ಬಂಟ್ವಾಳ ಡಿವೈಎಸ್ ಪಿ ಪ್ರತಾಪ್ ಅವರಿಗೆ ರಾಷ್ಟ್ರಪತಿ ಪದಕ ಗೌರವ
Team Udayavani, Aug 14, 2022, 6:22 PM IST
ಬಂಟ್ವಾಳ: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ 2022 ರ ರಾಷ್ಟ್ರಪತಿ ಪದಕವನ್ನು ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಥೋರಾಟ್ ಅವರಿಗೆ ನೀಡಲಾಗಿದೆ.
ಸೆಂಟ್ರಲ್ ಕ್ರೈಂ ಬ್ರಾಂಚ್ ನ ಸಂಘಟಿತ ಅಪರಾಧ ದಳ ಬೆಂಗಳೂರಿನಲ್ಲಿ ಸುಮಾರು 6 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ ಇವರು ಅನೇಕ ಪ್ರಕರಣಗಳನ್ನು ಛೇದಿಸುವ ಮೂಲಕ ಇಲಾಖೆಯ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜೊತೆಗೆ ಇಂಟರನಲ್ ಸೆಕ್ಯುರಿಟಿ ಡಿವಿಷನ್ ವಿಂಗ್ ನಲ್ಲಿ ಕೂಡ ಇವರು ಸೇವೆ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಮಾಡಿದ ಉನ್ನತ ಸೇವೆಗಾಗಿ ಇವರಿಗೆ 2022 ರ ರಾಷ್ಟ್ರಪತಿ ಪದಕವನ್ನು ನೀಡಲಾಗುತ್ತಿದೆ.
ಪದಕವನ್ನು ಬೆಂಗಳೂರಿನಲ್ಲಿ ಅಥವಾ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. ದಿನ ನಿಗದಿ ಇನ್ನಷ್ಟೇ ಆಗಬೇಕಾಗಿದೆ.
ಪ್ರಸ್ತುತ ಬಂಟ್ವಾಳ ಸಬ್ ಡಿವಿಜನ್ ನಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ಮಾಡುತ್ತಿದ್ದಾರೆ.