ಪುರಸಭೆ ವ್ಯಾಪ್ತಿಯ ಅನಧಿಕೃತ ನೀರಿನ ಸಂಪರ್ಕ ಕಡಿತಕ್ಕೆ ಆಗ್ರಹ

ಬಂಟ್ವಾಳ ಪುರಸಭೆ ಸಾಮಾನ್ಯ ಸಭೆ

Team Udayavani, Sep 29, 2021, 5:56 AM IST

ಪುರಸಭೆ ವ್ಯಾಪ್ತಿಯ ಅನಧಿಕೃತ ನೀರಿನ ಸಂಪರ್ಕ ಕಡಿತಕ್ಕೆ ಆಗ್ರಹ

ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ನೀರಿನ ಸಂಪರ್ಕ ಕಡಿತ ಮಾಡುವ ಕುರಿತು ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಎಲ್ಲ ಅನಧಿಕೃತ ಸಂಪರ್ಕಗಳನ್ನು ಕಡಿತ ಮಾಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

ಸಾಮಾನ್ಯ ಸಭೆಯು ಪುರಸಭಾಧ್ಯಕ್ಷ ಮಹಮ್ಮದ್‌ ಶರೀಫ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯ ವಾಸು ಪೂಜಾರಿ ಅವರು ವಿಷಯ ಪ್ರಸ್ತಾಪಿಸಿ, ಕಳೆದ ಹಲವು ಸಮಯಗಳಿಂದ ಅನಧಿಕೃತ ನೀರಿನ ಸಂಪರ್ಕ ಕಡಿತದ ಕುರಿತು ಪ್ರಸ್ತಾವಿಸಲಾಗುತ್ತಿದೆ. ಅದರ ವಿಚಾರ ಏನಾಯಿತು ಎಂದು ಪ್ರಶ್ನಿಸಿದರು. ಈ ವೇಳೆ ಸಂಬಂಧಪಟ್ಟ ಸಿಬಂದಿ ಉತ್ತರಿಸಿ, ಅನಧಿಕೃತ ಸಂಪರ್ಕ ಕಡಿತ ಕಾರ್ಯ ಪ್ರಗತಿಯಲ್ಲಿದ್ದು, ಕಡಿತದ ನಿರ್ದಿಷ್ಟ ಸಂಖ್ಯೆ ಲಭಿಸಿಲ್ಲ ಎಂದರು. ಈ ವೇಳೆ ಎಲ್ಲ ಅನಧಿಕೃತ ಸಂಪರ್ಕಗಳನ್ನು ಕಡಿತ ಮಾಡುವಂತೆ ಅಧ್ಯಕ್ಷರು ಸೂಚಿಸಿದರು.

ಪೌರ ಕಾರ್ಮಿಕರಿಗೆ ಅವಮಾನ
ಬಂಟ್ವಾಳ ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನವನ್ನು ಆಚರಿಸದೆ ಅವರಿಗೆ ಕೇವಲ ಊಟ ಕೊಟ್ಟು ಅವಮಾನ ಮಾಡ ಲಾಗಿದೆ. ಜತೆಗೆ ಅದನ್ನು ಪುರಸಭೆ ಸದಸ್ಯರಿಗೂ ತಿಳಿಸಿಲ್ಲ ಎಂದು ಸದಸ್ಯರು ಅಧಿಕಾರಿ ವರ್ಗ ವನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯ ಜನಾರ್ದನ ಚಂಡ್ತಿಮಾರ್‌ ಅವರು ವಿಷಯ ಪ್ರಸ್ತಾವಿಸಿ, ವರ್ಷವಿಡಿ ಪುರಸಭೆಯ ಸ್ವತ್ಛತೆ ಕಾಪಾಡುವ ಪೌರ ಕಾರ್ಮಿಕರಿಗೆ ಒಂದು ದಿನ ಗೌರವ ಸಲ್ಲಿಸಲು ನಮಗೆ ಸಾಧ್ಯ ವಾಗದೇ ಇರುವುದು ವಿಷಾದನೀಯ. ಎಲ್ಲ ಕಡೆ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪೌರ ಕಾರ್ಮಿಕ ದಿನವನ್ನು ಆಚರಿಸಲಾಗಿದೆ. ಇಲ್ಲಿ ಇದು ಪೌರ ಕಾರ್ಮಿಕರಿಗೆ ಮಾಡಿರುವ ಅವಮಾನ ಎಂದರು.

ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸ್ಪಷ್ಟನೆ ನೀಡಿ, ಪೌರ ಕಾರ್ಮಿಕರ ದಿನಾಚರಣೆಗೆ ಅನುದಾನ ಬಳಕೆಗೆ ಅನುಮತಿ ಸಿಗದೇ ಇರು ವುದರಿಂದ ಆಚರಿಸಿಲ್ಲ ಎಂದರು. ಇದರಿಂದ ಗರಂ ಆದ ಚಂಡ್ತಿಮಾರ್‌ ಅವರು, ಅನು ದಾನ ಇಲ್ಲದೇ ಇದ್ದರೆ ಅದನ್ನು ಸದಸ್ಯರ ಗಮನಕ್ಕೆ ತರಬೇಕಿತ್ತು. ನಾವು ಹೇಗಾದರೂ ಮಾಡಿ ಆಚರಿಸುತ್ತಿದ್ದೆವು ಎಂದರು. ಮುಂದಿನ ಆಯುಧ ಪೂಜೆಯ ಸಂದರ್ಭ ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯ ನಡೆಸೋಣ ಎಂದು ಅಧ್ಯಕ್ಷರು ಭರವಸೆ ನೀಡಿದ ಬಳಿಕ ಚರ್ಚೆ ತಿಳಿಯಾಯಿತು.

ಇದನ್ನೂ ಓದಿ:ಸಿಆರ್‌ಝಡ್‌ ಅಧಿಸೂಚನೆ 2019ರಲ್ಲಿ ಹೆಚ್ಚಿನ ಚಟುವಟಿಕೆಗೆ ಅವಕಾಶ: ಡಿಸಿ

ಧರ್ಮದ ಹೆಸರು ಬಳಕೆಗೆ ಆಕ್ಷೇಪ
ಪುರಸಭೆಯ ಪೌರ ಕಾರ್ಮಿಕರಿಗೆ ಬಿರಿ ಯಾನಿ ತರಿಸಿರುವ ವಿಚಾರಕ್ಕೆ ಸಂಬಂಧಿಸಿ ಮುಖ್ಯಾಧಿಕಾರಿಯವರು ಧರ್ಮದ ವಿಚಾರ ತಂದು ಮುಸ್ಲಿಂ ಎಂಬ ಪದಬಳಕೆ ಮಾಡಿದ್ದಾರೆ ಎಂದು ಸದಸ್ಯರಾದ ಮುನೀಶ್‌ ಆಲಿ, ಅಬೂಬಕ್ಕರ್‌ ಸಿದ್ದಿಕ್‌, ಇದ್ರಿಸ್‌ ಪಿ.ಜೆ., ಹಸೈನಾರ್‌ ಆಕ್ಷೇಪ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಈ ವಿಚಾರದ ಕುರಿತು ಸುದೀರ್ಘ‌ ಚರ್ಚೆ ನಡೆಯಿತು. ಈ ವೇಳೆ ಮುಖ್ಯಾಧಿಕಾರಿಯವರು ಸ್ಪಷ್ಟನೆ ನೀಡಿ ತಾನು ಯಾರಿಗೂ ಅವಮಾನ ಮಾಡಿಲ್ಲ, ಬಿರಿಯಾನಿ ಬೇಡ, ಊಟ ಕೊಡೋಣ ಎಂದು ಹೇಳಿದ್ದೆ. ಬಿರಿಯಾನಿ ತರಿಸಿರುವುದಕ್ಕೆ ಆಕ್ಷೇಪ ಎತ್ತಿದ್ದೇವೆ. ತನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ ಬಳಿಕ ಸಭೆ ಮುಂದುವರಿಯಿತು.

ಅಧ್ಯಕ್ಷರ ಗಮನಕ್ಕೆ ಬರುವುದಿಲ್ಲ
ಪುರಸಭೆಯ ಬಿಲ್ಲು ಪಾವತಿಯ ವಿಚಾರ ಗಳು ಅಧ್ಯಕ್ಷರ ಗಮನಕ್ಕೆ ಬರುವುದಿಲ್ಲವೇ ಎಂದು ಸದಸ್ಯ ಗೋವಿಂದ ಪ್ರಭು ಅವರು ಕೇಳಿದಾಗ, ನನ್ನ ಬಳಿ ಯಾವ ಬಿಲ್ಲು ಪಾವತಿಯ ವಿಚಾರವೂ ಬರುವುದಿಲ್ಲ ಎಂದರು. ಬಿಲ್ಲು ಪಾವತಿಯ ವಿಚಾರ ಅಧ್ಯಕ್ಷರ ಬಳಿ ಬರುವುದಿಲ್ಲ ಎಂದು ಅಧಿ ಕಾರಿಗಳು ಸದಸ್ಯರಿಗೆ ತಿಳಿಸಬೇಕು ಎಂದು ಸದಸ್ಯ ಹಸೈನಾರ್‌ ಆಗ್ರಹಿಸಿದರು. ಜತೆಗೆ ಮುಂದಿನ ದಿನಗಳಲ್ಲಿ ಬಿಲ್ಲು ಪಾವತಿ ವಿಚಾರಗಳನ್ನು ಅಧ್ಯಕ್ಷರ ಗಮನಕ್ಕೆ ತಂದೇ ಮುಂದುವರಿಯಬೇಕು ಎಂದು ಸದಸ್ಯ ಸಿದ್ದಿಕ್‌ ಆಗ್ರಹಿಸಿದರು.

ಪುರಸಭೆ ವ್ಯಾಪ್ತಿಯ ಬೀದಿದೀಪಗಳ ಅಳವಡಿಕೆಯ ವಿಚಾರದಲ್ಲಿ ಸಾಕಷ್ಟು ಚರ್ಚೆ ಗಳು ನಡೆಯಿತು. ಗುತ್ತಿಗೆದಾರರು ಕಡಿಮೆ ಗುಣಮಟ್ಟದ ಬಲ್ಬ್ಗಳನ್ನು ಅಳವಡಿ ಸುತ್ತಿದ್ದಾರೆ. ಸೋಡಿಯಂ ಬಲ್ಬ್ಗಳನ್ನು ಹಾಕುತ್ತಿಲ್ಲ. ದುಬಾರಿ ವೆಚ್ಚ ಮಾಡಿದ ಬಳಿಕ ಸರಿಯಾಗಿ ಉರಿಯಬೇಕಲ್ಲವೇ ಎಂದು ಗೋವಿಂದ ಪ್ರಭು ಕೇಳಿದರು.

ಪುರಸಭೆ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸದೆ ಇರುವ ವ್ಯಕ್ತಿಗೆ ಲೈಸನ್ಸ್‌ ನೀಡಿರುವ ಕುರಿತು ಸದಸ್ಯರಾದ ಗೋವಿಂದ ಪ್ರಭು, ವಿದ್ಯಾವತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಕಂದಾಯ ಅಧಿಕಾರಿ ಗಳು ಮಾತನಾಡಿ, ಅದು ಹಿಂದಿನ ಮುಖ್ಯಾಧಿಕಾರಿ ಅವರು ಇರುವಾಗ ನೀಡಲಾಗಿದೆ ಎಂದರು. ಜತೆಗೆ ವಿದ್ಯುತ್‌ ಸಂಪರ್ಕಕ್ಕೆ ಮೆಸ್ಕಾಂಗೆ ಎನ್‌ಒಸಿ ನೀಡಿರುವುದಕ್ಕೂ ಆಕ್ಷೇಪ ವ್ಯಕ್ತ ಪಡಿಸಲಾಯಿತು. ತೆರಿಗೆ ಪಾವತಿಸದೇ ಇದ್ದರೆ ಲೈಸನ್ಸ್‌ ರದ್ದು ಮಾಡುವಂತೆ ಅಧ್ಯಕ್ಷರು ಸೂಚಿಸಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜಾ, ಸದಸ್ಯರು ಪಾಲ್ಗೊಂಡಿದ್ದರು.

ಅನುದಾನ ಹಂಚಿಕೆಗೆ ಆಕ್ಷೇಪ
ಪುರಸಭೆಯ 2021-22ನೇ ಸಾಲಿನ 15ನೇ ಹಣಕಾಸು ಆಯೋಗ ಅನುದಾನದ ಕಾಮಗಾರಿಗಳ ಕ್ರಿಯಾಯೋಜನೆಯ ಕುರಿತು ಸದಸ್ಯ ಹರಿಪ್ರಸಾದ್‌ ಆಕ್ಷೇಪ ವ್ಯಕ್ತಪಡಿಸಿ, ಆದ್ಯತೆಯ ಕಾಮಗಾರಿಯ ಬದಲು ಅಧ್ಯಕ್ಷರು ತಮಗೆ ಬೇಕಾದ ಸದಸ್ಯರಿಗೆ ಬೇಕಾದ ಹಾಗೆ ಅನುದಾನ ನೀಡಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ರಾಮಕೃಷ್ಣ ಆಳ್ವ ಮಧ್ಯೆ ಪ್ರವೇಶಿಸಿದಾಗ, ತಾವು ಮಾಜಿ ಅಧ್ಯಕ್ಷರ ಬಳಿ ಮಾತನಾಡಿಲ್ಲ. ಅಧ್ಯಕ್ಷರ ಬಳಿ ಮಾತನಾಡಿದ್ದೇವೆ ಎಂದು ಸದಸ್ಯರಾದ ಹರಿಪ್ರಸಾದ್‌, ಜಯರಾಮ್‌ ವಾದಿಸಿದರು.

ಈ ವೇಳೆ ಕಾಂಗ್ರೆಸ್‌-ಬಿಜೆಪಿ ಸದಸ್ಯರ ಮಧ್ಯೆ ವಾಕ್ಸಮರ ನಡೆಯಿತು. ಜತೆಗೆ ರಾಮಕೃಷ್ಣ ಆಳ್ವ ಅವರು ಚರ್ಚೆಯ ವೇಳೆ ಗೋವಿಂದ ಪ್ರಭು ಅವರನ್ನು ಏಕವಚನದಲ್ಲಿ ಮಾತನಾಡಿಸಿದರು ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.

ನೀರಿನ ಶುಲ್ಕ ದುಬಾರಿ
ಈಗಿನ ವ್ಯವಸ್ಥೆಯಲ್ಲಿ ನೀರಿನ ಸಂಪರ್ಕಕ್ಕೆ ಮೀಟರ್‌ ಅಳವಡಿಸಿದ ಬಳಿಕ ಶುಲ್ಕ 3ರಿಂದ 4 ಸಾವಿರ ರೂ.ಬರುತ್ತಿದ್ದು, ತನ್ನ ವಾರ್ಡ್‌ನಲ್ಲೇ 10 ದೂರುಗಳು ಬಂದಿದೆ ಎಂದು ಸದಸ್ಯ ಜನಾರ್ದನ ಚಂಡ್ತಿಮಾರ್‌ ತಿಳಿಸಿದರು. ಶುಲ್ಕ ಅಧಿಕ ಬಂದಿರುವ ಕುರಿತು ಸಂಬಂಧಪಟ್ಟ ನಗರ ನೀರು ಸರಬರಾಜು ಮಂಡಳಿಗೆ ತಿಳಿಸುತ್ತೇವೆ. ಅವರು ಪರಿಶೀಲನೆ ನಡೆಸುತ್ತಾರೆ ಎಂದು ಮುಖ್ಯಾಧಿಕಾರಿ ಉತ್ತರಿಸಿದರು.

ಟಾಪ್ ನ್ಯೂಸ್

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.