ಪುತ್ತೂರು ಐತಿಹಾಸಿಕ ವಾರದ ಸಂತೆಗೆ ಬೀದಿಯೇ ಗತಿ

ಸಂತೆಕಟ್ಟೆ ಕನಸು ಭಗ್ನ; ಒಂದು ಕೋಟಿ ರೂ. ಎತ್ತಂಗಡಿ

Team Udayavani, Sep 10, 2020, 4:16 AM IST

ಪುತ್ತೂರು ಐತಿಹಾಸಿಕ ವಾರದ ಸಂತೆಗೆ ಬೀದಿಯೇ ಗತಿ

ಕಿಲ್ಲೆ ಮೈದಾನ

ಪುತ್ತೂರು: ಸಂತೆಕಟ್ಟೆ ನಿರ್ಮಾಣಕ್ಕೆಂದು ಸ್ಥಳ ಕಾದಿರಿಸಿ, ಅನುದಾನ ಮೀಸಲಿಟ್ಟು ಮೂರು ವರ್ಷಗಳಾಯಿತು. ಆ ಕನಸು ಭಗ್ನ ಆಗಿದ್ದು, ಬೀದಿಯಲ್ಲೇ ಸಂತೆ ಉಳಿದುಕೊಳ್ಳಲಿದೆ. ಒಂದು ಕೋಟಿ ರೂ. ಸದ್ದಿಲ್ಲದೆ ಎತ್ತಂಗಡಿ ಯಾಗಿದೆ. ಮೀಸಲಿಟ್ಟ ಜಮೀನು ಕೂಡ ರೂಪಾಂತರಗೊಂಡಿದೆ. ಈ ಮೂಲಕ, ಶತಮಾನದ ಇತಿಹಾಸವಿರುವ ವಾರದ ಸಂತೆಗೆ ಶಾಶ್ವತ ಸಂತೆ ಮಾರುಕಟ್ಟೆ ಮಾಡುವ ಕನಸು ಕಮರಿದೆ.

ಪುತ್ತೂರು ಸಂತೆ
ಪುತ್ತೂರಿನ ಸೋಮವಾರದ ಸಂತೆ ಹತ್ತೂರಿಗೆ ಪ್ರಸಿದ್ಧಿ. ಆರ್ಥಿಕ ಚಟುವಟಿಕೆ ಮೇಲೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ಸಂತೆ ಕೊರೊನಾ ಲಾಕ್‌ಡೌನ್‌ ಬಳಿಕ ಆರಂಭಗೊಂಡಿಲ್ಲ. ಸುಮಾರು 100 ವರ್ಷಗಳಿಂದ ನಡೆಯುತ್ತಿದ್ದ ಸಂತೆಯ ಸ್ಥಳದಲ್ಲಿ 2002ರ ಬಳಿಕ ಅಂದಿನ ಪುರಸಭೆಗೆ ನೂತನ ಆಡಳಿತ ಕಟ್ಟಡ ಕಟ್ಟಲು ಆರಂಭಿಸಿದ ಕಾರಣ ಸಂತೆಯನ್ನು ತಾತ್ಕಾಲಿಕವಾಗಿ ಕಿಲ್ಲೆ ಮೈದಾನಕ್ಕೆ ಸ್ಥಳಾಂತರಿಸಲಾಯಿತು. ಕಟ್ಟಡ ನಿರ್ಮಾಣಗೊಂಡ ಬಳಿಕ ಪುರಸಭೆ ಆಡಳಿತ ಕಚೇರಿ ಅಲ್ಲೇ ಉಳಿದು, ಸಂತೆ ಮೈದಾನದಲ್ಲೇ ಉಳಿಯಿತು. 2016ರ ಆ. 11ರಂದು ಅಂದಿನ ಎ.ಸಿ. ಅವರ ಆದೇಶದಂತೆ ಸಂತೆಯನ್ನು ಎಪಿಎಂಸಿ ಯಾರ್ಡ್‌ ಗೆ ಸ್ಥಳಾಂತರಿಸಲಾಗಿತ್ತು. ಇದರ ವಿರುದ್ಧ ನಡೆದ ನಿರಂತರ ಹೋರಾಟದ ಫಲವಾಗಿ ಐದೇ ತಿಂಗಳಲ್ಲಿ ಮತ್ತೆ ಸಂತೆ ಕಿಲ್ಲೆ ಮೈದಾನಕ್ಕೆ ಮರಳಿತ್ತು. ಈ ನಡುವೆ ನಗರಸಭೆಯ ವಾರದ ಸಂತೆಯ 150ರಿಂದ 200 ವರ್ತಕರು ಮತ್ತು ಸಾವಿರಾರು ಗ್ರಾಹಕರಿಗಾಗಿ ಶಾಶ್ವತ ಸಂತೆ ಮಾರುಕಟ್ಟೆ ನಿರ್ಮಿಸುವ ಯೋಜನೆಯೂ ನನೆಗುದಿಗೆ ಬಿದ್ದಿದೆ. ಸಂತೆ ನಿರ್ಮಾಣಕ್ಕಾಗಿ ಯೋಜಿಸಿದ್ದ ಜಮೀನು ಹಾಗೂ ಅನುದಾನ ಅನ್ಯ ಬಳಕೆಗೆ ರೂಪಾಂತರಗೊಂಡಿದೆ.

ಹೇಗಿತ್ತು ಯೋಜನೆ ?
ಮಿನಿ ವಿಧಾನಸೌಧದ ಬಳಿಯ ಹಳೆ ಪುರಸಭಾ ಕಚೇರಿ ಸ್ಥಳದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲು ಹಿಂದಿನ ಜಯಂತಿ ಬಲಾ°ಡ್‌ ಅಧ್ಯಕ್ಷತೆಯ ನಗರಸಭಾ ಆಡಳಿತ ತೀರ್ಮಾನಿಸಿತ್ತು. ನಗರೋತ್ಥಾನ ಯೋಜನೆಯಲ್ಲಿ ಪುತ್ತೂರಿಗೆ ಮಂಜೂರಾಗಿದ್ದ 25 ಕೋಟಿ ರೂ.ಗಳಲ್ಲಿ 1 ಕೋಟಿ ರೂ.ಗಳನ್ನು ಮಾರುಕಟ್ಟೆ ನಿರ್ಮಾಣಕ್ಕೆಂದೇ ಮೀಸಲಿರಿಸಲಾಗಿತ್ತು. ನಗರೋತ್ಥಾನದ ಹಣದಲ್ಲಿ ಕಿಲ್ಲೆ ಮೈದಾನ ನವೀಕರಣವೂ ಕಳೆದ ಜನವರಿ ವೇಳೆಗೆ ಪೂರ್ಣಗೊಂಡಿದ್ದು, ಇಲ್ಲಿ ಸಂತೆ ನಡೆಸುವುದು ಕಷ್ಟ ಎಂಬ ಭಾವನೆ ಇರುವಾಗಲೇ ಲಾಕ್‌ಡೌನ್‌ ಸಂತೆಗೆ ಬರೆ ಎಳೆದಿತ್ತು. ಈ ನಡುವೆ, ಸಂತೆಗೆಂದು ಯೋಜಿಸಿದ್ದ ಸ್ಥಳದಲ್ಲಿ ಇದೀಗ ನಗರಸಭೆಗೆ ಹೊಸ ಆಡಳಿತ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಸಂತೆಗೆಂದು ತೆಗೆದಿರಿಸಿದ್ದ 1 ಕೋಟಿ ರೂ. ಅನ್ನೂ ಈ ಕಟ್ಟಡಕ್ಕೆಂದು ಬಳಸಲಾಗುತ್ತಿದೆ. ಸಂತೆಗೆ ಅನುಮತಿ ನೀಡಿದರೂ ಯಥಾಪ್ರಕಾರ ಮೈದಾನದಲ್ಲೇ ನಡೆಸಬೇಕಾದ ಅನಿವಾರ್ಯ. ಲಕ್ಷಾಂತರ ರೂ. ವೆಚ್ಚ ಮಾಡಿ ನವೀಕರಿಸಿದ ಮೈದಾನದಲ್ಲಿ ಇನ್ನೆಷ್ಟು ಸಮಯ ಸಂತೆ ನಡೆಸಲು ಸಾಧ್ಯ ಎಂಬ ಜನರ ಪ್ರಶ್ನೆಗೆ ಉತ್ತರವಿಲ್ಲ.

ಸಂತೆ ಮುಗಿಸುವ ಪ್ರಯತ್ನ
ವಾರದ ಸಂತೆಗೆ ಶತಮಾನದ ಇತಿಹಾಸವಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಶಾಶ್ವತ ಸಂತೆಕಟ್ಟೆ ನಿರ್ಮಿಸಲು ಅಂದಿನ ಆಡಳಿತ 1 ಕೋಟಿ ರೂ. ಯೋಜನೆ ರೂಪಿಸಿತ್ತು. ಸ್ಥಳ ಆಯ್ಕೆಯನ್ನೂ ಮಾಡಿದ್ದೆವು. ಈಗ ಎರಡನ್ನೂ ಬದಲಾಯಿಸಲಾಗಿದ್ದು, ತೀರ್ಮಾನದ ಹಿಂದೆ ಐತಿಹಾಸಿಕ ಸೋಮವಾರದ ಸಂತೆಯನ್ನೇ ಶಾಶ್ವತವಾಗಿ ಇಲ್ಲವಾಗಿಸುವ ಷಡ್ಯಂತ್ರವಿದೆ. ಹಿಂದೆ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿದಾಗ ಹೋರಾಟ ಮಾಡಿದವರು ಈಗ ಮೌನವಾಗಿದ್ದಾರೆ.
-ಎಚ್‌. ಮಹಮ್ಮದ್‌ ಆಲಿ ಮಾಜಿ ಸದಸ್ಯರು, ಪುತ್ತೂರು ನಗರಸಭೆ

ಯೋಜನೆ ಇಲ್ಲ
ಸಂತೆಕಟ್ಟೆ ಹೊಸದಾಗಿ ನಿರ್ಮಿಸುವ ಬಗ್ಗೆ ಯಾವುದೇ ಯೋಜನೆ ಇಲ್ಲ. ಆ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ.
-ರೂಪಾ ಶೆಟ್ಟಿ , ಪೌರಾಯುಕ್ತೆ, ನಗರಸಭೆ ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.