ಹಾಸಿಗೆ ಹಿಡಿದ ರೋಗಿಗಳಿಗೆ ಸೋಲಾರ್‌ ಬೆಡ್‌ ವರದಾನ


Team Udayavani, Jul 30, 2021, 9:00 AM IST

ಹಾಸಿಗೆ ಹಿಡಿದ ರೋಗಿಗಳಿಗೆ ಸೋಲಾರ್‌ ಬೆಡ್‌ ವರದಾನ

ಬೆಳ್ತಂಗಡಿ:  ಜೀವನೋ ಪಾಯಕ್ಕೆ ನಾನಾ ವೃತ್ತಿ ಆಯ್ಕೆ ಮಾಡುವ ಮಂದಿ ಬೆನ್ನುಹುರಿ ಆಘಾತಕ್ಕೊಳಗಾಗಿ ಹಾಸಿಗೆ ಹಿಡಿದಲ್ಲಿ ಅದು ನರಕಯಾತನೆಯೇ ಸರಿ. ಇದೀಗ ಅಂತಹ ಮಂದಿಗೆ ಸೋಲಾರ್‌ ಬೆಡ್‌ ಎಂಬ ಆವಿಷ್ಕಾರ ವರದಾನವಾಗಿದೆ.

ಬೆನ್ನುಮೂಳೆ ಮುರಿತಕ್ಕೊಳಗಾದವರು ಹಾಸಿಗೆಗೆ ಸೀಮಿತವಾದಾಗ ಮಾನಸಿಕವಾಗಿ ಕುಗ್ಗಿ ಹೋಗುವುದು ಸಹಜ. ಆರೈಕೆಯಲ್ಲಿ ಉಂಟಾಗುವ ಲೋಪ, ಉಪಚಾರದಲ್ಲಿನ ನಿರ್ಲಕ್ಷéದಿಂದ ಬೆನ್ನಿನ ಹಿಂಭಾಗಕ್ಕೆ ಒತ್ತಡ ಬಿದ್ದು ಚರ್ಮದಲ್ಲಿ ಹುಣ್ಣು ಉಂಟಾಗುತ್ತದೆ. ಹೀಗಿರುವಾಗ ಸೋಲಾರ್‌ ಬೆಡ್‌ನ‌ಲ್ಲಿರುವ ಉಬ್ಬು ತಗ್ಗುಗಳು ಗಾಳಿ ಸಂಚರಿಸುವಂತೆ ಮಾಡುತ್ತವೆ. ವಿದ್ಯುತ್‌ ಅವಲಂಬನೆಯಿಲ್ಲದೆ, ಸೂರ್ಯನ ಶಕ್ತಿಯಿಂದಲೇ ಇದು ಕಾರ್ಯಾ ಚರಿಸುತ್ತದೆ.

ಏನಿದು ಸೋಲಾರ್‌ ಬೆಡ್‌?:

ಅಂಗವೈಕಲ್ಯತೆ ಹೊಂದಿರುವವರ ನೆರವಿಗೆ ಧಾವಿಸುವ ಬೆಂಗಳೂರಿನ ಎಪಿಡಿ (The Association Of People With Disability)ಸಂಸ್ಥೆ ನೆರವಿನಿಂದ ಬೆಳ್ತಂಗಡಿ ಸೇವಾಭಾರತಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಸೆಲ್ಕೊ ಸೋಲಾರ್‌ ಸಂಸ್ಥೆಯು ಸೋಲಾರ್‌ ಬೆಡ್‌ ಅವಿಷ್ಕರಿಸಿದೆ.

ಇದನ್ನು ಜಿಲ್ಲೆಯ ಇಬ್ಬರಿಗೆ ಉಚಿತವಾಗಿ ನೀಡಲಾಗಿದ್ದು, ಹೆಚ್ಚುವರಿ 8 ಮಂದಿಗೆ ಉಚಿತವಾಗಿ ನೀಡಲು ಮುಂದಾಗಿದೆ.ವಾಟರ್‌ ಬೆಡ್‌ ಮಾದರಿಯಲ್ಲಿರುವ ಸೋಲಾರ್‌ ಬೆಡ್‌ ಸೌರಶಕ್ತಿಯಿಂದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.

ಬೆಡ್‌ನ‌ಲ್ಲಿ ಬಬಲ್‌ಗ‌ಳಂತ ರಚನೆಯಿದ್ದು, ಗಾಳಿ ಸಂಯೋಜಿಸುತ್ತದೆ. ಬಬಲ್‌ಗ‌ಳು ವಾಯು ಆವರ್ತನಗೊಳ್ಳುವುದರಿಂದ ಚರ್ಮದ ಹುಣ್ಣು, ಗಾಯವಾದಲ್ಲಿ ಅದು ಉಲ್ಬಣಗೊಳ್ಳದಂತೆ ತಡೆಯಲು ಈ ಬೆಡ್‌ ಸಹಕಾರಿ.

ಸೇವಾಭಾರತಿ ಸರ್ವೇ ನಡೆಸಿದಂತೆ ದ.ಕ., ಉಡುಪಿ, ಕೊಡಗು ಜಿಲ್ಲೆ ಸೇರಿ ಸುಮಾರು 310 ಮಂದಿ ಬೆನ್ನು ಹುರಿ ಘಾಸಿಗೊಳಗಾಗಿ ಹಾಸಿಗೆ ಹಿಡಿದವರಿದ್ದಾರೆ. ಈ ಪೈಕಿ ಮೂಡಿಗೆರೆ ತಾಲೂಕಿನ ಬನಕಲ್‌ ಸೋಮೇಶ್‌ ಬನಕಲ್‌ ಮತ್ತು ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಶೀನ ನಾಯ್ಕ ಅವರಿಗೆ ಏರ್‌ಬೆಡ್‌ ನೀಡಲಾಗಿದೆ. ಉಳಿದಂತೆ 8 ಮಂದಿಗೆ ನೀಡುವ ಸಲುವಾಗಿ ಎಪಿಡಿ ಸಂಸ್ಥೆಯ ಸೂಚನೆಯಂತೆ ಸೆಲ್ಕೋ ಸೋಲಾರ್‌ ಸಂಸ್ಥೆಯು ಬೆಡ್‌ ಸಿದ್ಧಪಡಿಸುತ್ತಿದೆ. ಸೋಲಾರ್‌ ಪ್ಯಾನಲ್‌ ಬ್ಯಾಟರಿ ಸೇರಿ 45,000 ರೂ. ವೆಚ್ಚ ತಗಲಲಿದ್ದು, 5 ವರ್ಷ ವಾರೆಂಟಿಯೂ ನೀಡಲಾಗುತ್ತದೆ.

ಜೀವನಾಧಾರಿತ ಯಂತ್ರಗಳ ಕೊಡುಗೆ :

ಎಪಿಡಿ ವತಿಯಿಂದ ಬಾರ್ಕೂರು ದಿನೇಶ್‌ ಶೆಟ್ಟಿ, ಜಗದೀಶ್‌ ಕನ್ಯಾಡಿ ಅವರಿಗೆ ಭತ್ತಿ ತಯಾರಿಸುವ ಯಂತ್ರ, ಸೇವಾಭಾರತಿ ಅಧ್ಯಕ್ಷ ಕನ್ಯಾಡಿ ವಿನಾಯಕ್‌ ರಾವ್‌ ಅವರಿಗೆ ಅಡಿಕೆ ಸುಲಿವ ಯಂತ್ರ ನೀಡಲಾಗಿದೆ. ಭತ್ತಿ ತಯಾರಿಸುವ ಯಂತ್ರ,  1 ಕಿ.ವ್ಯಾಟ್‌ ಸಾಮರ್ಥ್ಯದ ಇನ್ವರ್ಟರ್‌ ಒದಗಿಸಲಾಗಿದ್ದು, ಸೊÌàದ್ಯೋಗಕ್ಕೊಂದು ಶಕ್ತಿ ನೀಡಲಾಗಿದೆ.

ಬೆನ್ನುಹುರಿ ಮುರಿತಕ್ಕೊಳಗಾದ ಹೆಚ್ಚಿನ ಮಂದಿ ಮೊಣಕಾಲಿಂದ ಸ್ವಾಧೀನ ಕಳೆದುಕೊಂಡವರಿದ್ದಾರೆ. ಇಂತಹವರಿಗೆ ಸೆಲ್ಕೊ ಸಂಸ್ಥೆ ನೆರವಿನಿಂದ ದೀಪದ ಭತ್ತಿ ತಯಾರಿಸುವ ಸೋಲಾರ್‌ ಯಂತ್ರ, ಅಡಿಕೆ ಸುಲಿಯುವ ಯಂತ್ರ ಸಿದ್ಧಪಡಿಸಲಾಗುತ್ತಿದೆ. ಮುಂದೆ ದಾನಿಗಳ ಸಹಕಾರವಿದ್ದಲ್ಲಿ ಮತ್ತಷ್ಟು ಜೀವನಾಧಾರಿತ ಸೋಲಾರ್‌ ಉಪಕರಣ ಆವಿಷ್ಕರಿಸಲು ಸಂಸ್ಥೆ ನೆರವಾಗಲಿದೆ ಎಂದು ಬೆಂಗಳೂರು ಸೆಲ್ಕೊ  ಸಂಸ್ಥೆ ಸೀನಿಯರ್‌ ಮ್ಯಾನೇಜರ್‌ ಸಂಜಿತ್‌ ರೈ ತಿಳಿಸಿದ್ದಾರೆ.

ನನಗೆ 48 ವರ್ಷ ವಯಸ್ಸು. 10 ವರ್ಷದ ಹಿಂದೆ ತೆಂಗಿನ ಮರದಿಂದ ಬಿದ್ದು ಬೆನ್ನುಹುರಿಗೆ ಗಾಯವಾಗಿದೆ. ಮೊಣಕಾಲು ಕೆಳಗೆ ಬಲವಿಲ್ಲದಂತಾಗಿದ್ದು ದಾನಿಗಳ ನೆರವಿಂದ ಸಿಕ್ಕಿದ ಸೋಲಾರ್‌ ಬೆಡ್‌ನಿಂದಾಗಿ ಗಾಯ ವಾಸಿಯಾಗುತ್ತಿದೆ. -ಶೀನಾ ನಾಯ್ಕ, ಹೊಸಕಾಪು ದರ್ಖಾಸು ಮನೆ, ಮುಂಡಾಜೆ 

ಬೆನ್ನುಹುರಿ ಗಾಯ ಆದವರಿಗೆ ಚಿಕಿತ್ಸೆಗಿಂತ ಹೆಚ್ಚು ಸಮರ್ಪಕ ಆರೈಕೆ ಅತ್ಯವಶ್ಯ. ಇದಕ್ಕೆ ಸೋಲಾರ್‌ ಬೆಡ್‌ ಪರಿಣಾಮಕಾರಿಯಾಗಲಿದೆ. ಸೆ. 5 ಅಂತಾರಾಷ್ಟ್ರೀಯ ಬೆನ್ನುಹುರಿ ಅಪಘಾತ ದಿನಾಚರಣೆ ನಡೆಯಲಿದ್ದು, ದಾನಿಗಳು ಇಂತಹ ಅನೇಕ ಮಂದಿಗೆ ನೆರವಾಗಲಿ. -ವಿನಾಯಕ್‌ ರಾವ್‌ ಕನ್ಯಾಡಿ, ಅಧ್ಯಕ್ಷರು, ಸೇವಾಭಾರತಿ, ಕನ್ಯಾಡಿ 

 

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.