ಎಂಡೋ ಸಂತ್ರಸ್ತ ಮಕ್ಕಳ ಕೈಯಲ್ಲಿ ಅರಳುವ ಕರಕುಶಲತೆ

ಉಜಿರೆ ಸಾನಿಧ್ಯ ಕೌಶಲ ತರಬೇತಿ ಕೇಂದ್ರ

Team Udayavani, Nov 28, 2021, 5:34 AM IST

ಎಂಡೋ ಸಂತ್ರಸ್ತ ಮಕ್ಕಳ ಕೈಯಲ್ಲಿ ಅರಳುವ ಕರಕುಶಲತೆ

ಬೆಳ್ತಂಗಡಿ: ಈಗಿನ ಶಿಕ್ಷಣ ವ್ಯವಸ್ಥೆ ಕೇವಲ ವಿದ್ಯೆಯನ್ನು ಮಾತ್ರ ನೀಡುತ್ತಿದೆ. ಕೌಶಲವುಳ್ಳ ಯುವ ಜನಾಂಗ ವನ್ನು ತಯಾರು ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇದಕ್ಕೆ ಅಪವಾದವಾಗುವ ರೀತಿಯ ಉದಾಹರಣೆ ಇಲ್ಲಿದೆ.

ಕೌಶಲವುಳ್ಳ ಶಿಕ್ಷಣ ದೊರೆತಾಗ ಅಂಗವಿಕಲರೂ ವಿಶೇಷ ಚೇತನರಾಗುವರು ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ಉಜಿರೆ ಎಂಡೋಸಲ್ಫಾನ್‌ ಮಕ್ಕಳ ಆರೈಕೆ ಕೇಂದ್ರ ಸಾನಿಧ್ಯ ಕೌಶಲ ತರಬೇತಿ ಕೇಂದ್ರ ಸಾಕ್ಷಿ.

ದ.ಕ. ಹಾಗೂ ಕಾಸರಗೋಡು ಸೇರಿದಂತೆ ಎಂಡೋಸಲ್ಫಾನ್‌ ಎಂಬ ಪೆಟಂಭೂತಕ್ಕೆ ಸಿಲುಕಿ ಅದೆಷ್ಟೋ ಸಾವಿರಾರು ಮಕ್ಕಳು ಹುಟ್ಟು ನ್ಯೂನತೆಗೊಳಗಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಸಂಪೂರ್ಣ ಬುದ್ಧಿಮಾಂದ್ಯತೆ ಅವರನ್ನು ಬಲಿ ಪಡೆದಿಲ್ಲ, ವಿಶೇಷ ಕೌಶಲಗಳು ಅವರಲ್ಲಿದೆ. ಇದನ್ನು ಸಾನಿಧ್ಯ ಕೇಂದ್ರದಲ್ಲಿ ಗುರುತಿಸಲಾಗುತ್ತದೆ.

ಉಜಿರೆ ಸಾನಿಧ್ಯ ಕೌಶಲ ತರಬೇತಿ ಕೇಂದ್ರ 2019 ಜನವರಿ 7ರಂದು 4, 5 ಮಕ್ಕಳಿಂದ ಆರಂಭಗೊಂಡು ಇಂದಿಗೆ 52 ಮಕ್ಕಳ ದಾಖಲಾತಿವರೆಗೆ ಮುನ್ನಡೆಯುತ್ತಿದೆ. ವಿಶೇಷ ತರಬೇತಿ ಪಡೆದ ಮೂವರು ವಿಶೇಷ ಶಿಕ್ಷಕಿಯರು ಮಕ್ಕಳ ಕಲೆಯನ್ನು ಅರಳಿಸಲು ಶ್ರಮಿಸುತ್ತಿದ್ದಾರೆ. ಉಜಿರೆ ಯಿಂದ 15 ಕಿ.ಮಿ. ವ್ಯಾಪ್ತಿಯ 6 ವರ್ಷದಿಂದ 36 ವರ್ಷ ವಯೋಮಾನದ ಮಕ್ಕಳು ಈ ಕೇಂದ್ರದಲ್ಲಿದ್ದು, 6ರಿಂದ 8 ವರ್ಷ, 9ರಿಂದ 13, 14ರಿಂದ 16, 18 ವರ್ಷ ವಯಸ್ಸಿನವರಿಗೆವರೆಗೆ ಒಂದು ತರಗತಿ, 18ರ ವಯೋಮಾನದ ಮೇಲಿನ ಮಕ್ಕಳ ಕರಕುಶಲ ತಯಾರಿಗೆಂದು ವಿಶೇಷ ತರಗತಿ ನಡೆಸಲಾಗುತ್ತಿದೆ.

ಇದನ್ನೂ ಓದಿ:ಬೇಕರಿಯ ಆಹಾರದ ಶುಚಿತ್ವವನ್ನು ಪರಿಶೀಲಿಸಿದ ಅಧಿಕಾರಿ

ಕ್ರಾಫ್ಟ್‌ ತಯಾರಿ ವಿಶೇಷತೆ
ಹೆಲೆನ್‌ ಮತ್ತು ಹೇಮಾವತಿ ಮಕ್ಕಳಿಗೆ ಕರ ಕುಶಲತೆ ಬೋಧನೆ ನೀಡುತ್ತಿದ್ದಾರೆ. ಇವರ ಕೈಯಿಂದ ಪ್ರತಿನಿತ್ಯ ಅರಳುವ ಕಲಾಕೃತಿ ನಿಜಕ್ಕೂ ಅದ್ಭುತ. ಪರಿಣತ ಮಕ್ಕಳು ಬಾಸ್ಕೆಟ್‌ ತಯಾರಿ, ಬಟ್ಟೆ ಹಾಗೂ ಫೈಬರ್‌ನಿಂದ ಟಿಫಿನ್‌ ಬ್ಯಾಗ್‌, ಪೇಪರ್‌, ನೆಟ್‌ ಫÉವರ್‌, ಹಳೆ ಬಟ್ಟೆಯಿಂದ ಮ್ಯಾಟ್‌, ಉಲನ್‌ ಟೋಪಿ, ಮುತ್ತಿನ ಸರ ಇತ್ಯಾದಿಗಳನ್ನು ಅಚ್ಚುಕಟ್ಟಾಗಿ ತಯಾರಿಸುತ್ತಾರೆ.

ಮಾರಾಟಕ್ಕೂ ವ್ಯವಸ್ಥೆ
ಎಂಡೋಸಲ್ಫಾನ್‌ ಬಾಧಿತ ಮಕ್ಕಳ ಕೈಯಿಂದ ಅರಳಿದ ಕರಕುಶಲಕ್ಕೆ ಕೌಶಲ ಕೇಂದ್ರದಿಂದಲೇ ಮಾರುಕಟ್ಟೆ ಸಿದ್ಧಪಡಿಸಲಾಗುತ್ತದೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಜಾತ್ರೆ ಸಂದರ್ಭ ದೇವಸ್ಥಾನದಿಂದ ಉಚಿತ ಸ್ಟಾಲ್‌ ಒದಗಿಸಲಾಗುತ್ತಿದೆ. ಜತೆಗೆ ಸಾನಿಧ್ಯ ಕೇಂದ್ರಕ್ಕೆ ಭೇಟಿ ನೀಡುವವರು ವಸ್ತುಗಳನ್ನು ಖರೀದಿಸುತ್ತಾರೆ. ಇದರಿಂದ ಬಂದ ಲಾಭದಿಂದ ಮಕ್ಕಳಿಗೆ ಮಂಗಳೂರಿನಿಂದ ಕ್ರಾಫ್ಟ್‌ ತಯಾರಿಗೆ ಬೇಕಾದ ಸಿದ್ಧವಸ್ತುಗಳನ್ನು ಖರೀದಿಸಲಾಗುತ್ತದೆ.

ಪ್ರದರ್ಶನ
ಎಂಡೋಸಲ್ಫಾನ್‌ ಬಾಧಿತ ಮಕ್ಕಳ ಪಾಲನೆ ಸವಾಲಿನ ಕೆಲಸ. ಸರಕಾರದ ಅನುದಾನ, ದಾನಿಗಳ ನೆರವಿನಿಂದಲೂ ಕೇಂದ್ರ ಮುನ್ನಡೆಯುತ್ತಿದೆ. ಪ್ರತೀ ವರ್ಷ ಮಾರ್ಚ್‌ನಲ್ಲಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆಯುವ ಸಾನಿಧ್ಯ ಉತ್ಸವದಲ್ಲಿ ಮಕ್ಕಳ ಕರಕುಶಲ ವಸ್ತುಗಳ ಪ್ರದರ್ಶನ ನಡೆಸಲಾಗುತ್ತಿದೆ.
-ಡಾ| ವಸಂತ್‌ ಕುಮಾರ್‌ ಶೆಟ್ಟಿ, ಆಡಳಿತಾ ಕಾರಿ, ಸಾನಿಧ್ಯ ಸಮೂಹ ಸಂಸ್ಥೆ ಮಂಗಳೂರು.

ವಿಶೇಷ ತರಬೇತಿ
ವಿಶೇಷ ಮಕ್ಕಳ ಶಿಕ್ಷಣಕ್ಕೆ ಬೇಕಾಗಿರುವುದು ತಾಳ್ಮೆ ಮತ್ತು ಸಮರ್ಪಣಾಭಾವ. ದೈನಂದಿನ ಕಾರ್ಯಚಟುವಟಿಕೆ, ಸೂಕ್ಷ್ಮ ಚಲನೆ, ದೊಡ್ಡ ಮಟ್ಟದ ಚಲನವಲನ, ಬಟ್ಟೆ ಧರಿಸುವುದರಿಂದ ಹಿಡಿದು ಪ್ರತಿ ದೈನಂದಿನ ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ. ಹಂತ ಹಂತದ ತರಬೇತಿ ನೀಡಿ ಉತ್ತೇಜಿಸಿದಲ್ಲಿ ಮಕ್ಕಳ ಜ್ಞಾಪಕಶಕ್ತಿ ವೃದ್ಧಿಸಲಿದೆ.
-ಜೋಸ್ಫಿನಾ ಪಿ.ಟಿ.,
ಮೇಲ್ವಿಚಾರಕಿ,ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಉಜಿರೆ

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.