ಐತಿಹಾಸಿಕ ಕ್ಷೇತ್ರ ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನ : ಮೊಬೈಲ್ ನೆಟ್ವರ್ಕ್ ನೋ ಸಿಗ್ನಲ್
Team Udayavani, Jan 20, 2021, 3:20 AM IST
ಕಾಣಿಯೂರು: ಕೋಟಿ ಚೆನ್ನಯರ ಆರಾಧ್ಯಮೂರ್ತಿ ಎಣ್ಮೂರು ಗ್ರಾಮದ ಕೆಮ್ಮಲೆ ಶ್ರೀನಾಗಬ್ರಹ್ಮ ದೇವಸ್ಥಾನ ಐತಿಹಾಸಿ ಕ್ಷೇತ್ರ. ಇಲ್ಲಿಗೆ ಜಿಲ್ಲೆಯ ಜನರಲ್ಲದೆ ಹೊರಜಿಲ್ಲೆಯ ಸಾವಿರಾರು ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆಯುತ್ತಾರೆ. ಇದರ ಸಮೀಪವೇ ಕೋಟಿ-ಚೆನ್ನಯರ ಅಂತ್ಯವಾದ ಸ್ಥಳ ಎಣ್ಮೂರು ಗರಡಿಯೂ ಇದೆ. ಭಕ್ತರು ಆಗಮಿಸುವ ಇಲ್ಲಿ ಯಾವುದೇ ಮೊಬೈಲ್ ನೆಟ್ವರ್ಕ್ ಇಲ್ಲದೇ ಇರುವುದರಿಂದ ಸಂಪರ್ಕ ಕಷ್ಟ ಸಾಧ್ಯವಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಹಳ್ಳಿ-ಹಳ್ಳಿಗೂ ಇಂಟರ್ನೆಟ್ ಕಲ್ಪಿಸುವ ಡಿಜಿಟಲ್ ಇಂಡಿಯಾ ಮೊದಲಾದ ಕಲ್ಪನೆಗೆ ಇದು ದೊಡ್ಡ ಹಿನ್ನಡೆ. ಕೆಮ್ಮಲೆಯಲ್ಲಿ ಹಾಗೂ ಅದರ ಸುತ್ತಮುತ್ತ ಯಾವುದೇ ಸಂಸ್ಥೆಯ ಮೊಬೈಲ್ ನೆಟ್ವರ್ಕ್ ಸಿಗುತ್ತಿಲ್ಲ.ಈ ಭಾಗದ ಜನತೆ ಇಂಟರ್ನೆಟ್ ಸಂಪರ್ಕ ಬೇಕಾದರೆ ದೂರದ ಎಡಮಂಗಲಕ್ಕೆ ಹೋಗಬೇಕಿದೆ. ಕೊರೊನಾ ಸಮಯದಲ್ಲಿ ಈ ಭಾಗದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಾಗಿ ಇಂಟರ್ನೆಟ್ ಸಂಪರ್ಕ ಹುಡುಕಿಕೊಂಡು ದೂರದ ಎಡಮಂಗಲ, ನಿಂತಿಕಲ್ಲಿಗೆ ಹೋಗುತ್ತಿದ್ದರು.
ಐತಿಹಾಸಿಕ ತಾಣ, ಶ್ರದ್ಧಾ ಕೇಂದ್ರಗಳು ಇಲ್ಲಿವೆ :
ಕೆಮ್ಮಲೆ ನಾಗಬ್ರಹ್ಮ ಸನ್ನಿಧಿ ಸೇರಿದಂತೆ ದೈವಸ್ಥಾನಗಳು, ಎಣ್ಮೂರಿನಲ್ಲಿರುವ ಕೋಟಿ-ಚೆನ್ನಯರ ಸಮಾಧಿ ಸ್ಥಳ, ಕೋಟಿ-ಚೆನ್ನಯರ ಅಕ್ಕ ಕಿನ್ನಿದಾರು ಅವರ ಮನೆ ಹೀಗೆ ಪರಿಸರದಲ್ಲಿ ಹತ್ತಾರು ಐತಿಹಾಸಿಕ ಕುರುಹುಗಳು ಇಲ್ಲಿವೆ. ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ನೆಟ್ವರ್ಕ್ ಇಲ್ಲದೇ ಇರುವುದು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಹಾಗೂ ಇಲ್ಲಿನ ಊರಿನವರಿಗೆ ದೊಡ್ಡ ಸಮಸ್ಯೆಯಾಗಿದೆ. ಕೂಡಲೇ ಇಲ್ಲಿ ಮೊಬೈಲ್ ಟವರ್ ನಿರ್ಮಿಸಬೇಕೆಂಬುದು ಇಲ್ಲಿನವರ ಆಗ್ರಹವಾಗಿದೆ.
ವಿವಿಧೆಡೆಯಿಂದ ಭಕ್ತರು ಕೆಮ್ಮಲೆಗೆ ಆಗಮಿಸುತ್ತಾರೆ.ಆದರೆ ಈ ಬಾಗದಲ್ಲಿ ಯಾವುದೇ ಮೊಬೈಲ್ ಸಿಗ್ನಲ್ ದೊರಕುತ್ತಿಲ್ಲ. ಕೂಡಲೇ ಈ ಭಾಗದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಜನಪ್ರತಿನಿಧಿಗಳು, ಮೊಬೈಲ್ ಸಂಸ್ಥೆಯ ಮುಖ್ಯಸ್ಥರು ಗಮನಹರಿಸಬೇಕಾಗಿದೆ.–ಗೋಪಾಲಕೃಷ್ಣ ಐಪಳ, ಕೋಶಾಧಿಕಾರಿ ಜೀರ್ಣೋದ್ಧಾರ ಸಮಿತಿ ಶ್ರೀಕ್ಷೇತ್ರ ಕೆಮ್ಮಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ