ಯುವಕನಿಂದ ಮಹಿಳೆಯ ರಕ್ಷಣೆ
ಸಜೀಪಮೂಡದ ಕೊಳಕೆಯಲ್ಲಿ ಕೆರೆಗೆ ಬಿದ್ದು ಅಪಾಯದಲ್ಲಿದ್ದ ಮಹಿಳೆ
Team Udayavani, Jul 19, 2019, 5:00 AM IST
ಬಂಟ್ವಾಳ: ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಹಿಳೆಯೊಬ್ಬರನ್ನು ಸ್ಥಳೀಯ ಯುವಕನೊಬ್ಬ ರಕ್ಷಿಸಿದ ಘಟನೆ ಜು. 17ರಂದು ಸಜೀಪಮೂಡ ಗ್ರಾಮದ ಕೊಳಕೆಯಲ್ಲಿ ನಡೆದಿದೆ.
ಕೊಳಕೆ ನಿವಾಸಿ ದಿವಾಕರ ಅವರ ತಾಯಿ ಪಾರ್ವತಿ (62) ಕೆರೆಗೆ ಬಿದ್ದಿದ್ದು, ಈ ಸಂದರ್ಭ ಮನೆಮಂದಿ ಇರಲಿಲ್ಲ ಎನ್ನಲಾಗಿದೆ. ಮಹಿಳೆ ಕೆರೆಗೆ ಬಿದ್ದುದನ್ನು ಕಂಡ ಕೆಲವರು ಬೊಬ್ಬೆ ಹೊಡೆದಿದ್ದು, ಆಗ ಸಮೀಪ ಅಂಗಡಿಯಲ್ಲಿದ್ದ ಸಿದ್ದಿಕ್ ಕೊಳಕೆ ಅವರು ಧಾವಿಸಿ ಬಂದು ಕೆರೆಗೆ ಧುಮುಕಿ ಪಾರ್ವತಿಯನ್ನು ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿದ್ದಿಕ್ ಸಮಯ ಪ್ರಜ್ಞೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!