ಉಪ್ಪಿನಂಗಡಿ: ಮನೆಯ ಹೆಂಚು ಸರಿಸಿ ದರೋಡೆಗೆ ವಿಫಲಯತ್ನ!
Team Udayavani, Mar 27, 2021, 12:56 PM IST
ಉಪ್ಪಿನಂಗಡಿ: ಮನೆ ದರೋಡೆಗೆ ವಿಫಲಯತ್ನ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕು ತನ್ನಿರುಪಂತ ಗ್ರಾಮದಲ್ಲಿ ನಡೆದಿದೆ.
ತಣ್ಣೀರುಪಂಥ ಗ್ರಾಮದ ಜನತಾ ಕಾಲೋನಿಯ ಫಾರೂಕ್ ಮನೆಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ.
ಮನೆಯ ಯಜಮಾನ ಫಾರೂಕ್ ಅವರು ಮಸೀದಿಯಲ್ಲಿ ಕಾರ್ಯಕ್ರಮವಿದ್ದ ಕಾರಣ ರಾತ್ರಿ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರು ಮಹಡಿ ಏರಿ ಮನೆಯ ಹಂಚು ಸರಿಸುವ ಯತ್ನ ಮಾಡಿದ್ದಾರೆ. ಕಳ್ಳರು ಹಂಚು ಸರಿಸುವಾಗ ಪಕ್ಕಾಸು ಮುರಿದು ಸದ್ದಾಗಿದೆ. ಮನೆಯಲ್ಲಿ ಮಕ್ಕಳ ಜೊತೆ ಮಲಗಿದ್ದ ಫಾರೂಕ್ ಅವರ ಪತ್ನಿಗೆ ಸದ್ದು ಕೇಳಿಸಿ ಎಚ್ಚರವಾಗಿದೆ.
ಇದನ್ನೂ ಓದಿ:ಮನ್ಸೂಖ್ ಕೊಲೆ ಪ್ರಕರಣ ಭೇದಿಸಿದ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್
ಪತ್ನಿ ಲೈಟ್ ಹಾಕಿ ಕೂಗಿಕೊಂಡಾಗ ಕಳ್ಳರು ಓಡಿ ಹೋಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಆದರೆ ಸುತ್ತಮುತ್ತಲಿನ ಕರಾಯ ಕಲ್ಲೇರಿ ಕುಪ್ಪೆಟ್ಟಿ ತುರ್ಕಲಿಕೆ ಮುಂತಾದ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮನೆಗಳ್ಳತನ ನಡೆಯುತ್ತಿದೆ. ದೂರು ನೀಡಿದ್ದರೂ ಕಳ್ಳತನದ ಪ್ರಕರಣಗಳು ನಿಂತಿಲ್ಲ.
ಇದನ್ನೂ ಓದಿ: ನೇತ್ರಾವತಿ ಸೇತುವೆಯಲ್ಲಿ ಕಾರು- ರಿಕ್ಷಾ ಅಪಘಾತ: ರಿಕ್ಷಾ ಚಾಲಕ ದಾರುಣ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ