ಸೋಣಂಗೇರಿ-ಪೈಚಾರು ರಸ್ತೆ: ಸಂಚರಿಸುವಾಗ ಎಚ್ಚರ!
Team Udayavani, May 11, 2020, 5:40 AM IST
ಸುಳ್ಯ: ಆರು ತಿಂಗಳ ಹಿಂದೆ ಕುಸಿದಿರುವ ಸುಳ್ಯ- ಸುಬ್ರಹ್ಮಣ್ಯ ಸಂಪರ್ಕದ ಸೋಣಂಗೇರಿ-ಪೈಚಾರು ನಡುವಿನ ರಸ್ತೆಯ ಮೃತ್ಯುಕೂಪಕ್ಕೆ ಅನುದಾನ ಕೊರತೆಯ ನೆಪವೊಡ್ಡಿ ದುರಸ್ತಿ ಕಾರ್ಯ ನಡೆದಿಲ್ಲ!
ಕಳೆದ ಡಿಸೆಂಬರ್ನಲ್ಲಿ ಸೋಣಂಗೇರಿ ಬಳಿ ಹೊಸಗದ್ದೆ ತಿರುವಿನ ಮುಖ್ಯ ರಸ್ತೆಯ ಬದಿ ಕುಸಿದು, ರಸ್ತೆ ಸಂಚಾರಕ್ಕೆ ಆತಂಕ ಎದುರಾಗಿತ್ತು.
30 ಅಡಿ ಆಳದಲ್ಲಿರುವ ತೋಟಕ್ಕೆ ರಸ್ತೆ ಬದಿಯ ಮಣ್ಣು ಕುಸಿದ ಪರಿಣಾಮ ಡಾಮರು ರಸ್ತೆಯೇ ಅಪಾಯಕ್ಕೆ ಈಡಾಗಿತ್ತು. ಲೋಕೋಪಯೋಗಿ ಇಲಾಖೆ ಬ್ಯಾರಿಕೇಡ್ ಇರಿಸಿ ಕ್ರಮ ಕೈಗೊಂಡಿತ್ತು.
ಪ್ರಸ್ತಾವನೆ ಹಂತದಲ್ಲೇ ಬಾಕಿ
ಪೈಚಾರು-ಸೋಣಂಗೇರಿ ರಸ್ತೆ ವಿಸ್ತರಣೆಯೊಂದಿಗೆ ಅಭಿವೃದ್ಧಿ ಪಡಿಸಲು 5 ಕೋಟಿ ರೂ.ಗಳ ಯೋಜನೆ ಸಿದ್ಧಗೊಳಿಸಲಾಗಿತ್ತು. ಅದರೊಂದಿಗೆ ಕುಸಿದಿರುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲು 50 ಲಕ್ಷ ರೂ.ಗಳ ಪ್ರತ್ಯೇಕ ಪ್ರಸ್ತಾವ ಸಲ್ಲಿಸಿ ಮಳೆಗಾಲ ದೊಳಗೆ ಕಾಮಗಾರಿ ನಡೆಸುವ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳು ತಿಳಿಸಿದ್ದರು. ಆದರೆ ಈ ಎರಡೂ ಅನುದಾನಗಳು ಪ್ರಸ್ತಾವನೆ ಹಂತದಲ್ಲಿ ಬಾಕಿ ಆಗಿದ್ದು, ಅನುದಾನ ಬಿಡುಗಡೆ ಆಗಿಲ್ಲ.
ಮತ್ತಷ್ಟು ಅಪಾಯ
ಈ ಪ್ರದೇಶದಲ್ಲಿ ಮರ,ಗೆಲ್ಲು ರಸ್ತೆಗೆ ಚಾಚಿ ಅಪಾಯ ಆಹ್ವಾನಿಸಿದೆ. ಮಳೆಗಾಲ ಆರಂಭಗೊಂಡಲ್ಲಿ ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆಯ ಇನ್ನೊಂದು ಬದಿಯ ಎತ್ತರದ ಪ್ರದೇಶ ಅಗೆದು ರಸ್ತೆ ಅಗಲಗೊಳಿಸುವ ಪ್ರಯತ್ನ ನಡೆಸಿದ್ದಾರೆ.ಆದರೆ ಶಾಶ್ವತ ವ್ಯವಸ್ಥೆ ಆಗದಿದ್ದರೆ ಪ್ರಯೋಜನ ದೊರೆಯದು ಎನ್ನುತ್ತಾರೆ ಸ್ಥಳೀಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ