ಬೆಳ್ತಂಗಡಿ : ಅನಗತ್ಯವಾಗಿ ಓಡಾಡುವ ಮಂದಿಗೆ ಪೊಲೀಸ್ ಲಾಠಿ ಬಿಸಿ
Team Udayavani, May 7, 2021, 11:26 AM IST
ಬೆಳ್ತಂಗಡಿ : ದ.ಕ.ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನಲೆ ಜಿಲ್ಲಾಡಳಿತದ ಕಠಿಣ ನಿಯಮದ ನಡುವೆಯೂ ರಸ್ತೆಯಲ್ಲಿ ತಿರುಗಾಡುತ್ತಿರುವ ಮಂದಿಗೆ ಬೆಳ್ತಂಗಡಿ ಪೊಲೀಸರು ಲಾಠಿ ಬಿಸಿ ತೋರಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅನಗತ್ಯ ಸುತ್ತಾಟ ನಡೆಸಿದ ಮಂದಿಗೆ ಪೊಲೀಸರು ಲಾಠಿ ಬಿಸಿ ತೋರಿಸಿದರಲ್ಲದೆ ಮಾಸ್ಕ್ ರಹಿತ, ಸೀಟ್ ಬೆಲ್ಟ್ ಇಲ್ಲದೆ ಓಡಾಟ ನಡೆಸಿದವರಿಗೆ ದಂಡ ಕಟ್ಟೊಲಿಸಲಾಯಿತು.
ಪೊಲೀಸರ ಕಠಿಣ ಕ್ರಮದ ನಡುವೆಯೂ ವಿವಿಧ ಕಾರಣ ನೀಡಿ ತಿರುಗಾಡುತ್ತಿರುವ ಜನರು ಕಂಡುಬಂದರು. ಮುಂಜಾನೆ ಅತೀ ಹೆಚ್ಚು ಸರಕಾರಿ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗುವ ಗಡಿಬಿಡಿಯಲ್ಲಿರುವುದು ಕಂಡುಬಂತು. ಹೀಗಾಗಿ ತಪಾಸಣೆ ವೇಳೆ ವಾಹನಗಳು ಸಾಲು ಸಾಲಾಗಿ ನಿಂತಿರುವುದು ಕಂಡು ಬಂತು.
ಕೋವಿಡ್ ನಿಯಮ ಪಾಲನೆ ಅನಿವಾರ್ಯ. ನಿರ್ಲಕ್ಷ್ಯ ವಹಿಸದವರ ಮೇಲೆ ಕಾನೂನು ಕ್ರಮ ವಹಿಸಲಾಗಿದೆ. ಮುಂಜಾನೆ ಚಿನ್ನಾಭರಣ ಮಳಿಗೆಯೊಂದು 6 ಗಂಟೆಗೆ ಶಟರ್ ಮುಚ್ಚಿ ವ್ಯಾಪಾರ ಮಾಡುತ್ತಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಬೆಳ್ತಂಗಡಿ ಠಾಣೆ ಉಪನಿರೀಕ್ಷಕ ನಂದಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!