ಬಸ್ ನಲ್ಲಿ ಪರ್ಸ್ ಕಳವುಗೈದ ಕಳ್ಳಿ: ಸಿಸಿ ಕೆಮಾರದಲ್ಲಿ ದೃಶ್ಯ ಸೆರೆ
Team Udayavani, Sep 20, 2022, 8:46 PM IST
ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಬರುತಿದ್ದ ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕೆಯ ಪರ್ಸ್ ಅನ್ನು ಕಳ್ಳಿಯೋರ್ವಳು ಎಗರಿಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಪುತ್ತೂರು ತಾ.ಪಂ.ನಲ್ಲಿ ಯೋಜನಾಧಿಕಾರಿಯಾಗಿರುವ ಸುಕನ್ಯಾ ಅವರ ಪರ್ಸ್ ಕಳವು ಮಾಡಲಾಗಿದೆ. ಕಳವು ದೃಶ್ಯ ಬಸ್ ನ ಸಿಸಿ ಕೆಮಾರದಲ್ಲಿ ಸೆರೆಯಾಗಿದೆ.
ಬೆಳಗ್ಗೆ ಮಂಗಳೂರಿನಿಂದ ಮಹೇಶ್ ಖಾಸಗಿ ಬಸ್ ನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಬೊಳುವಾರು ಸಮೀಪದ ಸೇತುವೆ ಹತ್ತಿರ ಕಳ್ಳಿ ಪರ್ಸ್ ಎಗರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಐವತ್ತು ವರ್ಷದೊಳಗಿನ ಮಹಿಳೆಯು ಕಲ್ಲಡ್ಕ ಬಳಿ ಬಸ್ ಹತ್ತಿ ಸುಕನ್ಯಾ ಅವರ ಬಳಿಯ ಸೀಟಿನಲ್ಲಿ ಕುಳಿತಿದ್ದರು. ಪುತ್ತೂರು ಪೇಟೆ ಸಮೀಪಿಸಿದ ಕಾರಣ ಸುಕನ್ಯಾ ಅವರು ತನ್ನ ಕೈಯಲ್ಲಿದ್ದ ಮೊಬೈಲ್ ಅನ್ನು ಬ್ಯಾಗ್ ನೊಳಗೆ ಹಾಕಿ ಇಳಿಯಲೆಂದು ಎದ್ದು ನಿಂತಿದ್ದರು. ಈ ವೇಳೆ ಕಳ್ಳಿ ಬ್ಯಾಗ್ ಗೆ ಕೈ ಹಾಕಿ ಪರ್ಸ್ ಎಗರಿಸಿದ್ದಾರೆ. ಈಕೆಯ ವರ್ತನೆ ನೋಡುವಾಗ ಮೊಬೈಲ್ ಕಳ್ಳತನಕ್ಕೆ ಯತ್ನಿಸಿ ಅದು ಸಿಗದೆ ಇದ್ದಾಗ ಕೈಗೆ ಸಿಕ್ಕ ಪರ್ಸ್ ಎಗರಿಸಿದ್ದಾಳೆ. ಈಕೆ ಕಳ್ಳತನದ ಗ್ಯಾಂಗ್ ನ ಸದಸ್ಯೆ ಆಗಿರುವ ಶಂಕೆ ವ್ಯಕ್ತವಾಗಿದೆ.
ಬಸ್ ನಿಂದ ಇಳಿದ ವೇಳೆ ಸುಕನ್ಯಾ ಅವರಿಗೆ ಪರ್ಸ್ ಕಳ್ಳತನ ವಾಗಿರುವ ವಿಷಯ ಬೆಳಕಿಗೆ ಬಂದು ಬಸ್ ಅನ್ನು ಸಂಪರ್ಕಿಸಿದ್ದಾರೆ. ಬಸ್ ಸಿಸಿ ಕೆಮಾರ ಪರಿಶೀಲಿಸಿದಾಗ ಕಳ್ಳಿಯ ಕರಾಮತ್ತು ಬಯಲಾಗಿದೆ. ಪರ್ಸ್ ನಲ್ಲಿ ಐದು ಸಾವಿರ ರೂ.ನಗದು, ದಾಖಲೆ ಪತ್ರಗಳಿತ್ತು. ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ