ಬೆಳ್ತಂಗಡಿಯ ನಾವೂರು ನಿವಾಸಿ ಸೌದಿಯಲ್ಲಿ ಕೋವಿಡ್ಗೆ ಬಲಿ
Team Udayavani, Jun 29, 2020, 3:32 AM IST
ಬೆಳ್ತಂಗಡಿ: ಸೌದಿ ಅರೇಬಿಯಾದ ಜಿಝಾನ್ನ ಪೆಟ್ರೋಫೇಕ್ ಕಂಪೆನಿಯಲ್ಲಿ ಉದ್ಯೋಗಿ ಯಾಗಿದ್ದ ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಕೇಲ್ತಾಜೆ ನಿವಾಸಿ ಅಬ್ದುಲ್ ರಝಾಕ್ ಅವರು ಶ್ವಾಸ ಕೋಶದ ತೊಂದರೆ ಮತ್ತು ಕೋವಿಡ್ -19ಕ್ಕೆ ತುತ್ತಾಗಿ ಜೂ. 28ರಂದು ಮೃತಪಟ್ಟಿದ್ದಾರೆ ಎಂದು ಕುಟುಂಬಕ್ಕೆ ಮಾಹಿತಿ ಲಭ್ಯವಾಗಿದೆ.
ಅಂತ್ಯಸಂಸ್ಕಾರ ವಿಧಿಗಳು ಸೌದಿ ಅರೇಬಿಯಾದಲ್ಲೇ ನಡೆಯಲಿವೆ.