ಭೂತಾನ್‌ನಲ್ಲಿ  ಸ್ಮರಣೀಯ ಗೌರವ


Team Udayavani, May 27, 2018, 4:30 PM IST

27-may-18.jpg

ಬೆಳ್ತಂಗಡಿ : ನೆರೆಯ ರಾಷ್ಟ್ರ ಭೂತಾನ್‌ನಲ್ಲಿ ಮೇ 2 ರಂದು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಮೂಲದ ಶಿಕ್ಷಕ ಎಂ.ಎಸ್‌. ರಮೇಶ್‌ ರಾವ್‌ ಸಹಿತ ದೇಶದ 43 ಮಂದಿ ಶಿಕ್ಷಕರನ್ನು ಗೌರವಿಸಲಾಗಿದೆ. ಇದರಲ್ಲಿ ಕೇರಳದ 28 ಮಂದಿ ಶಿಕ್ಷಕರೂ ಸೇರಿದ್ದಾರೆ. ಉಳಿದವರೆಲ್ಲರೂ ಉತ್ತರ ಭಾರತೀಯರು. ರಾಜ್ಯದಿಂದ ಭಾಗವಹಿಸಿದ ಏಕೈಕ ಪ್ರತಿನಿಧಿ ಎಂ.ಎಸ್‌. ರಮೇಶ್‌ ರಾವ್‌ ಎಂಬುದು ವಿಶೇಷ. ಅವರು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಭಾರತ-ಭೂತಾನ್‌ ದೇಶಗಳ ಮಧುರ ಬಾಂಧವ್ಯದ 50ನೇ ವರ್ಷಾಚರಣೆ ಹಿನ್ನೆಲೆ 5ನೇ ರಾಜ ಜಿಗ್ಮಿ ಗೇಸರ್‌ ನಾಮ್‌ಗೆಲ್‌
ವಾಂಗ್‌ಚುಕ್‌ ಆದೇಶದಂತೆ, ಭಾರತದಿಂದ 1980ರಿಂದ 90ರ ವರೆಗೆ ಭೂತಾನ್‌ಗೆ ತೆರಳಿ 20ರಿಂದ 30 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಅಲ್ಲಿನ ಪ್ರಧಾನಿ ಷೆಲಿಂಗ್‌ ತೊಟ್ಗಿ  ಮೇ 2ರಂದು ಚಾಮ್‌ಲಿಮಿತಾಂಗೆ ಗ್ರೌಂಡ್‌ನ‌ಲ್ಲಿ ಗುರುತಿಸಿ, ಪ್ರಮಾಣ ಪತ್ರ, ಸ್ಮರಣಿಕೆ ನೀಡಿ ವಿಶೇಷವಾಗಿ ಗೌರವಿಸಿದ್ದಾರೆ.

20 ವರ್ಷಗಳ ಸೇವೆ
1983ರಲ್ಲಿ ಮಂಗಳೂರಿನಲ್ಲಿ ಬಿ.ಎಡ್‌. ಶಿಕ್ಷಣ ಮುಗಿಸಿದ ಬಳಿಕ ರಮೇಶ್‌ ಅವರು ವಿವಿಧೆಡೆ ಕೆಲಸಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಚೆನ್ನೈನಲ್ಲಿ ಸಂದರ್ಶನ ಪ್ರಕ್ರಿಯೆ ನಡೆದು ಭೂತಾನ್‌ನಲ್ಲಿ ಕೆಲಸ ಲಭಿಸಿತು. ಆ ವೇಳೆಗೆ 20ರ ಹರೆಯದವರಾದ್ದರಿಂದ ಭೂತಾನ್‌ಗೆ ತೆರಳಿದರು. ಆ ವೇಳೆಗೆ 3 ರೈಲುಗಳನ್ನು ಬಳಸಿಕೊಂಡು ತೆರಳಬೇಕಿತ್ತು. ಆರಂಭದಲ್ಲಿ ಸಂಪರ್ಕ ಎನ್ನುವುದೇ ಅಪರೂಪವಾಗಿತ್ತು. ಸಂದೇಶಗಳನ್ನು ಟೆಲಿಗ್ರಾಂ ಮೂಲಕ ಕಳುಹಿಸಬೇಕಾಗಿದ್ದು, ಅದೂ ಸಮರ್ಪಕವಾಗಿರಲಿಲ್ಲ. ಆರಂಭದಲ್ಲಿ ಪ್ರಾಥಮಿಕ ಶಾಲೆಯಲ್ಲಿ
ಶಿಕ್ಷಕನಾಗಿ ಉದ್ಯೋಗ ಪ್ರಾರಂಭಿಸಿದ್ದು, ಬಳಿಕ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದೆ. 2003ರ ವರೆಗೆ 3 ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದು, ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ಹಿಂದಿರುಗಿದೆ ಎನ್ನುತ್ತಾರೆ ರಮೇಶ್‌ ರಾವ್‌.

ಕಾಡುಪ್ರಾಣಿಗಳ ಭೀತಿ
ಭೂತಾನ್‌ನಲ್ಲಿ ಶಾಲೆಗೆ ಮಕ್ಕಳನ್ನು ಹೆತ್ತವರು ಗುಡ್ಡಗಾಡು ಹತ್ತಿಕೊಂಡು, ನದಿ-ತೊರೆಗಳನ್ನು ದಾಟಿಕೊಂಡು ಬರಬೇಕಾಗಿತ್ತು. ಈ ವೇಳೆಗೆ ಕಾಡು ಪ್ರಾಣಿಗಳೂ ಹೆಚ್ಚಾಗಿರುವುದರಿಂದ ಜಾಗ್ರತೆ ವಹಿಸಬೇಕಾಗಿತ್ತು. ಹಿಮಾಲಯ ಸಮೀಪವಿರುವು ದರಿಂದ ಚಳಿಯ ಪ್ರಮಾಣವೂ ಹೆಚ್ಚಾಗಿದ್ದು, ಮೈನಸ್‌ ಡಿಗ್ರಿಯಲ್ಲಿ ವಾತಾವರಣ ಇರುತ್ತಿದ್ದುದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿತ್ತು. ಆಹಾರವೂ ಹೆಚ್ಚಾಗಿ ಮಾಂಸಾಹಾರ. ನಾನು ಸಸ್ಯಾಹಾರಿಯಾಗಿದ್ದು, ಮನೆಯಲ್ಲಿಯೇ ತಯಾರಿಸಿ ತಿನ್ನಬೇಕಾಗಿತ್ತು.

ಭೂತಾನ್‌ಗೂ ತರಿಸುತ್ತಿದ್ದರು ತರಂಗ, ಉದಯವಾಣಿ
ಉದಯವಾಣಿ ಹಾಗೂ ತರಂಗವನ್ನು ಅಲ್ಲೂ ಓದುತ್ತಿದ್ದೆ. ಆದರೆ ಅಲ್ಲಿಗೆ ತರಿಸುವ ವೇಳೆಗೆ 20 ದಿನಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಗಿತ್ತು. ಆದರೂ ಊರಿನ ಸುದ್ದಿಗಳನ್ನು ಅರಿಯುವ ದೃಷ್ಟಿಯಿಂದ ಓದುತ್ತಿದ್ದೆ.

ಸಂತೋಷದ ಕ್ಷಣ
ತಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾದುದನ್ನು ಸ್ಮರಿಸಿ ಭಾರತೀಯ ಶಿಕ್ಷಕರನ್ನು ಭೂತಾನ್‌ನಲ್ಲಿ ಗುರುತಿಸಿದ್ದು ಸಂತೋಷದ ಕ್ಷಣ. ಅನಿವಾರ್ಯವಾಗಿ ಉದ್ಯೋಗದ ದೃಷ್ಟಿಯಿಂದ ತೆರಳಿದ್ದೆ. ಪ್ರಥಮ ಬಾರಿಗೆ ತೆರಳುವ ವೇಳೆಗೆ ಭೂತಾನ್‌ ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದಿದ್ದು, ಇದೀಗ ಸ್ವಾವಲಂಬಿಯಾಗುವತ್ತ ಮುಂದುವರಿಯುತ್ತಿದೆ. ಅಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಶಿಕ್ಷಕರ ಸಂಖ್ಯೆ ನಾನು ಇರುವ ವೇಳೆಗೆ ಸುಮಾರು 3 ಸಾವಿರದಷ್ಟಿದ್ದು, ಇದೀಗ 143 ಮಂದಿ ಇರುವ ಮಟ್ಟಿಗೆ ಬಂದಿದೆ. ಅಷ್ಟರ ಮಟ್ಟಿಗೆ
ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ. 
– ಎಂ.ಎಸ್‌. ರಮೇಶ್‌ ರಾವ್‌
ಶಿಕ್ಷಕರು

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.