ಪಂಚಾಯತ್‌ ಕಚೇರಿ ಇದೆ. 9 ಮಂದಿ ಚುನಾಯಿತ ಸದಸ್ಯರಿದ್ದಾರೆ. ಮೂರು ವಾರ್ಡ್‌ ಗಳಿವೆ. 1129.1 ಹೆಕ್ಟೇರ್‌ ವಿಸ್ತೀರ್ಣ. 263.5 ಹೆಕ್ಟೇರ್‌ ಅರಣ್ಯಭಾಗವಿದ್ದು, ಗೋಮಾಳವೂ ಇದೆ. ಒಟ್ಟು 3257 ಜನಸಂಖ್ಯೆ. ಅಡಿಕೆ, ತೆಂಗು,ರಬ್ಬರ್‌ ಇಲ್ಲಿನ ಮುಖ್ಯ ಆರ್ಥಿಕ ಬೆಳೆ. ಕರಿಮೆಣಸು, ಬಾಳೆ,ತರಕಾರಿ ಉಪಬೆಳೆ. ಕನ್ನಡ, ತುಳು ವ್ಯವಹಾರಿಕ ಭಾಷೆಗಳು. ಮೂರು ಪ್ರಾಥಮಿಕ ಶಾಲೆ, 1 ಪ್ರೌಢಶಾಲೆ ಇದೆ.

ಇವೆಲ್ಲ ಆಗಲಿ

ಪ್ರಸ್ತುತ ಗ್ರಾ.ಪಂ. ಕಚೇರಿಯ ಮೇಲ್ಭಾಗದಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಿ 3 ಕಿ. ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಒಂದು ಕಿ. ವ್ಯಾಟ್‌ ಗ್ರಾ.ಪಂ. ಬಳಸಿದರೆ, ಉಳಿದದ್ದನ್ನು ಮೆಸ್ಕಾಂಗೆ ನೀಡಲು ಯೋಜನೆ ರೂಪಿಸಿದೆ. ಕಚೇರಿಯ ಎಲ್ಲ ಉಪಕರಣಗಳು ಸೋಲಾರ್‌ ಪವರ್‌ ನಿಂದ ನಡೆಯುವುದು ವಿಶೇಷ.

ನರೇಗಾ ಯೋಜನೆಯಲ್ಲಿ ಚೂರಿಪದವು ಹಿ.ಪ್ರಾ. ಶಾಲೆ, ಸರಕಾರಿ ಪ್ರೌಢಶಾಲೆಗೆ ಆವರಣಗೋಡೆ ರಚನೆ, ಶೌಚಾಲಯ, ಕಿಂಡಿ ಅಣೆಕಟ್ಟುಗಳ ರಚನೆಯಾಗಿದೆ. ರಸ್ತೆ ಕಾಮಗಾರಿಗಳೂ ನಡೆದಿವೆ. ತ್ಯಾಜ್ಯ ವಿಲೇವಾರಿ ವಾಹನವನ್ನು ಖರೀದಿಸಲಾಗಿದೆ. ವಿವಿಧ ಅನುದಾನದಲ್ಲಿ ಕಚ್ಚಾ ರಸ್ತೆಗಳಿಗೆ ಕಾಂಕ್ರೀಟ್‌ ಹಾಕಲಾಗಿದೆ.

ಏಳು ವರ್ಷದ ಹಿಂದೆ ರಚನೆಯಾದ ಗ್ರಾ.ಪಂ. ಕಚೇರಿಯು ಸಮು ದಾಯ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ 20 ಲಕ್ಷ ರೂ. ಅನುದಾನದಲ್ಲಿ ನೂತನ ಆಡಳಿತ ಕಚೇರಿ ನಿರ್ಮಾಣವಾಗುತ್ತಿದೆ. ಜತೆಗೆ ಹತ್ತಿರದಲ್ಲೇ 18ಲಕ್ಷ ರೂ. ವೆಚ್ಚದಲ್ಲಿ ಬಾಪೂಜಿ ಸೇವಾ ಕೇಂದ್ರ ಕಟ್ಟಡದ ಕಾಮಗಾರಿ ಕೈಗೊಳ್ಳಲಾಗಿದೆ.

ಎಂಪೆಕಲ್ಲು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 1.30 ಕೋಟಿ ರೂ. ವೆಚ್ಚದಲ್ಲಿ ಸೇತುವೆ, ಕಿಂಡಿ ಅಣೆಕಟ್ಟು ರಚನೆಯಾಗುತ್ತಿದೆ. ಇದಕ್ಕಾಗಿ ರಸ್ತೆಯನ್ನು ಮುಚ್ಚಲಾಗಿತ್ತು. ಈಗ ಕಾಮಗಾರಿ ಮುಗಿದಿದ್ದು ದ್ವಿಚಕ್ರ ಸವಾರರು ಸಂಚರಿಸುತ್ತಿದ್ದಾರೆ. ಇಕ್ಕೆಲಗಳಲ್ಲಿ ಯಾವುದೇ ಆಧಾರ ಇಲ್ಲದೆ ಇರುವುದರಿಂದ ವಾಹನ ಕೆಟ್ಟು ಹೋದರೆ ಅಥವಾ ನಿಯಂತ್ರಣ ತಪ್ಪಿದರೆ ಅನಾಹುತ ಸಂಭವಿಸಬಹುದು. ಇದಕ್ಕೆ ಎಚ್ಚರ ವಹಿಸಬೇಕಿದೆ.

ಕಾಮಗಾರಿ ನಡೆಯುವ ಹತ್ತಿರದ ಕಚ್ಚಾ ರಸ್ತೆ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಪ್ರದೇಶದಲ್ಲಿ ಖಾಸಗಿಯವರ ಜಮೀನು ಮಳೆಗೆ ಕೊಚ್ಚಿ ಹೋಗಿದೆ. ತಡೆಗೋಡೆಯೂ ರಚನೆಯಾಗಬೇಕಿದೆ. ಲೋಕೋಪಯೋಗಿ ರಸ್ತೆಯ ಕೂಟೇಲು ಎಂಬಲ್ಲಿ 2ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸುತ್ತಿದೆ. ಹಾಗಾಗಿ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಳೆದುಕೊಂಡು ನಿಡ³ಳ್ಳಿ ದ್ವೀಪದಂತೆ ಆಗಿದೆ. ಕಳೆದ ತಿಂಗಳಲ್ಲಿ ಸೇತುವೆ ಕೆಳಗಡೆ ನೀರು ಸರಾಗವಾಗಿ ಹರಿಯಲಾಗದೇ ಸುತ್ತಲಿನ ಕೂಟೇಲು ಪರಿಸರ ಎರಡು ಬಾರಿ ಮುಳುಗಡೆಯಾಗಿ ಗ್ರಾಮಸ್ಥರಿಗೆ ತೊಂದರೆಯಾಯಿತು. ಇದಕ್ಕೆ ಪರಿಹಾರ ಹುಡುಕಬೇಕಿದೆ.

ಮಾಯಿಲ ಕೋಟೆಯ ಎಸ್‌ಸಿ ಕಾಲನಿಯಲ್ಲಿ ಕೈಗೆ ಎಟಕುವ ಎತ್ತರದಲ್ಲಿ ವಿದ್ಯುತ್‌ ಲೈನ್‌ ಹಾದುಹೋಗಿದೆ. ಮೆಸ್ಕಾಂ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸಬೇಕಿದೆ. ಜನತಾ ಕಾಲನಿಯಲ್ಲಿ ಅಪಾ ಯಕಾರಿ ಮರವನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಬೇಕಾಗಿದೆ. ಗ್ರಾಮದ ವಿಜಯ ನಗರ, ತಂಬುತ್ತಡ್ಕ, ನುಳಿಯಾಲು, ಸೇರ್ಕಳ ಕೊಡಿ, ಕೊರಂಗಿಲದಲ್ಲಿ ಪ್ರಧಾನ ಮಂತ್ರಿ ಗ್ರಾಮಸಡಕ್‌ ಯೋಜನೆ ಜಾರಿಗೊಳಿಸಿದ್ದು, ಕುಕ್ಕುಪುಣಿ, ಶಾಂತಾದುರ್ಗಾ ದೇವಸ್ಥಾನ ಪಡುಮಲೆ, ಹನುಮಗಿರಿಯಲ್ಲೂ ಸಡಕ್‌ ಯೋಜನೆ ಜಾರಿಗೊಂಡಿದೆ. ಕೋನಡ್ಕ ಎಂಬಲ್ಲಿ ಕಿಂಡಿ ಅಣೆಕಟ್ಟು ಹಾಗೂ ವಿವಿಧೆಡೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲು 90 ಲಕ್ಷ ರೂ. ಅನುದಾನ ದೊರೆಯಬೇಕಿದೆ.

ನೀರಿನಲ್ಲೇ ವಾಹನಗಳನ್ನು ಚಾಲನೆ ಮಾಡಬೇಕಿದೆ

ನಿಡ್ಪಳ್ಳಿಯಿಂದ ದೇವಸ್ಥಾನಕ್ಕೆ ಹೋಗುವ ಕಾಲುದಾರಿಯನ್ನು ಸೇತುವೆ ಕಾಮಗಾರಿಗಾಗಿ ಮುಚ್ಚಲಾಗಿದೆ. ದೇವಸ್ಯದಲ್ಲಿ ನೀರಿನಲ್ಲೇ ವಾಹನಗಳನ್ನು ಚಾಲನೆ ಮಾಡಬೇಕಿದೆ. ಭಾರೀ ಮಳೆ ಸುರಿದರಂತೂ ಗ್ರಾಮ ದ್ವೀಪದಂತಾಗುತ್ತದೆ. ಗ್ರಾಮಕರಣಿಕರ ಕಚೇರಿಯೂ ಬಾಡಿಗೆ ಕಟ್ಟಡದಲ್ಲಿದ್ದು, ನೂತನ ಗ್ರಾಮ ಪಂಚಾಯತ್‌ ಪಕ್ಕದಲ್ಲೇ ಅನುದಾನ ಪಡೆದು ನಿರ್ಮಿಸಿದರೆ ಅನುಕೂಲವಾಗಲಿದೆ.

ಕಾಮಗಾರಿ ನಡೆಯುತ್ತಿದೆ: ಪಂಚಾಯತ್‌ ನೂತನ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ತ್ಯಾಜ್ಯ ಘಟಕಕ್ಕೆ ಜಾಗ ಕಾಯ್ದಿರಿಸಲಾಗಿದೆ.ರಸ್ತೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಲು ಶಾಸಕರ, ಸಂಸದರ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. –ಗೀತಾ ಡಿ., ಅಧ್ಯಕ್ಷರು, ನಿಡ್ಪಳ್ಳಿ ಗ್ರಾ.ಪಂ

ಸುತ್ತು ಬಳಸಿ ಬರಬೇಕಿದೆ: ಸೇತುವೆ, ಕಿಂಡಿ ಅಣೆಕಟ್ಟು ಮುಂತಾದ ಕಾರ್ಯ ನಡೆಯುತ್ತಿದೆ. 3 ತಿಂಗಳಿಂದ ಗ್ರಾಮಕ್ಕೆ ಸುತ್ತು ಬಳಸಿ ಬರುವಂತಾಗಿರುವುದು ಸಮಸ್ಯೆಯೊಡ್ಡಿದೆ. ಜನಪ್ರತಿನಿಧಿಗಳು,ಅಧಿಕಾರಿಗಳು ಕಾಮಗಾರಿ ಆರಂಭಿಸುವಾಗ ಗ್ರಾಮಸ್ಥರ ವಿಶ್ವಾಸ ತೆಗೆದುಕೊಳ್ಳಬೇಕು.ಇಲ್ಲವಾದರೆ ಕಾಮಗಾರಿಯನ್ನು ಅವಧಿಯೊಳಗೆ ಪೂರ್ಣಗೊಳಿಸಬೇಕು. – ನಾಸೀರ್‌, ಸ್ಥಳೀಯ ನಿವಾಸಿ

-ಮಾಧವ ನಾಯಕ್‌ ಕೆ.

 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.