ನ.ಪಂ. ಶೆಡ್ನಲ್ಲಿರುವ ಕಸ ತೆರವಿಗೆ ಸೂಚನೆ
ಸುಳ್ಯ ನಗರ ಪಂಚಾಯತ್ ಆವರಣಕ್ಕೆ ಜಿಲ್ಲಾಧಿಕಾರಿ ಭೇಟಿ, ಅಧಿಕಾರಿಗಳ ಸಭೆ
Team Udayavani, Nov 9, 2019, 3:51 AM IST
ಸುಳ್ಯ: ಒಂದು ವರ್ಷದಿಂದ ನ.ಪಂ. ಆವರಣದ ಶೆಡ್ನಲ್ಲಿ ರಾಶಿ ಬಿದ್ದಿರುವ ಕಸವನ್ನು ವಾರದೊಳಗೆ ತೆರವು ಮಾಡುವಂತೆ ನ.ಪಂ. ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಸೂಚನೆ ನೀಡಿದ್ದಾರೆ. ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ನ.ಪಂ. ಅಧಿಕಾರಿಗಳ ಜತೆ ತ್ಯಾಜ್ಯ ಸಮಸ್ಯೆ ಕುರಿತು ಮಾಹಿತಿ ಪಡೆದ ಬಳಿಕ ಖುದ್ದು ನ.ಪಂ. ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿವಿಧ ಕಾರ್ಯಗಳ ನಿಮಿತ್ತ ತಾಲೂಕು ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಗೆ ತಹ ಶೀಲ್ದಾರ್ ಕುಂಞಿ ಅಹಮ್ಮದ್, ನಗರದ ತ್ಯಾಜ್ಯ ವಿಲೇವಾರಿಯಿಂದ ಉಂಟಾ ಗಿರುವ ಸಮಸ್ಯೆ ವಿವರಿಸಿದರು.
ಈ ಸಂದರ್ಭ ನ.ಪಂ. ಮುಖ್ಯಾಧಿಕಾರಿ ಮತ್ತಡಿ ಹಾಗೂ ಎಂಜಿನಿಯರ್ ಶಿವಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅವರು ಕಸ ಸಮಸ್ಯೆ ಕುರಿತು ಪ್ರಸ್ತಾವಿಸಿದರು.
ತತ್ಕ್ಷಣ ಕ್ರಮ ಕೈಗೊಳ್ಳಿ
ಜಿಲ್ಲಾಧಿಕಾರಿ ಅವರು ನ.ಪಂ. ಮುಖ್ಯಾಧಿಕಾರಿ ಅವರಿಂದ ಕಸ ವಿಲೇವಾರಿ ಕುರಿತು ಮಾಹಿತಿ ಪಡೆದು, ಪ್ರತಿದಿನದ ತ್ಯಾಜ್ಯವನ್ನು ಹಸಿ ಕಸ, ಒಣ ಕಸವೆಂದು ಬೇರ್ಪಡಿಸಿ ಸಂಗ್ರಹಿಸಬೇಕು. ಆಯಾ ದಿನ ಸಂಗ್ರಹವಾದ ಕಸವನ್ನು ಆ ದಿನವೇ ವಿಲೇ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ನ.ಪಂ. ಆವರಣದಲ್ಲಿ ಸಂಗ್ರಹಿಸಿಟ್ಟರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಾದ ನಿಮಗೆ ಅರಿವಿರಬೇಕು. ಪ್ರಸ್ತುತ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೀವು ನಿಗದಿ ಮಾಡಿದಂತೆ ಮುಂದುವರಿಯಿರಿ. ಅದನ್ನು ಜಾರಿಗೆ ತಂದು ಕಸದ ಸಮಸ್ಯೆಯನ್ನು ಸರಿಪಡಿಸಿ. ಬರ್ನಿಂಗ್ ಮೆಷಿನ್ ಖರೀದಿಗೆ ನಿರ್ಧರಿಸಿದಂತೆ ಅದನ್ನು ತತ್ಕ್ಷಣ ಪಡೆದು ಕಸ ವಿಲೇಗೆ ಕಾರ್ಯಪ್ರವೃತ್ತರಾಗಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾಧಿಕಾರಿ ಗರಂ
ತಾಲೂಕು ಕಚೇರಿಯಿಂದ ನಗರ ಪಂಚಾಯತ್ಗೆ ಆಗಮಿಸಿದ ಜಿಲ್ಲಾಧಿಕಾರಿ ಕಸದ ರಾಶಿ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳದ್ದಕ್ಕೆ ಗರಂ ಆದ ಅವರು, ವಾರದೊಳಗೆ ಇಲ್ಲಿಂದ ಸೂಕ್ತ ಸ್ಥಳಕ್ಕೆ ವೈಜ್ಞಾನಿಕ ರೀತಿಯಲ್ಲಿ ಕಸ ಸಾಗಿಸುವಂತೆ ನಿರ್ದೇಶನ ನೀಡಿದರು. ನ.ಪಂ. ಸದಸ್ಯ ವಿನಯ ಕುಮಾರ್ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು.
ವಿವಿಧೆಡೆ ಸಿಂಧೂ ರೂಪೇಶ್ ಭೇಟಿ
ಸುಳ್ಯ: ದ.ಕ. ಜಿಲ್ಲಾಧಿಕಾರಿ ಬಿ. ಸಿಂಧೂ ರೂಪೇಶ್ ಶುಕ್ರವಾರ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಟ್ಟಿಪಳ್ಳ ಅಂಗನವಾಡಿ, ಕಲ್ಲುಮುಟ್ಲು ಅಂಗನವಾಡಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿದರು. ಪುಟಾಣಿಗಳೊಂದಿಗೆ ಕೆಲ ಹೊತ್ತು ಕಳೆದರು. ಬಳಿಕ ಕೆರೆಮೂಲೆಯಲ್ಲಿ ಮನೆಗೆ ಭೇಟಿ, ಬೀರಮಂಗಲದಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಹಾನಿಯಾದ ಲಲಿತಾ ಅವರ ಮನೆ ನಿರ್ಮಾಣ ಕಾರ್ಯ ಪರಿಶೀಲನೆ, ಅಜ್ಜಾವರ ಪುರುಷಮ್ಮ ಅವರ ಮನೆ ನಿರ್ಮಾಣ ಕುರಿತು ಪರಿಶೀಲನೆ ನಡೆಸಿದರು. ತಹಶೀಲ್ದಾರ್ ಎನ್.ಎ. ಕುಂಞಿ ಅಹ್ಮದ್, ಗ್ರಾಮಕರಣಿಕ ತಿಪ್ಪೇಶ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ