ಚಾಲಕನ ಬದುಕು ಬದಲಿಸಿದ ಹಂದಿ ಸಾಕಣೆ

ಸ್ವಂತ ಉದ್ಯಮಕ್ಕೆ ನರೇಗಾ ಭದ್ರ ಬುನಾದಿ; ವರ್ಷಕ್ಕೆ 3 ಲಕ್ಷ ರೂ. ಆದಾಯ

Team Udayavani, Dec 8, 2021, 5:50 PM IST

ಚಾಲಕನ ಬದುಕು ಬದಲಿಸಿದ ಹಂದಿ ಸಾಕಣೆ

ಬೆಳ್ತಂಗಡಿ: ಮಾಂಸಾಹಾರ ಖಾದ್ಯಗಳ ಬೇಡಿಕೆ ಏರಿಕೆಯಿಂದ ಸದ್ಯ ಮಾಂಸದ ಬೆಲೆ ಏರಿರುವುದಲ್ಲದೆ ಬೇಡಿಕೆಗೆ ತಕ್ಕ ಆಹಾರ ಪೂರೈಸುವುದು ಸವಾಲಾಗಿದೆ. ಅದರಲ್ಲೂ ಹಂದಿ ಮಾಂಸ ದಲ್ಲಂತೂ ಅಪರಿಮಿತವಾದ ಪ್ರೊಟೀನ್‌ ಇರುವುದರಿಂದ ಇತ್ತೀಚೆಗೆ ಹಂದಿ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ. ಆದರೆ ಹಂದಿ ಸಾಕಣಿಕೆಗೆ ಒಲವು ತೋರುವವರ ಸಂಖ್ಯೆ ಇಳಿಕೆಯಾಗಿರುವ ನಡುವೆಯೇ ಪಿಲ್ಯ ಗ್ರಾಮದ ರವಿ ಬಂಗೇರ ಹಂದಿ ಸಾಕಾ ಣಿಕೆಯ ಯಶಸ್ವಿ ಉದ್ಯಮ ನಡೆಸುತ್ತಿದ್ದಾರೆ.

ಟ್ರಾನ್ಸ್‌ಪೊàರ್ಟ್‌ ವೃತ್ತಿ ನಡೆಸುತ್ತಿದ್ದ ರವಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಂದಿ ಶೆಡ್‌ ನಿರ್ಮಿಸಿದ್ದಾರೆ.

ಇವರಿಗೆ ಪತ್ನಿ ಭಾರತಿ ಸಾಥ್‌ ನೀಡಿದ್ದರಿಂದ ಯಶಸ್ಸು ಕಂಡು ಸೊÌàದ್ಯೋಗಿಗಳಿಗೆ ಮಾದರಿಯಾಗಿದ್ದಾರೆ.
ಉದ್ಯಮವೇ ಕೈ ಹಿಡಿಯಿತು

25 ವರ್ಷ ಚಾಲಕರಾಗಿ ಕಾರ್ಯ ನಿರ್ವಹಿಸಿ, ದೇಹ-ಮನಸ್ಸು ಎರಡು ದಣಿದಿತ್ತು. ಮುಂದೇನು ಎಂದು ಯೋಚಿ ಸುತ್ತಿರುವಾಗ ಆಲೋಚನೆಗೆ ಬಂದಿದ್ದು ಹಂದಿ ಸಾಕಾಣೆ. ನರೇಗಾ ಯೋಜನೆಯ ಸೊÌàದ್ಯೋಗ ಅನುದಾನವನ್ನೇ ಬಳಸಿ ಅಳದಂಗಡಿ ಗ್ರಾ.ಪಂ.ಗೆ ಅರ್ಜಿ ನೀಡಿ 22,235 ರೂ. ಕೂಲಿ ಮತ್ತು 8,408 ರೂ. ಸಾಮಗ್ರಿ ಮೊತ್ತ ಪಡೆದು ಸುಮಾರು 10ರಿಂದ 12 ಹಂದಿಗಳನ್ನು ಸಾಕುವಷ್ಟು ಪ್ರಮಾಣದ ಶೆಡ್‌ ನಿರ್ಮಾಣ ಮಾಡಿಕೊಂಡು ಕಾರ್ಯ ಪ್ರವೃತ್ತರಾದರು.

100 ಮರಿವರೆಗೆ ಸಾಕಣೆ
ಹಂದಿ ಸಾಕಣೆ ಉದ್ಯಮದತ್ತ ಒಲವು ತೋರಿದರೂ ಸಾಕಣಿಕೆಯ ಕುರಿತು ನಿಖರವಾದ ಮಾಹಿತಿ ರವಿಯಲ್ಲಿರಲಿಲ್ಲ. ಆರಂಭದಲ್ಲಿ ಖರೀದಿಸಿದ 12 ಮರಿಗಳಲ್ಲಿ 10 ಮರಿ ಸಾವನ್ನಪ್ಪಿದ್ದವು. ಆರಂಭದಲ್ಲೆ ದೊಡ್ಡ ಸವಾಲು ಎದುರಾಗಿತ್ತಾದರೂ ಸವಾಲನ್ನೆ ಮುಂದಡಿಯಾಗಿಸಿ, ಉಳಿದ 2 ಹಂದಿಗಳಿಂದಲೇ ಆರಂಭಿಸಿದ ಉದ್ಯಮ ಇಂದು 100 ಹಂದಿ ಮರಿ ಸಾಕಿ- ಸಲಹುವವರೆಗೆ ಮುಂದುವರಿದಿದೆ.

ಗ್ರಾಹಕರೇ ಬಂದು ಖರೀದಿ
ಮೂರು ವರ್ಷಗಳಿಂದ ಹಂದಿ ಸಾಕಣಿಕೆಯಲ್ಲಿ ತೊಡಗಿಸಿಕೊಂಡಿರುವ ರವಿ ಬಂಗೇರ ಅವರಲ್ಲಿ ಸದ್ಯ 100ರಷ್ಟು ಹಂದಿಗಳಿವೆ. ಈ ವರ್ಷ ಹಂದಿ ಮಾರಾಟ ಮಾಡಿ 3 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಅಚ್ಚುಕಟ್ಟಾಗಿ ಸಾಕಣೆ ಮಾಡುತ್ತಿರುವುದರಿಂದ ಗ್ರಾಹಕರು ಸ್ವತಃ ಬಂದು ಖರೀದಿಗೆ ಮುಂದಾಗುತ್ತಿದ್ದಾರೆ.

ಆದಾಯವು ದ್ವಿಗುಣ
ಉದ್ಯೋಗ ಖಾತರಿ ಯೋಜನೆಯಡಿ ಹಂದಿ ಶೆಡ್‌ ನಿರ್ಮಿಸಲು ಅನುದಾನ ಸಿಗುತ್ತದೆ ಎಂದು ತಿಳಿದು 12 ಹಂದಿ ಮರಿ ಖರೀದಿಸಿ ಒಂದು ಸಣ್ಣ ಶೆಡ್‌ ರಚಿಸಿದೆ. ಅನೇಕ ಸವಾಲು ಎದುರಿಸಿ ಹಂದಿಗಳ ಸಂಖ್ಯೆ ಜತೆಗೆ ಆದಾಯವು ದ್ವಿಗುಣವಾಗಿದೆ.
-ರವಿ ಬಂಗೇರ, ಅಳದಂಗಡಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.