ಶಿಶಿಲ: ಕಪಿಲಾ ನದಿ ಸ್ವಚ್ಛತಾ ಅಭಿಯಾನ
80 ಸ್ವಯಂಸೇವಕರಿಂದ 100ಕ್ಕೂ ಅಧಿಕ ಮರ, ತ್ಯಾಜ್ಯ ತೆರವು
Team Udayavani, May 19, 2020, 5:38 AM IST
ಬೆಳ್ತಂಗಡಿ: ಶಿಶಿಲೇಶ್ವರ ದೇವರ ಸನ್ನಿಧಾನದಲ್ಲಿ ಹರಿಯುವ ಜೀವನದಿ ಕಪಿಲೆಯಲ್ಲಿ ಕಳೆದ ವರ್ಷ ಪ್ರವಾಹ ಎರಗಿದ್ದರಿಂದ ಕಿಂಡಿ ಅಣೆಕಟ್ಟು ಸಹಿತ ನದಿ ಪಾತ್ರದಲ್ಲಿ ತುಂಬಿದ್ದ ಮರಗಳು ಹಾಗೂ ತ್ಯಾಜ್ಯವನ್ನು ಅರಣ್ಯ ಇಲಾಖೆ ಸಹಯೋಗದೊಂದಿಗೆ ಶಿಶಿಲೇಶ್ವರ ಭಕ್ತ ವೃಂದ, ಯುವಕ ಮಂಡಲದ ಸಹಾಯದಿಂದ ಸುಮಾರು 80 ಮಂದಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರು.
ಶಿಶಿಲೇಶ್ವರನ ಸನ್ನಿಧಿಯ ಸಮೀಪದ ಕಿಂಡಿ ಅಣೆಕಟ್ಟಿನಲ್ಲಿ ಮರದ ದಿಮ್ಮಿಗಳು ಸೇರಿವೆ. ಮಳೆಗಾಲಕ್ಕೆ ಮುನ್ನ ತೆರವುಗೊಳಿಸದೇ ಹೋದಲ್ಲಿ ಮತ್ತಷ್ಟು ಸಮಸ್ಯೆಯಾಗಬಹುದೆಂದು ಮನಗಂಡು ಗ್ರಾಮಸ್ಥರು ಜತೆ ಸೇರಿ ಚಿಕ್ಕಮಗಳೂರು ಅರಣ್ಯ ಪ್ರದೇಶದ ಗಡಿ ಭಾಗದಲ್ಲಿರುವ ಹೊಳೆಗಂಡಿ ಎಂಬಲ್ಲಿಂದ ಪ್ರಾರಂಭಿಸಿ ಶಿಶಿಲ ದೇವಸ್ಥಾನದವರೆಗೆ 8 ಕಿ.ಮೀ. ದೂರ ನದಿ ಸ್ವಚ್ಛಗೊಳಿಸಲಾಯಿತು.
100ಕ್ಕೂ ಹೆಚ್ಚು ಮರ ತೆರವುಗೊಳಿಸುವ ಜತೆಗೆ, 10 ಚೀಲಗಳಷ್ಟು ಮದ್ಯದ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕಪಿಲಾ ನದಿ ಸ್ವಚ್ಛತಾ ಅಭಿಯಾನ ಯಶಸ್ವಿಗೊಳಿಸಿದ್ದಾರೆ.ಅರಣ್ಯಾಧಿಕಾರಿ ಪ್ರಶಾಂತ್, ಅರಣ್ಯ ರಕ್ಷಕರಾದ ನಾಗಲಿಂಗ, ಸುನಿಲ್, ನಾಗಪ್ಪ ಸಹಕರಿಸಿದರು. ಸ್ವಚ್ಛತಾ ಕಾರ್ಯ ನಡೆಸಿದವರಿಗೆ ಶಿಶಿಲ ಪಂಚಾಯತ್ ವತಿಯಿಂದ ಮಾಸ್ಕ್ ಪೂರೈಸಲಾಗಿತ್ತು.
ಶಾಸಕರಿಂದ ಪರಿಶೀಲನೆ
ಸ್ವಚ್ಛತಾ ಕಾರ್ಯ ಮಾಹಿತಿ ತಿಳಿದು ಶಾಸಕ ಹರೀಶ್ ಪೂಂಜ ಸ್ಥಳಕ್ಕಾಗಮಿಸಿ ಗ್ರಾಮಸ್ಥರನ್ನು ಅಭಿನಂದಿಸಿ ಶಿಶಿಲೇಶ್ವರ ದೇವಸ್ಥಾನದ ಸಮೀಪದ ಕಿಂಡಿ ಅಣೆಕಟ್ಟಿನ ಸ್ಥಳ ಪರಿಶೀಲಿಸಿ ಮಳೆಗಾಲದ ಮುನ್ನ ಕಸಕಡ್ಡಿ ತೆರವಿಗೆ ಹಿಟಾಚಿ ನಿಯೋಜಿಸುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ